ಹಿಂದೂಗಳು ಸುರಕ್ಷಿತವಾಗಿದ್ದಾರೆಂದರೆ ಮುಸ್ಲಿಮರು ಕೂಡ ಸುರಕ್ಷಿತವೆಂದರ್ಥ: ಯೋಗಿ
ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆಂದು ಮುಸ್ಲಿಮರು ಕೂಡ ಸುರಕ್ಷಿತವಾಗಿದ್ದಾರೆಂದರ್ಥ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಎನ್ಐ ಪಾಡ್ಕಾಸ್ಟ್ನಲ್ಲಿ ಅವರು ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಯೋಗಿ ಬಳಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು.

ಲಕ್ನೋ, ಮಾರ್ಚ್ 26: ಉತ್ತರ ಪ್ರದೇಶದಲ್ಲಿ ಹಿಂದೂ(Hindu)ಗಳು ಸುರಕ್ಷಿತವಾಗಿದ್ದಾರೆಂದು ಮುಸ್ಲಿಮರು(Muslim) ಕೂಡ ಸುರಕ್ಷಿತವಾಗಿದ್ದಾರೆಂದರ್ಥ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಎನ್ಐ ಪಾಡ್ಕಾಸ್ಟ್ನಲ್ಲಿ ಅವರು ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಯೋಗಿ ಬಳಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು.
ಅದಕ್ಕೆ ಉತ್ತರಿಸಿದ ಯೋಗಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರು ಸಹ ಸುರಕ್ಷಿತರು ಎಂದಿದ್ದಾರೆ. 2017 ರಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೋಮು ಹಿಂಸಾಚಾರ ನಿಂತಿದೆ ಎಂದು ಅವರು ಹೇಳಿದರು. ವಕ್ಫ್ ಮಂಡಳಿ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಜೆಪಿಸಿ ಶಿಫಾರಸುಗಳ ಕುರಿತು ಸಿಎಂ ಮಾತನಾಡಿದರು. ವಕ್ಫ್ ಹೆಸರಿನಲ್ಲಿ ಯಾವುದೇ ಕಲ್ಯಾಣ ಕಾರ್ಯಗಳನ್ನು ಮಾಡಲಾಗಿದೆಯೇ ಎಂದು ಅವರು ಕೇಳಿದರು.
ನೂರು ಹಿಂದೂ ಕುಟುಂಬಗಳಲ್ಲಿ ಒಂದು ಮುಸ್ಲಿಂ ಕುಟುಂಬವು ಸುರಕ್ಷಿತವಾಗಿರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು, ಆದರೆ ನೂರು ಮುಸ್ಲಿಂ ಕುಟುಂಬಗಳಲ್ಲಿ 50 ಹಿಂದೂ ಕುಟುಂಬಗಳ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಬಾಂಗ್ಲಾದೇಶ ಒಂದು ಉದಾಹರಣೆಯಾಗಿದೆ. 2017 ಕ್ಕಿಂತ ಮೊದಲು ಯುಪಿಯಲ್ಲಿ ಗಲಭೆಗಳಾಗಿದ್ದರೆ, ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಂ ಅಂಗಡಿಗಳು ಸಹ ಉರಿಯುತ್ತಿದ್ದವು. ಹಿಂದೂ ಮನೆಗಳು ಉರಿಯುತ್ತಿದ್ದರೆ, ಮುಸ್ಲಿಂ ಮನೆಗಳು ಸಹ ಉರಿಯುತ್ತಿದ್ದವು. ಮತ್ತು 2017 ರ ನಂತರ ಗಲಭೆಗಳು ನಿಂತುಹೋದವು ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್
ನಾನು ಒಬ್ಬ ಸಾಮಾನ್ಯ ನಾಗರಿಕ, ಉತ್ತರ ಪ್ರದೇಶದ ನಾಗರಿಕ. ಮತ್ತು ನಾನು ಎಲ್ಲರ ಸಂತೋಷವನ್ನು ಬಯಸುವ ಯೋಗಿ. ಎಲ್ಲರ ಬೆಂಬಲ ಮತ್ತು ಅಭಿವೃದ್ಧಿಯಲ್ಲಿ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದರು. ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಧರ್ಮ ಎಂದು ಅವರು ಉಲ್ಲೇಖಿಸಿದರು, ಹಿಂದೂ ಆಡಳಿತಗಾರರು ಇತರರ ಮೇಲೆ ಪ್ರಾಬಲ್ಯ ಸ್ಥಾಪಿಸಲು ತಮ್ಮ ಸ್ವಂತ ಶಕ್ತಿಯನ್ನು ಬಳಸಿದ ಯಾವುದೇ ನಿದರ್ಶನಗಳಿಲ್ಲ ಎಂದು ಪ್ರತಿಪಾದಿಸಿದರು.
EP-276 with Yogi Adityanath premieres today at 10 AM IST
Yogi Adityanath reflects on his eight-year tenure as Uttar Pradesh Chief Minister.#ANIPodcast #SmitaPrakash #YogiAdityanath #UttarPradesh #Ayodhya
Watch Full Episode Here: https://t.co/maE45voutK
The podcast will be… pic.twitter.com/LTlvZpeI0j
— ANI (@ANI) March 26, 2025
ಉತ್ತರಪ್ರದೇಶದ ಹೋಳಿ ಹಬ್ಬದ ಸಂದರ್ಭದಲ್ಲಿ ಮಸೀದಿಯನ್ನು ಮುಚ್ಚಲು ಬಳಸಲಾಗುತ್ತಿದ್ದ ಟಾರ್ಪಲ್ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಮಸೀದಿಯ ಮೇಲೆ ಬಣ್ಣಗಳನ್ನು ಎಸೆಯದಂತೆ ಕಟ್ಟುನಿಟ್ಟಿನ ಸೂಚನೆಗಳು ಜಾರಿಯಲ್ಲಿವೆ ಎಂದು ಸ್ಪಷ್ಟಪಡಿಸಿದರು, ಆದರೆ ಬಣ್ಣಗಳು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Wed, 26 March 25