AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ […]

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!
ಸಾಧು ಶ್ರೀನಾಥ್​
|

Updated on: May 07, 2020 | 5:56 PM

Share

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ ಈ ಬಾರಿಯೂ ಇರಲಿದೆ ಎನ್ನಲಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ನಿತ್ರಾಣಗೊಂಡಿರುವ ಕೇರಳದಲ್ಲಿ ಈ ಬಾರಿ ಬೇಸಿಗೆ ಮಳೆ ಬೀಳಲಿಲ್ಲ. ಬಿರುಬಿಸಿಲು ಜೋರಾಗಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿಂದ ಕೇರಳದಲ್ಲಿ ವಿಪರೀತ ತಾಪಮಾನ ಮನೆಮಾಡಿದೆ. ದಿನದಲ್ಲಿ 35 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ವೇಳೆ 26 ಡಿಗ್ರಿ ತಾಪಮಾನ ನಿರಂತರವಾಗಿತ್ತು. ಇದರಿಂದ ವಾತಾವರಣ ಮತ್ತಷ್ಟು ಶಾಖದಿಂದ ಕೂಡಿರುತ್ತದೆ. ಹಾಗಾಗಿ ನಿಗದಿಯಂತೆ ಜೂನ್ ಆರಂಭಕ್ಕೆ ವಾಯವ್ಯ ಬೀಸುಗಾಳಿ ಕೇರಳಕ್ಕೆ ಅಪ್ಪಳಿಸಲಿದೆ. ಇದು ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ.

ರಾಜ್ಯದ ದಕ್ಷಿಣ ಮಧ್ಯೆ ಭಾಗದಲ್ಲಿ ಸಮುದ್ರದಲ್ಲಿ ತಾಪಮಾನ ಎಷ್ಟಿದೆ ಎಂಬುದನ್ನು ಆಧರಿಸಿ, ಕೇರಳದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ತಂಪಾದ ವಾತಾವರಣವಿದೆ. ಇದು ಮೋಡಗಳ ಸೃಷ್ಟಿಗೆ ಸಹಾಯಕವಾಗಲಿದೆ. ಆದರೆ ಅದು ಪಶ್ಚಿಮ ಘಟ್ಟಗಳತ್ತ ಸರಿದುಹೋಗುವುದಿಲ್ಲ. ಹಾಗಾಗಿ ಕೇರಳದಲ್ಲಿಯೇ ಧೋ ಎಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.

Follow Us
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್