
ಮಂಡ್ಯ: ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ, ರಾಗಿ ಮಾರಾಟದಿಂದ ರೈತನಿಗೆ ಸಿಗಬೇಕಾದ 1.20 ಲಕ್ಷ ಹಣ ಬೇರೊಬ್ಬರ ಖಾತೆಗೆ ಜಮಾವಣೆ ಆಗಿದ್ದು, ತನ್ನ ಪಾಲಿನ ಹಣ ಸಿಗದೇ ರೈತ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಬಸವನಗುಡಿ ಕೊಪ್ಪಲು ಗ್ರಾಮದ ದೊಡ್ಡೇಗೌಡ ಎಂಬುವವರು ರಾಜ್ಯ ಉಗ್ರಾಣ ನಿಗಮದಿಂದ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ 2019-20 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ 38 ರಾಗಿಯನ್ನು ಮಾರಾಟ ಮಾಡಿದ್ದಾರೆ.
ರಾಗಿ ಮಾರಾಟದ ಹಣ ಜಮಾವಣೆಗಾಗಿ ದೊಡ್ಡೇಗೌಡರು ಸೂಕ್ತ ದಾಖಲೆಯನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದು, ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತನಿಗೆ ಬರಬೇಕಾದ ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ.
ಹಣ ಸಿಗದೆ ಕಚೇರಿಯಿಂದ ಕಚೇರಿಗೆ ರೈತನ ಅಲೆದಾಟ
Published On - 1:31 pm, Fri, 24 July 20