ಕೊರೊನಾ ಜನರ ಉಸಿರುಗಟ್ಟಿಸಿದ್ರೆ, ಬಿಜೆಪಿಗರು ಅಧಿಕಾರಿಗಳ ಉಸಿರುಗಟ್ಸಿದ್ದಾರೆ -ಖಾದರ್ ಕಿಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಮಾಡಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಕ್ಕೆ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಹಾಕಿದವರನ್ನ ಶಿಕ್ಷಿಸೋ ಬದಲು ಸರ್ಕಾರ ಡಿಸಿಯವರಿಗೆ ಶಿಕ್ಷೆ ನೀಡಿದೆ. ಇಂಥಹ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬಬೇಕಿತ್ತು. ಆದ್ರೆ ಇಲ್ಲಿನ ಬಿಜೆಪಿ ಮುಖಂಡರು ರಾಜಕೀಯ ಮೇಲಾಟವಾಡುತ್ತಿದ್ದಾರೆ. ಕೊರೊನಾ ಜನರ ಉಸಿರುಗಟ್ಟಿಸಿದ್ರೆ, ಬಿಜೆಪಿಗರು ಅಧಿಕಾರಿಗಳ […]

ಕೊರೊನಾ ಜನರ ಉಸಿರುಗಟ್ಟಿಸಿದ್ರೆ, ಬಿಜೆಪಿಗರು ಅಧಿಕಾರಿಗಳ ಉಸಿರುಗಟ್ಸಿದ್ದಾರೆ -ಖಾದರ್ ಕಿಡಿ
ಆಯೇಷಾ ಬಾನು Edited By:

Updated on: Jul 30, 2020 | 8:45 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಮಾಡಿದ್ದಾರೆ.

ನೈತಿಕ ಪೊಲೀಸ್ ಗಿರಿ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಕ್ಕೆ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಹಾಕಿದವರನ್ನ ಶಿಕ್ಷಿಸೋ ಬದಲು ಸರ್ಕಾರ ಡಿಸಿಯವರಿಗೆ ಶಿಕ್ಷೆ ನೀಡಿದೆ. ಇಂಥಹ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬಬೇಕಿತ್ತು. ಆದ್ರೆ ಇಲ್ಲಿನ ಬಿಜೆಪಿ ಮುಖಂಡರು ರಾಜಕೀಯ ಮೇಲಾಟವಾಡುತ್ತಿದ್ದಾರೆ.

ಕೊರೊನಾ ಜನರ ಉಸಿರುಗಟ್ಟಿಸಿದ್ರೆ, ಬಿಜೆಪಿಗರು ಅಧಿಕಾರಿಗಳ ಉಸಿರುಗಟ್ಟಿಸಿದ್ದಾರೆ. ಉತ್ತರಿಸು ಸರ್ಕಾರ, ನ್ಯಾಯ ಎಲ್ಲಿದೆ? ಎಂದು ಟ್ವಿಟರ್​ನಲ್ಲಿ ಡಿಸಿ ವರ್ಗಾವಣೆ ವಿರುದ್ಧ ಖಾದರ್ ಖಂಡನೆ ವ್ಯಕ್ತಪಡಿಸಿದ್ದಾರೆ.

Published On - 10:32 am, Wed, 29 July 20

Loading...
Unable to load recommendations.
Follow Us