AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಬಿಸಾಕಿದ್ದ ಬೀರ್ ಕ್ಯಾನ್​​ ಒಳಗೆ ತಗಲಾಕಿಕೊಂಡ ಹಾವಿನ ರಕ್ಷಣೆ!

ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಅನ್ನು (Beer Can​​) ಯಾಕೆ ಮೂಸಿ ನೋಡಲು ಹೋಯಿತೋ  ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್​​ ಕತ್ತರಿಸಿ […]

ಕುಡಿದು ಬಿಸಾಕಿದ್ದ ಬೀರ್ ಕ್ಯಾನ್​​ ಒಳಗೆ ತಗಲಾಕಿಕೊಂಡ ಹಾವಿನ ರಕ್ಷಣೆ!
Guru
| Edited By: |

Updated on:Aug 10, 2020 | 10:30 AM

Share

ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ.

ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್​​ ಅನ್ನು (Beer Can​​) ಯಾಕೆ ಮೂಸಿ ನೋಡಲು ಹೋಯಿತೋ  ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್​​ ಕತ್ತರಿಸಿ ಹಾವನ್ನು ರಕ್ಷಿಸಿದೆ.

ಹೀಗೆ ರಕ್ಷಣೆ ಮಾಡಿದ ಹಾವನ್ನು, ಯುವ ತಂಡ ಮತ್ತೆ ಕಾಡಿಗೆ ಬಿಟ್ಟು ಪ್ರಾಣಿ ಪ್ರೇಮ ಮೆರೆದಿದೆ. ಸ್ನೇಕ್ ಗಿರೀಶ್ ಮತ್ತು ಅವರ ಸ್ನೇಹಿತರ ಈ ಕಾರ್ಯವನ್ನು ಜನ ಈಗ ಶ್ಲಾಘಿಸುತ್ತಿದ್ದಾರೆ.

Published On - 10:25 am, Mon, 10 August 20