AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮಗು ಸತ್ತಾಗ ಬರ್ಲಿಲ್ಲ, ಪಾತಕಿಗಳ ಸಾವಿಗೆ ಬಂದಿರಾ? ದಿಶಾ ಕುಟುಂಬ ಕೆಂಡಾಮಂಡಲ

ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್​ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ,‌ ಹತ್ಯೆ ಮಾಡಿದಾಗ ಮಾನವ […]

ನಮ್ಮ ಮಗು ಸತ್ತಾಗ ಬರ್ಲಿಲ್ಲ, ಪಾತಕಿಗಳ ಸಾವಿಗೆ ಬಂದಿರಾ? ದಿಶಾ ಕುಟುಂಬ ಕೆಂಡಾಮಂಡಲ
ಸಾಧು ಶ್ರೀನಾಥ್​
|

Updated on:Dec 07, 2019 | 12:21 PM

Share

ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್​ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ,‌ ಹತ್ಯೆ ಮಾಡಿದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿಲ್ಲವೇ? ಎಂದು ದಿಶಾ ತಂದೆ-ತಾಯಿ ಕೆಂಡಾಮಂಡಲವಾಗಿದ್ದಾರೆ.

ಹಾಜಿಪುರ, ವರಂಗಲ್, ಆಸೀಫಾಬಾದ್​ಗಳಲ್ಲಿ ಚಿಕ್ಕಮಕ್ಕಳು, ಯುವತಿಯರು ಅತ್ಯಾಚಾರಕ್ಕೀಡಾಗಿ ಕೊಲೆಯಾದಾಗ ಆಯೋಗ ಏಕೆ ಬಾಯಿ ತೆರೆಯಲಿಲ್ಲ. ಈಗ ನಡೆದಿರೋ ಎನ್​ಕೌಂಟರ್ ನಾಗರಿಕ ಸಮಾಜ ಕೋರಿಕೊಂಡಂತಹುದು ಎಂದು ಎನ್‌ಹೆಚ್‌ಆರ್‌ಸಿ ಪರಿಶೀಲನೆಗೆ ದಿಶಾ ಕುಟುಂಬ ವಿರೋಧ ವ್ಯಕ್ತಪಡಿಸಿದೆ.

ವಿರೋಧದ ನಡುವೆಯೂ ಭೇಟಿ: ಈ ಮಧ್ಯೆ ವಿರೋಧದ ನಡುವೆಯೂ ಮಹಬೂಬ್‌ನಗರದಲ್ಲಿರುವ ಆಸ್ಪತ್ರೆಗೆ NHRC ತಂಡ ಭೇಟಿ ನೀಡಿದೆ. 7 ಅಧಿಕಾರಿಗಳ ತಂಡ ಆಸ್ಪತ್ರೆಯಲ್ಲಿರುವ ಆರೋಪಿಗಳ ಮೃತದೇಹಗಳನ್ನ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನೆ ನಡೆದ ಪ್ರದೇಶಗಳ ಭೇಟಿಗೆ ತೆರಳಲು NHRC ತಂಡ ನಿರ್ಧರಿಸಿದೆ.

Published On - 11:27 am, Sat, 7 December 19

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ