ವರ್ಷವಾದ್ರೂ ಉದ್ಘಾಟನೆಯಾಗದ ನೀರಿನ ಘಟಕದ ಯಂತ್ರಗಳು ಆಯ್ತು ಖದೀಮರ ಪಾಲು

ರಾಯಚೂರು: ಗ್ರಾಮಸ್ಥರ ಪಾಲಿಗೆ ನೆರವಾಗ ಬೇಕಿದ್ದ ಶುದ್ಧ ನೀರಿನ ಘಟಕವನ್ನ ಕಳ್ಳರು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟಕದ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಯಂತ್ರಗಳನ್ನು ಕಳ್ಳರು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ವಿಪರ್ಯಾಸವೆಂದರೆ ಘಟಕ ಸ್ಥಾಪಿಸಿ ಒಂದು ವರ್ಷವಾದರೂ ಉದ್ಘಾಟನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ನೆರವಾಗ ಬೇಕಿದ್ದ ನೀರಿನ ಘಟಕ ಕಳ್ಳರ ಪಾಲಾಗಿದೆ.

ವರ್ಷವಾದ್ರೂ ಉದ್ಘಾಟನೆಯಾಗದ ನೀರಿನ ಘಟಕದ ಯಂತ್ರಗಳು ಆಯ್ತು ಖದೀಮರ ಪಾಲು

Updated on: Jun 28, 2020 | 9:57 AM

ರಾಯಚೂರು: ಗ್ರಾಮಸ್ಥರ ಪಾಲಿಗೆ ನೆರವಾಗ ಬೇಕಿದ್ದ ಶುದ್ಧ ನೀರಿನ ಘಟಕವನ್ನ ಕಳ್ಳರು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟಕದ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಯಂತ್ರಗಳನ್ನು ಕಳ್ಳರು ಕದ್ದಿದ್ದಾರೆ ಎಂದು ತಿಳಿದುಬಂದಿದೆ.

ವಿಪರ್ಯಾಸವೆಂದರೆ ಘಟಕ ಸ್ಥಾಪಿಸಿ ಒಂದು ವರ್ಷವಾದರೂ ಉದ್ಘಾಟನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ನೆರವಾಗ ಬೇಕಿದ್ದ ನೀರಿನ ಘಟಕ ಕಳ್ಳರ ಪಾಲಾಗಿದೆ.