ಕರ್ನಾಟಕದಲ್ಲಿ ರೆಡ್ ಬಸ್ ಸಂಚಾರ ಇರುತ್ತೆ, ನೆರೆಯ ತೆಲಂಗಾಣದಲ್ಲಿ?

ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ. ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ‌ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್​ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ‌ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್​ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಕಂಟೇನ್ಮೆಂಟ್, ರೆಡ್ ಜೋನ್​ಗಳಲ್ಲಿ‌ ಹಾಗೂ ಹೈದರಾಬಾದ್ ಮಹಾನಗರದಲ್ಲಿ‌ ಬಸ್​ಗಳ‌ ಓಡಾಟ ಇರುವುದಿಲ್ಲ. ಬಸ್​ಗಳಲ್ಲಿ ಶೇಕಡಾ […]

ಕರ್ನಾಟಕದಲ್ಲಿ ರೆಡ್ ಬಸ್ ಸಂಚಾರ ಇರುತ್ತೆ, ನೆರೆಯ ತೆಲಂಗಾಣದಲ್ಲಿ?
ಸಾಧು ಶ್ರೀನಾಥ್​

Updated on: May 18, 2020 | 8:35 PM

ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ.

ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ‌ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್​ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ‌ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್​ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಕಂಟೇನ್ಮೆಂಟ್, ರೆಡ್ ಜೋನ್​ಗಳಲ್ಲಿ‌ ಹಾಗೂ ಹೈದರಾಬಾದ್ ಮಹಾನಗರದಲ್ಲಿ‌ ಬಸ್​ಗಳ‌ ಓಡಾಟ ಇರುವುದಿಲ್ಲ. ಬಸ್​ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲು ಸಭೆಯಲ್ಲಿ‌ ತೀರ್ಮಾನಿಸಲಾಗಿದೆ.

Published On - 2:45 pm, Mon, 18 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us