AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಸೊಸೆಯನ್ನ ಮನೆಯಿಂದ ಹೊರಹಾಕಿದ್ರು!

ಹಾಸನ: ಕೊರೊನಾ ಸೊಂಕು ಹರಡುವ ಭೀತಿಯಿಂದ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಗೆ ಬರದೆ ಎಲ್ಲರು ಮನೆಯಲ್ಲೇ ಇರಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸೊಸೆಯನ್ನು ಮನೆಯಿಂದ ಅತ್ತೆ-ಮಾವ ಹೊರಹಾಕಿರುವ ಘಟನೆ ಬಸಟ್ಟಿಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಅತ್ತೆ ಸುಧಾ, ಮಾವ ರೇವಣ್ಣ ಹಾಗೂ ಅತ್ತಿಗೆ ವಿರುದ್ಧ ಸೊಸೆ ಬಿಂದು ಗಂಭೀರ ಆರೋಪ ಮಾಡಿದ್ದಾರೆ. ಹಾಲು ತರುವಂತೆ ಮನೆಯಿಂದ ಹೊರಗೆ ಕಳುಹಿಸಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆಂದು ಬಿಂದು ಆರೋಪಿಸಿದ್ದಾರೆ. ಹಾಗಾಗಿ […]

ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಸೊಸೆಯನ್ನ ಮನೆಯಿಂದ ಹೊರಹಾಕಿದ್ರು!
ಸಾಧು ಶ್ರೀನಾಥ್​
|

Updated on: Apr 30, 2020 | 2:45 PM

Share

ಹಾಸನ: ಕೊರೊನಾ ಸೊಂಕು ಹರಡುವ ಭೀತಿಯಿಂದ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಗೆ ಬರದೆ ಎಲ್ಲರು ಮನೆಯಲ್ಲೇ ಇರಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸೊಸೆಯನ್ನು ಮನೆಯಿಂದ ಅತ್ತೆ-ಮಾವ ಹೊರಹಾಕಿರುವ ಘಟನೆ ಬಸಟ್ಟಿಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.

ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಅತ್ತೆ ಸುಧಾ, ಮಾವ ರೇವಣ್ಣ ಹಾಗೂ ಅತ್ತಿಗೆ ವಿರುದ್ಧ ಸೊಸೆ ಬಿಂದು ಗಂಭೀರ ಆರೋಪ ಮಾಡಿದ್ದಾರೆ. ಹಾಲು ತರುವಂತೆ ಮನೆಯಿಂದ ಹೊರಗೆ ಕಳುಹಿಸಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆಂದು ಬಿಂದು ಆರೋಪಿಸಿದ್ದಾರೆ. ಹಾಗಾಗಿ ಮನೆ ಎದುರು ರಸ್ತೆಯಲ್ಲಿ ನಿಂತು ಸೊಸೆ ಬಿಂದು ಕಣ್ಣೀರು ಹಾಕಿದ್ದಾರೆ.