ಸೀಜ್ ವಾಹನ ಪಡೆಯಲು ಕೋರ್ಟ್​ಗೆ ಹೋಗಬೇಕಿಲ್ಲ! ಮತ್ತೆಲ್ಲಿ, ಯಾವಾಗ ಪಡೆಯಬೇಕು?

ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಸಮರದಲ್ಲಿ ಲಾಕ್​ ಡೌನ್​ ಜಾರಿಯಲ್ಲಿದ್ದಾಗ ಜಾಲಿ ರೈಡ್​ ಮಾಡುತ್ತಾ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು, ವಾಹನ ಸೀಜ್​ ಮಾಡಿಸಿಕೊಂಡಿದ್ದ ವಾಹನ ಮಾಲೀಕರಿಗೆ ಹೈಕೋರ್ಟ್ ಸಮಾಧಾನಕರ ಆದೇಶ ನೀಡಿದೆ. ಲಾಕ್ ಡೌನ್ ಅವಧಿಯಲ್ಲಿ ಸೀಜ್ ಆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿದ ಹೈಕೋರ್ಟ್ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 500 ದಂಡ, ನಾಲ್ಕು ಚಕ್ರ ವಾಹನಗಳಿಗೆ ರೂ. 1000 ದಂಡ ಕಟ್ಟಿಸಿಕೊಳ್ಳುವುದು ಜತೆಗೆ ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ. […]

ಸೀಜ್ ವಾಹನ ಪಡೆಯಲು ಕೋರ್ಟ್​ಗೆ ಹೋಗಬೇಕಿಲ್ಲ! ಮತ್ತೆಲ್ಲಿ, ಯಾವಾಗ ಪಡೆಯಬೇಕು?
ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು
ಸಾಧು ಶ್ರೀನಾಥ್​

Updated on: Apr 30, 2020 | 3:55 PM

ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಸಮರದಲ್ಲಿ ಲಾಕ್​ ಡೌನ್​ ಜಾರಿಯಲ್ಲಿದ್ದಾಗ ಜಾಲಿ ರೈಡ್​ ಮಾಡುತ್ತಾ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು, ವಾಹನ ಸೀಜ್​ ಮಾಡಿಸಿಕೊಂಡಿದ್ದ ವಾಹನ ಮಾಲೀಕರಿಗೆ ಹೈಕೋರ್ಟ್ ಸಮಾಧಾನಕರ ಆದೇಶ ನೀಡಿದೆ.

ಲಾಕ್ ಡೌನ್ ಅವಧಿಯಲ್ಲಿ ಸೀಜ್ ಆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿದ ಹೈಕೋರ್ಟ್ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 500 ದಂಡ, ನಾಲ್ಕು ಚಕ್ರ ವಾಹನಗಳಿಗೆ ರೂ. 1000 ದಂಡ ಕಟ್ಟಿಸಿಕೊಳ್ಳುವುದು ಜತೆಗೆ ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ.

ಆಯಾ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ವಾಹನ ವಾಪಸ್​:
ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ 35 ಸಾವಿರ ವಾಹನಗಳು ಸೀಜ್ ಮಾಡಲಾಗಿತ್ತು. ಕೋರ್ಟ್ ಗೆ ಅರ್ಜಿ ಸಲ್ಲಿಸಿದರೆ ಜನದಟ್ಟಣೆ ಉಂಟಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಆರ್ ಪಿಸಿ 102(3) ಅಡಿ ವಾಹನ ಬಿಡುಗಡೆಗೆ ತಮಗೇ ಅಧಿಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸರು ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು. ಆಯಾ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳನ್ನು ವಾಪಸ್​ ನೀಡಬಹುದು. ಜೊತೆಗೆ, ಮತ್ತೆ ಲಾಕ್ ಡೌನ್ ಉಲ್ಲಂಘಿಸದಂತೆ ವಾಹನ ಸವಾರರಿಗೆ ಷರತ್ತು ವಿಧಿಸಲು ಸಹ ಹೈಕೋರ್ಟ್ ಸೂಚನೆ ನೀಡಿ, ಇಂದು ಮೇಲಿನ ಆದೇಶ ಹೊರಡಿಸಿದೆ.

ವಾಹನಗಳ ಹಸ್ತಾಂತರ ಪ್ರಕ್ರಿಯೆ ಮೇ 1ರ ನಂತರ ಪ್ರಾರಂಭ
ಬೆಂಗಳೂರಿನಾದ್ಯಂತ ವಶಕ್ಕೆ ಪಡೆದಿದ್ದ ವಾಹನಗಳ ಹಸ್ತಾಂತರ ಪ್ರಕ್ರಿಯೆ ಮೇ 1ರ ನಂತರ ಪ್ರಾರಂಭವಾಗಲಿದೆ. ಈಗಾಗಲೇ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ತಿರುವ ಪೊಲೀಸರು, ವಾಹನ ದಾಖಲೆ ತಂದು ಆಯಾ ಠಾಣೆಗಳಲ್ಲಿ ಪಡೆಯಬೇಕು. ಅಂತರ ಕಾಯ್ದುಕೊಂಡು ವಾಹಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Published On - 3:21 pm, Thu, 30 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us