
ಹುಬ್ಬಳ್ಳಿ: ತಿಪ್ಪೆ ಜಾಗದ ಸಲುವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ನಡೆದಿದೆ.
ಜಗದೀಶ ಹನಮಂತಪ್ಪ ತಾಂಬೆ (23) ಕೊಲೆಯಾದ ಯುವಕನಾಗಿದ್ದು, ತಿಪ್ಪೆ ಜಾಗದ ಸಲುವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಹೀಗಾಗಿ ಶಾರದಾ ಪಾಟೀಲ ಎಂಬ ಮಹಿಳೆಯ ಪ್ರಚೋದನೆಯಿಂದ, ಮೂಲತಃ ದೇವಿಕೊಪ್ಪ ಗ್ರಾಮದ ಗಂಗಾಧರ ನಿಂಗಪ್ಪ ನೂಲ್ವಿ, ಜಗದೀಶ ಹನಮಂತಪ್ಪ ತಾಂಬೆಯನ್ನು ಹತ್ಯೆ ಮಾಡಿದ್ದಾನೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.