ಬ್ರಾಹ್ಮಣರು ಭಾರತದವರಲ್ಲ ರಷ್ಯಾದಿಂದ ಬಂದವರು: ವಿವಾದಾತ್ಮಕ ಹೇಳಿಕೆ ನೀಡಿದ ಆರ್​ಜೆಡಿ ನಾಯಕ

ಬ್ರಾಹ್ಮಣ(Brahmin)ರು ಭಾರತದವರಲ್ಲ ರಷ್ಯಾದಿಂದ ಬಂದವರು ಎಂದು ಆರ್​ಜೆಡಿ ನಾಯಕ ಯದುವಂಶ ಕುಮಾರ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬ್ರಾಹ್ಮಣರು ಭಾರತದವರಲ್ಲ ರಷ್ಯಾದಿಂದ ಬಂದವರು: ವಿವಾದಾತ್ಮಕ ಹೇಳಿಕೆ ನೀಡಿದ ಆರ್​ಜೆಡಿ ನಾಯಕ
ಆರ್​ಜೆಡಿ ನಾಯಕ ಯದುವಂಶ ಕುಮಾರ್ ಯಾದವ್

Updated on: May 02, 2023 | 12:27 PM

ಬ್ರಾಹ್ಮಣ(Brahmin)ರು ಭಾರತದವರಲ್ಲ ರಷ್ಯಾದಿಂದ ಬಂದವರು ಎಂದು ಆರ್​ಜೆಡಿ ನಾಯಕ ಯದುವಂಶ ಕುಮಾರ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿರ್ಮಲಿ ಜಿಲ್ಲೆಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಬ್ಬ ಬ್ರಾಹ್ಮಣನೂ ಭಾರತಕ್ಕೆ ಸೇರಿದವರಲ್ಲ ಎಂದು ಹೇಳಿದ್ದು, ಅವರೆಲ್ಲರೂ ರಷ್ಯಾ ಇತರೆ ದೇಶಗಳಿಂದ ಬಂದವರು, ಅವರನ್ನು ಅಲ್ಲಿಂದ ಗಡಿ ಪಾರು ಮಾಡಲಾಗಿತ್ತು ನಂತರ ಅವರೆಲ್ಲರೂ ಭಾರತಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ನಮ್ಮನ್ನೆಲ್ಲಾ ಒಡೆದು ನಾವು ಹೊಡೆದಾಡುವಂತೆ ಮಾಡುತ್ತಿದ್ದಾರೆ, ನಮ್ಮ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ.

ಮತ್ತಷ್ಟು ಓದಿ: Ayodhya: ದೇವಸ್ಥಾನದ ಅರ್ಚಕ ಆತ್ಮಹತ್ಯೆ, ಪೊಲೀಸರ ವಿರುದ್ಧ ಗಂಭೀರ ಆರೋಪ

 ಯದುವಂಶ ಕುಮಾರ್  ಹೇಳಿಕೆಗೆ ಬಿಜೆಪಿ ತರಾಟೆ
ಬ್ರಾಹ್ಮಣರು ನಮ್ಮ ದೇಶದ ನಿವಾಸಿಗಳು, ಬ್ರಾಹ್ಮಣರು ನಮಗೆ ಮೌಲ್ಯಗಳನ್ನು ಕಲಿಸುತ್ತಿದ್ದಾರೆ, ಆದರೆ ಆರ್​ಜೆಡಿ ನಾಯಕರು ಅವರನ್ನು ಓಡಿಸುವ ಕುರಿತು ಮಾತನಾಡುತ್ತಿದ್ದಾರೆ, ಸಮಾಜದಲ್ಲಿ ದ್ವೇಷ ಹರಡುವ ಇಂಥವರನ್ನು ಮೊದಲು ಹೊರಹಾಕುವ ಅಗತ್ಯವಿದೆ ಎಂದು ಬಿಜೆಪಿ ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us