ಭಾವಮೈದುನನನ್ನ ರಕ್ಷಿಸಲು ಹೋದ ಭಾವನೂ ನೀರಿನಲ್ಲಿ ಮುಳುಗಿ ಸಾವು

ಮೈಸೂರು: ನೀರಿನಲ್ಲಿ ಮುಳುಗುತ್ತಿರುವ ಭಾವಮೈದುನನ್ನ ರಕ್ಷಿಸಲು ಹೋದ ಭಾವ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು. ಕೆರೆಗೆ ಹಾರಿದ್ದ ಭಾಮೈದುನನ್ನು ರಕ್ಷಿಸಲು ಹೋದ ಭಾವ, ಬಾಮೈದ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಿನ್ನೆ ಸಂಜೆ ನಡೆಯಿದೆ. ಪ್ರಸನ್ನ ತನ್ನ ತಂದೆಯ ಜೊತೆ ಜಗಳ ಮಾಡಿಕೊಂಡು ಕುಪಿತನಾಗಿ ಕೆರೆಗೆ ಹಾರಿದ್ದ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ರಕ್ಷಿಸಲು ಬಾವ ನಿಂಗರಾಜು ಮುಂದಾಗಿದ್ದಾರೆ. […]

ಭಾವಮೈದುನನನ್ನ ರಕ್ಷಿಸಲು ಹೋದ ಭಾವನೂ ನೀರಿನಲ್ಲಿ ಮುಳುಗಿ ಸಾವು
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Nov 03, 2020 | 9:56 AM

ಮೈಸೂರು: ನೀರಿನಲ್ಲಿ ಮುಳುಗುತ್ತಿರುವ ಭಾವಮೈದುನನ್ನ ರಕ್ಷಿಸಲು ಹೋದ ಭಾವ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು.

ಕೆರೆಗೆ ಹಾರಿದ್ದ ಭಾಮೈದುನನ್ನು ರಕ್ಷಿಸಲು ಹೋದ ಭಾವ, ಬಾಮೈದ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಿನ್ನೆ ಸಂಜೆ ನಡೆಯಿದೆ.

ಪ್ರಸನ್ನ ತನ್ನ ತಂದೆಯ ಜೊತೆ ಜಗಳ ಮಾಡಿಕೊಂಡು ಕುಪಿತನಾಗಿ ಕೆರೆಗೆ ಹಾರಿದ್ದ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ರಕ್ಷಿಸಲು ಬಾವ ನಿಂಗರಾಜು ಮುಂದಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುರಿತ ಈಜುಪಟುಗಳು ಕೆರೆಯಿಂದ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.

Published On - 9:53 am, Tue, 3 November 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us