ವಿಮಾನ ಆಯ್ತು, ಈಗ ತನ್ನದೇ ಹಡಗು ಸ್ಫೋಟಿಸಿದ ಇರಾನ್: 19 ಯೋಧರ ದುರ್ಮರಣ!

ಇರಾನ್: ನೌಕಾ ಸಮರಾಭ್ಯಾಸದ ವೇಳೆ ಅಚಾತುರ್ಯದಿಂದ ತನ್ನದೇ ಯುದ್ಧ ಹಡಗನ್ನು ಇರಾನ್ ಸ್ಫೋಟಿಸಿದೆ. ಪರಿಣಾಮ 19 ಇರಾನ್ ನಾವಿಕರು ದುರ್ಮರಣ ಹೊಂದಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಒಮಾನ್ ಕೊಲ್ಲಿಯಲ್ಲಿ ಸೇನಾ ಅಭ್ಯಾಸ ನಡೆಸುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುದ್ಧ ಹಡಗು ಸಂಪೂರ್ಣವಾಗಿ ಧ್ವಂಸವಾಗಿದೆ. ಟೆಹ್ರಾನ್​ನ 790 ಮೈಲಿ ದೂರದಲ್ಲಿರುವ ಜಾಸ್ಕ್ ಬಂದರಿನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ. ಈ ವರ್ಷದ ಜನವರಿಯಲ್ಲಿ ಉಕ್ರೇನ್​ಗೆ ಸೇರಿದ ವಿಮಾನವನ್ನು ಇರಾನ್ ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಕನಿಷ್ಠ […]

ವಿಮಾನ ಆಯ್ತು, ಈಗ ತನ್ನದೇ ಹಡಗು ಸ್ಫೋಟಿಸಿದ ಇರಾನ್: 19 ಯೋಧರ ದುರ್ಮರಣ!
ಸಾಧು ಶ್ರೀನಾಥ್​

Updated on: May 11, 2020 | 5:05 PM

ಇರಾನ್: ನೌಕಾ ಸಮರಾಭ್ಯಾಸದ ವೇಳೆ ಅಚಾತುರ್ಯದಿಂದ ತನ್ನದೇ ಯುದ್ಧ ಹಡಗನ್ನು ಇರಾನ್ ಸ್ಫೋಟಿಸಿದೆ. ಪರಿಣಾಮ 19 ಇರಾನ್ ನಾವಿಕರು ದುರ್ಮರಣ ಹೊಂದಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.

ಒಮಾನ್ ಕೊಲ್ಲಿಯಲ್ಲಿ ಸೇನಾ ಅಭ್ಯಾಸ ನಡೆಸುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುದ್ಧ ಹಡಗು ಸಂಪೂರ್ಣವಾಗಿ ಧ್ವಂಸವಾಗಿದೆ. ಟೆಹ್ರಾನ್​ನ 790 ಮೈಲಿ ದೂರದಲ್ಲಿರುವ ಜಾಸ್ಕ್ ಬಂದರಿನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ.

ಈ ವರ್ಷದ ಜನವರಿಯಲ್ಲಿ ಉಕ್ರೇನ್​ಗೆ ಸೇರಿದ ವಿಮಾನವನ್ನು ಇರಾನ್ ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಕನಿಷ್ಠ 176 ಮಂದಿ ಮೃತಪಟ್ಟಿದ್ದರು. ನಂತರ ತನ್ನ ತಪ್ಪನ್ನು ಇರಾನ್ ಒಪ್ಪಿಕೊಂಡಿತ್ತು.

Published On - 5:00 pm, Mon, 11 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us