Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ […]

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!
Follow us
ಸಾಧು ಶ್ರೀನಾಥ್​
|

Updated on: May 07, 2020 | 5:56 PM

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ ಈ ಬಾರಿಯೂ ಇರಲಿದೆ ಎನ್ನಲಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ನಿತ್ರಾಣಗೊಂಡಿರುವ ಕೇರಳದಲ್ಲಿ ಈ ಬಾರಿ ಬೇಸಿಗೆ ಮಳೆ ಬೀಳಲಿಲ್ಲ. ಬಿರುಬಿಸಿಲು ಜೋರಾಗಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿಂದ ಕೇರಳದಲ್ಲಿ ವಿಪರೀತ ತಾಪಮಾನ ಮನೆಮಾಡಿದೆ. ದಿನದಲ್ಲಿ 35 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ವೇಳೆ 26 ಡಿಗ್ರಿ ತಾಪಮಾನ ನಿರಂತರವಾಗಿತ್ತು. ಇದರಿಂದ ವಾತಾವರಣ ಮತ್ತಷ್ಟು ಶಾಖದಿಂದ ಕೂಡಿರುತ್ತದೆ. ಹಾಗಾಗಿ ನಿಗದಿಯಂತೆ ಜೂನ್ ಆರಂಭಕ್ಕೆ ವಾಯವ್ಯ ಬೀಸುಗಾಳಿ ಕೇರಳಕ್ಕೆ ಅಪ್ಪಳಿಸಲಿದೆ. ಇದು ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ.

ರಾಜ್ಯದ ದಕ್ಷಿಣ ಮಧ್ಯೆ ಭಾಗದಲ್ಲಿ ಸಮುದ್ರದಲ್ಲಿ ತಾಪಮಾನ ಎಷ್ಟಿದೆ ಎಂಬುದನ್ನು ಆಧರಿಸಿ, ಕೇರಳದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ತಂಪಾದ ವಾತಾವರಣವಿದೆ. ಇದು ಮೋಡಗಳ ಸೃಷ್ಟಿಗೆ ಸಹಾಯಕವಾಗಲಿದೆ. ಆದರೆ ಅದು ಪಶ್ಚಿಮ ಘಟ್ಟಗಳತ್ತ ಸರಿದುಹೋಗುವುದಿಲ್ಲ. ಹಾಗಾಗಿ ಕೇರಳದಲ್ಲಿಯೇ ಧೋ ಎಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.

ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​