ವರ್ಷ ಪೂರೈಸಿದ ಉದ್ಧವ್ ಠಾಕ್ರೆ ಸರ್ಕಾರ: ಕ್ಲಾಸ್ ತೆಗೆದುಕೊಂಡ ದೇವೇಂದ್ರ ಫಡ್ನವೀಸ್

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಮೊದಲ ವರ್ಷ ಪೂರೈಸಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

ವರ್ಷ ಪೂರೈಸಿದ ಉದ್ಧವ್ ಠಾಕ್ರೆ ಸರ್ಕಾರ: ಕ್ಲಾಸ್ ತೆಗೆದುಕೊಂಡ ದೇವೇಂದ್ರ ಫಡ್ನವೀಸ್
ಸಾಂದರ್ಭಿಕ ಚಿತ್ರ

Updated on: Nov 28, 2020 | 4:49 PM

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸರ್ಕಾರ ಶನಿವಾರ ಮೊದಲ ವರ್ಷ ಪೂರೈಸಿರುವ ಬೆನ್ನಲ್ಲೇ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಹತ್ತಿ, ಸೊಯಾಬಿನ್ ಬೆಳೆಗಳು ಕೀಟ ಬಾಧೆಯಿಂದ ನಲುಗುತ್ತಿವೆ. ರೈತರ ಹಿತವನ್ನು ರಾಜ್ಯ ಸರ್ಕಾರ ಸಂಪೂರ್ಣ ಮರೆತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದ ರೈತರ ಆರ್ಥಿಕ ಪರಿಸ್ಥಿತಿ ದಾರುಣವಾಗಿ ಮಾರ್ಪಟ್ಟಿದೆ ಎಂದು ದೇವೇಂದ್ರ ಫಡ್ನವೀಸ್ ಟೀಕಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕೋರ್ಟ್  ಕಪಾಳಮೋಕ್ಷ ಮಾಡಿದೆ!
ಪತ್ರಕರ್ತ, ನಿರೂಪಕ ಅರ್ನಬ್ ಗೋಸ್ವಾಮಿ ಮತ್ತು ಕಂಗನಾ ರಣಾವತ್ ಪ್ರಕರಣ ಉದ್ದೇಶಿಸಿಯೂ ಠಾಕ್ರೆ ಸರ್ಕಾರವನ್ನು ಟೀಕಿಸಿರುವ ಅವರು, ಬಾಂಬೆ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್​ಗಳು ನೀಡಿರುವ ತೀರ್ಪುಗಳು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿವೆ ಎಂದು ವಿವರಿಸಿದ್ದಾರೆ.

ಮರಾಠಾ ಸಮುದಾಯಕ್ಕೂ ಅನ್ಯಾಯ
ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವ ವಿಷಯದಲ್ಲೂ ಎಂವಿಎ ಸರ್ಕಾರ ವಿಫಲವಾಗಿದೆ. ಸರ್ಕಾರದ ವೈಫಲ್ಯ ಮರೆಸಲು ಕೆಲವು ಸಚಿವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಉದ್ಧವ್ ಠಾಕ್ರೆಯವರನ್ನು ಹೊರತುಪಡಿಸಿ ಇದುವರೆಗಿನ ಯಾವ ಮುಖ್ಯಮಂತ್ರಿಗಳೂ ಪ್ರತಿಪಕ್ಷವನ್ನು ಬೆದರಿಸಿರಲಿಲ್ಲ ಎಂದು ಮಾಜಿ ಸಿಎಂ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ED, CBI ತನಿಖೆಯಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ -ಉದ್ಧವ್​ ಠಾಕ್ರೆ

Published On - 4:44 pm, Sat, 28 November 20

Loading...
Unable to load recommendations.
Follow Us