AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು. ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ […]

ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ
ಸಾಧು ಶ್ರೀನಾಥ್​
|

Updated on: Dec 07, 2019 | 7:18 AM

Share

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು.

ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ ಕೊಟ್ಟಿದೆ. ಅತ್ಯಾಚಾರವೆಸಗಿದ ಸ್ಥಳದಲ್ಲೇ ಕಾಮಕ್ರಿಮಿಗಳಿಗೆ ನರಕ ತೋರಿಸಿದೆ. ಖಾಕಿ ಬುಲೆಟ್​ಗೆ ಮೊಹಮ್ಮದ್ ಆರಿಫ್, ಚೆನ್ನಕೇಶವುಲು, ಜೊಲ್ಲು ಶಿವ ಮತ್ತು ಜೊಲ್ಲು ನವೀನ್ ಎದೆ ಚೂರು ಚೂರಾಗಿತ್ತು.

ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ: ನಿನ್ನೆ ತೆಲಂಗಾಣ ಹೈಕೋರ್ಟ್, ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸ್ತು. ಆರೋಪಿಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ ಅಂತಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸೋಮವಾರ ರಾತ್ರಿ 8 ಗಂಟೆ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಅಂತಾ ಹೇಳಿದೆ.

ಅಲ್ದೆ, ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಿರೋ ವಿಡಿಯೋವನ್ನ ಇಂದು ಸಂಜೆಯೊಳಗಾಗಿ ಹಸ್ತಾಂತರ ಮಾಡುವಂತೆ ಸೂಚಿಸಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸೋದಾಗಿ ಹೈಕೋರ್ಟ್​ ಹೇಳಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿದ ಮಹಬೂಬ್ ನಗರದ ಸರ್ಕಾರಿ ಆಸ್ಪತ್ರೆಗೆ ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ.

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು