AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ […]

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!
ಸಾಧು ಶ್ರೀನಾಥ್​
|

Updated on: May 07, 2020 | 5:56 PM

Share

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ ಈ ಬಾರಿಯೂ ಇರಲಿದೆ ಎನ್ನಲಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ನಿತ್ರಾಣಗೊಂಡಿರುವ ಕೇರಳದಲ್ಲಿ ಈ ಬಾರಿ ಬೇಸಿಗೆ ಮಳೆ ಬೀಳಲಿಲ್ಲ. ಬಿರುಬಿಸಿಲು ಜೋರಾಗಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿಂದ ಕೇರಳದಲ್ಲಿ ವಿಪರೀತ ತಾಪಮಾನ ಮನೆಮಾಡಿದೆ. ದಿನದಲ್ಲಿ 35 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ವೇಳೆ 26 ಡಿಗ್ರಿ ತಾಪಮಾನ ನಿರಂತರವಾಗಿತ್ತು. ಇದರಿಂದ ವಾತಾವರಣ ಮತ್ತಷ್ಟು ಶಾಖದಿಂದ ಕೂಡಿರುತ್ತದೆ. ಹಾಗಾಗಿ ನಿಗದಿಯಂತೆ ಜೂನ್ ಆರಂಭಕ್ಕೆ ವಾಯವ್ಯ ಬೀಸುಗಾಳಿ ಕೇರಳಕ್ಕೆ ಅಪ್ಪಳಿಸಲಿದೆ. ಇದು ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ.

ರಾಜ್ಯದ ದಕ್ಷಿಣ ಮಧ್ಯೆ ಭಾಗದಲ್ಲಿ ಸಮುದ್ರದಲ್ಲಿ ತಾಪಮಾನ ಎಷ್ಟಿದೆ ಎಂಬುದನ್ನು ಆಧರಿಸಿ, ಕೇರಳದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ತಂಪಾದ ವಾತಾವರಣವಿದೆ. ಇದು ಮೋಡಗಳ ಸೃಷ್ಟಿಗೆ ಸಹಾಯಕವಾಗಲಿದೆ. ಆದರೆ ಅದು ಪಶ್ಚಿಮ ಘಟ್ಟಗಳತ್ತ ಸರಿದುಹೋಗುವುದಿಲ್ಲ. ಹಾಗಾಗಿ ಕೇರಳದಲ್ಲಿಯೇ ಧೋ ಎಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ