ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ. ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. […]

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!
ಸಾಧು ಶ್ರೀನಾಥ್​

Updated on: May 04, 2020 | 11:08 AM

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ.

ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. ಸೆಲೂನ್ ಅಂಗಡಿಗಳು ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ತೆರೆದುಕೊಂಡಿವೆ.

Published On - 11:05 am, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us