ಗ್ರಾ.ಪಂ ಸದಸ್ಯೆ ಮನೆಗೆ ಗ್ರಾಮಸ್ಥರಿಂದ ಮುತ್ತಿಗೆ, ಯಾಕೆ?

ಹಾಸನ: ಕುಡಿಯೋ ನೀರಿಗಾಗಿ ಗ್ರಾಮಸ್ಥರು ಗ್ರಾ.ಪಂ ಸದಸ್ಯರ ಮನೆಗೆ ಮುತ್ತಿಗೆ ಹಾಕಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಗದೀಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಲವು ಮನೆಗಳಿಗೆ ದಶಕಗಳಿಂದ ಕುಡಿಯೋ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಬ್ಯಾಕರವಳ್ಳಿ ಗ್ರಾ.ಪಂ ವತಿಯಿಂದ ಒಂದು ಕೊಳವೆ ಬಾವಿ ಕೊರೆಸಲಾಗಿದೆ. ಆ ಬೋರ್ ವೆಲ್​ಗೆ ಮೋಟರ್ ಅಳವಡಿಸಿ ಪೈಪ್ ಲೈನ್ ಹಾಕೋ ಮುನ್ನವೇ ಗ್ರಾ.ಪಂ. ಸದಸ್ಯೆ ಜಯಮಾಲಾ ತಾವೇ ವೈಯಕ್ತಿಕವಾಗಿ ಅದಕ್ಕೆ ಮೋಟರ್ ಅಳವಡಿಸಿಕೊಂಡಿದ್ದಾರೆ. ಇದ್ರಿಂದ ತಮಗೆ ಕುಡಿಯುವ […]

ಗ್ರಾ.ಪಂ ಸದಸ್ಯೆ ಮನೆಗೆ ಗ್ರಾಮಸ್ಥರಿಂದ ಮುತ್ತಿಗೆ, ಯಾಕೆ?
ಆಯೇಷಾ ಬಾನು

Updated on: Jun 08, 2020 | 2:24 PM

ಹಾಸನ: ಕುಡಿಯೋ ನೀರಿಗಾಗಿ ಗ್ರಾಮಸ್ಥರು ಗ್ರಾ.ಪಂ ಸದಸ್ಯರ ಮನೆಗೆ ಮುತ್ತಿಗೆ ಹಾಕಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಗದೀಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಲವು ಮನೆಗಳಿಗೆ ದಶಕಗಳಿಂದ ಕುಡಿಯೋ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಬ್ಯಾಕರವಳ್ಳಿ ಗ್ರಾ.ಪಂ ವತಿಯಿಂದ ಒಂದು ಕೊಳವೆ ಬಾವಿ ಕೊರೆಸಲಾಗಿದೆ.

ಆ ಬೋರ್ ವೆಲ್​ಗೆ ಮೋಟರ್ ಅಳವಡಿಸಿ ಪೈಪ್ ಲೈನ್ ಹಾಕೋ ಮುನ್ನವೇ ಗ್ರಾ.ಪಂ. ಸದಸ್ಯೆ ಜಯಮಾಲಾ ತಾವೇ ವೈಯಕ್ತಿಕವಾಗಿ ಅದಕ್ಕೆ ಮೋಟರ್ ಅಳವಡಿಸಿಕೊಂಡಿದ್ದಾರೆ. ಇದ್ರಿಂದ ತಮಗೆ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ ಎಂದು ಜನರು ಸದಸ್ಯೆ ಮನೆಗೆ ಮುತ್ತಿಗೆ ಹಾಕಿದ್ರು. ಈ ವೇಳೆ ಬೇಜವಾಬ್ದಾರಿತನದಿಂದ ಮಾತನಾಡಿದ ಸದಸ್ಯೆಗೆ ಫುಲ್ ಕ್ಲಾಸ್ ತೆಗೆದುಕೊಂಡ ಜನರು, ಸಾರ್ವಜನಿಕ‌ ಕೊಳವೆ ಬಾವಿ ಖಾಸಗಿಯಾಗಿ ಬಳಸಿಕೊಳ್ಳುತ್ತಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು ಎಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಮನವಿ ಸಲ್ಲಿಸಿದ್ರು.

Published On - 10:07 am, Mon, 8 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us