AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು. ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ […]

ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 07, 2019 | 7:18 AM

Share

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು.

ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ ಕೊಟ್ಟಿದೆ. ಅತ್ಯಾಚಾರವೆಸಗಿದ ಸ್ಥಳದಲ್ಲೇ ಕಾಮಕ್ರಿಮಿಗಳಿಗೆ ನರಕ ತೋರಿಸಿದೆ. ಖಾಕಿ ಬುಲೆಟ್​ಗೆ ಮೊಹಮ್ಮದ್ ಆರಿಫ್, ಚೆನ್ನಕೇಶವುಲು, ಜೊಲ್ಲು ಶಿವ ಮತ್ತು ಜೊಲ್ಲು ನವೀನ್ ಎದೆ ಚೂರು ಚೂರಾಗಿತ್ತು.

ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ: ನಿನ್ನೆ ತೆಲಂಗಾಣ ಹೈಕೋರ್ಟ್, ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸ್ತು. ಆರೋಪಿಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ ಅಂತಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸೋಮವಾರ ರಾತ್ರಿ 8 ಗಂಟೆ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಅಂತಾ ಹೇಳಿದೆ.

ಅಲ್ದೆ, ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಿರೋ ವಿಡಿಯೋವನ್ನ ಇಂದು ಸಂಜೆಯೊಳಗಾಗಿ ಹಸ್ತಾಂತರ ಮಾಡುವಂತೆ ಸೂಚಿಸಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸೋದಾಗಿ ಹೈಕೋರ್ಟ್​ ಹೇಳಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿದ ಮಹಬೂಬ್ ನಗರದ ಸರ್ಕಾರಿ ಆಸ್ಪತ್ರೆಗೆ ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ.

Follow Us
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ