
ಲಕ್ನೋ: ರಾಮ ಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಕಾಟದಿಂದ ಸಮಾರಂಭಕ್ಕೆ ಹಲವರು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದರೂ, ಬರುವ ದಿನಗಳಲ್ಲಿ ಮಹಾಮಾರಿಯ ಅಬ್ಬರ ಕೊಂಚ ತಗ್ಗಿದಾಗ ನೂರಾರು ಭಕ್ತರು ಕಾಮಗಾರಿ ವೀಕ್ಷಿಸಲು ಬರುವುದಂತೂ ಖಂಡಿತ.
ಹಾಗಾಗಿ, ಅಯೋಧ್ಯೆಯ ರೈಲ್ವೇ ನಿಲ್ದಾಣದ ನವೀಕರಣ ಹಾಗು ಸುಂದರೀಕರಣದ ಕಾಮಗಾರಿ ಭರದಿಂದ ಸಾಗಿದೆ. ಲಾಕ್ಡೌನ್ನಿಂದ ಕೊಂಚ ನಿಧಾನವಾಗಿದ್ದ ಕಾಮಗಾರಿಯ ಪ್ರಗತಿ ಇದೀಗ ವೇಗ ಹಿಡಿದಿದೆ.
ಈ ಕಾಮಗಾರಿಯ ವಿಶೇಷವೆಂದರೆ, ರೇಲ್ವೇ ನಿಲ್ದಾಣದ ಪ್ರವೇಶ ದ್ವಾರದ ಗೋಪುರದಲ್ಲಿ ಸೀತಾ-ರಾಮರ ಅಮೋಘವಾದ ಚಿತ್ರಪಟವನ್ನು ಬಿಡಿಸಲಾಗಿದೆ. ಮೂವರು ಸಹೋದರರು ಹಾಗು ಆಂಜನೇಯ ಸಮೇತ ಕಾಣಿಸುವ ರಾಮನ ಸುಂದರ ಚಿತ್ರಕಲೆಯನ್ನ ಬಿಡಿಸಲು ನಾಲ್ಕು ಜನ ಕಲಾವಿದರ ತಂಡ 7 ದಿನಗಳನ್ನ ತೆಗೆದುಕೊಂಡಿದೆ.

Published On - 3:49 pm, Mon, 3 August 20