AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ ಮತ್ತೊಂದು ಆಘಾತ; ಸದ್ಯದಲ್ಲೇ ಅಬ್ಬರಿಸಲಿರುವ ಅರ್ನಬ್​..ಅರ್ನಬ್​ ಎಂದರೆ ಏನು ಗೊತ್ತಾ?

ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್​ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ.

ತಮಿಳುನಾಡಿಗೆ ಮತ್ತೊಂದು ಆಘಾತ; ಸದ್ಯದಲ್ಲೇ ಅಬ್ಬರಿಸಲಿರುವ ಅರ್ನಬ್​..ಅರ್ನಬ್​ ಎಂದರೆ ಏನು ಗೊತ್ತಾ?
ಅರ್ನಬ್​ ಚಂಡಮಾರುತ
Lakshmi Hegde
|

Updated on:Dec 07, 2020 | 3:38 PM

Share

ಚೆನ್ನೈ: ನಿವಾರ್ ಹಾಗೂ ಬುರೇವಿ ಚಂಡಮಾರುತಗಳು ಒಂದರ ಬೆನ್ನಿಗೆ ಮತ್ತೊಂದು ಅಪ್ಪಳಿಸಿ, ಸಾಕಷ್ಟು ಹಾನಿ ಮಾಡಿ ಹೋದ ಬೆನ್ನಲ್ಲೇ ಇನ್ನೊಂದು ಚಂಡಮಾರುತ ಅಪ್ಪಳಿಸಲು ಸಿದ್ಧವಾಗಿದೆ. ಇದರ ಹೆಸರು ‘ಅರ್ನಬ್​’..

ಅರ್ನಬ್​ ಎಂಬುವುದು ಸಂಸ್ಕೃತದ ಅರ್ಣವ ಪದದಿಂದ ಹುಟ್ಟಿರುವುದು. ಅರ್ಣವ ಎಂದರೆ ಸಮುದ್ರ, ಎಂದರೆ ಸಮುದ್ರ ಸೀಮೋಲ್ಲಂಘನ ಮಾಡಿದ್ದ ಆಂಜನೇಯನ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಟ್ಟಿದ್ದಾರೆ.

ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್​ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಎರಡು ವಾರದೊಳಗೆ ನಿವಾರ್ ಮತ್ತು ಬುರೇವಿ ಅಬ್ಬರಕ್ಕೆ ತತ್ತರಿಸಿದ್ದ ತಮಿಳುನಾಡು, ಕೇರಳಕ್ಕೆ ಇದು ಇನ್ನೊಂದು ಆಘಾತವಾಗಲಿದೆ. ಎರಡೂ ರಾಜ್ಯಗಳಲ್ಲಿ ಮತ್ತೆ ವಿಪರೀತ ಮಳೆಯುಂಟಾಗುವ ಸಾಧ್ಯತೆ ಇದೆ.

ಅರ್ನಬ್​ ಹೆಸರು ನಮ್ಮ ದೇಶದಲ್ಲಿ ತುಸು ಪ್ರಸಿದ್ಧವೇ.. ಕಾರಣ ಟಿವಿ ನ್ಯೂಸ್  ಆಂಕರ್ ಅರ್ನಬ್ ಗೋಸ್ವಾಮಿ. ಆದರೆ ಈಗ ಏಳಲಿರುವ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಭಾರತವೂ ಅಲ್ಲ, ಅರ್ನಬ್​ ಗೋಸ್ವಾಮಿ ಮತ್ತು ಅರ್ನಬ್​ ಚಂಡಮಾರುತಕ್ಕೆ ಯಾವುದೇ ಸಂಬಂಧವೂ ಇಲ್ಲ.

ಹಿಂದೂ ಮಹಾಸಾಗಾರ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರು ಸೂಚಿಸುವ ಪ್ಯಾನಲ್​ನಲ್ಲಿರುವ 13 ದೇಶಗಳು ಈಗಾಗಲೇ 169 ಚಂಡಮಾರುತಗಳನ್ನು ಪಟ್ಟಿ ಮಾಡಿಟ್ಟಿವೆ. ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ್ದ ಅರ್ನಬ್​ ಎಂಬ ಹೆಸರಿನ ಚಂಡಮಾರುತ ಶೀಘ್ರದಲ್ಲೇ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಹಾಗೇ ಬಾಂಗ್ಲಾದೇಶ ಅರ್ನಬ್​ ಹೆಸರನ್ನು ಸಾಗರ ಎಂಬರ್ಥದಲ್ಲಿಯೇ ಸೂಚಿಸಿದೆ.

‘ಚೆಂದ ಚೆಂದದ’ ಹೆಸರು ಇಟ್ಕೊಂಡು ಅಪ್ಪಳಿಸುತ್ತವಲ್ಲ ಈ ಚಂಡಮಾರುತಗಳು! ಇವಕ್ಕೆ ಹೆಸರು ಇಡೋರು ಯಾರು?

ಬುರೇವಿ ಅಬ್ಬರಕ್ಕೆ ಏಳು ಬಲಿ; 300ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆ, ನೀರಿನಲ್ಲಿ ತೇಲಿಸಿಕೊಂಡು ಹೋಗುತ್ತಿವೆ ಜಾನುವಾರುಗಳು

ಚಂಡಮಾರುತಗಳಿಂದ ನಲುಗಿದ ತಮಿಳುನಾಡಿಗೆ ಅಮ್ಮಾ ಕ್ಯಾಂಟೀನ್ ಆಸರೆ

Published On - 10:47 am, Mon, 7 December 20

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ