ಹೈದ್ರಾಬಾದ್ ಎನ್‌ಕೌಂಟರ್: ಪಾಪಿಗಳ ಹತ್ಯೆಗೆ ಟಾಲಿವುಡ್​ ಮಂದಿಯ ರಿಯಾಕ್ಷನ್​

ಹೈದ್ರಾಬಾದ್ ಪಶು ವೈದ್ಯ ಮೇಲೆ ಹೇಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹುಬ್ಬಳ್ಳಿಯ ಹೆಬ್ಬುಲಿ ವಿಶ್ವನಾಥ್ ಸಜ್ಜನರ್ ತಂಡ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿದೆ. ದೇಶಾದ್ಯಂತ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂಬ ಬೇಡಿಕೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಇಂದು ಮಹಜರ್ ಮಾಡಲು ದಿಶಾಳ ಹತ್ಯೆಯಾದ ಜಾಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾಗ ಡಿಸಿಪಿ ಅವರ ಬಳಿಯಿದ್ದ ಗನ್ ಕಸಿದುಕೊಳ್ಳಲು ಪ್ರಯತ್ನ ಮಾಡಿದ್ದಾರೆ ಅದು ಸಾಧ್ಯವಾಗದ ಕಾರಣ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ […]

ಹೈದ್ರಾಬಾದ್ ಎನ್‌ಕೌಂಟರ್: ಪಾಪಿಗಳ ಹತ್ಯೆಗೆ ಟಾಲಿವುಡ್​ ಮಂದಿಯ ರಿಯಾಕ್ಷನ್​

Updated on: Dec 06, 2019 | 12:44 PM

ಹೈದ್ರಾಬಾದ್ ಪಶು ವೈದ್ಯ ಮೇಲೆ ಹೇಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹುಬ್ಬಳ್ಳಿಯ ಹೆಬ್ಬುಲಿ ವಿಶ್ವನಾಥ್ ಸಜ್ಜನರ್ ತಂಡ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿದೆ. ದೇಶಾದ್ಯಂತ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂಬ ಬೇಡಿಕೆ ಹೆಚ್ಚಾಗಿತ್ತು.

ಅದಕ್ಕೆ ತಕ್ಕಂತೆ ಇಂದು ಮಹಜರ್ ಮಾಡಲು ದಿಶಾಳ ಹತ್ಯೆಯಾದ ಜಾಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾಗ ಡಿಸಿಪಿ ಅವರ ಬಳಿಯಿದ್ದ ಗನ್ ಕಸಿದುಕೊಳ್ಳಲು ಪ್ರಯತ್ನ ಮಾಡಿದ್ದಾರೆ ಅದು ಸಾಧ್ಯವಾಗದ ಕಾರಣ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡುಹಾರಿಸಿ ಎನ್‌ಕೌಂಟರ್ ಮಾಡಿದ್ದರು. ಇದಕ್ಕೆ ದೇಶದೆಲ್ಲೆಡೆ ಭಾರಿ ಸಂತೋಷ, ಸಂಭ್ರಮ ಮನೆಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೈದ್ರಾಬಾದ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ಹಾಗೂ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಖ್ಯಾತ ನಾಮರು ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ:

Published On - 12:32 pm, Fri, 6 December 19