AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ ಮತ್ತೊಂದು ಆಘಾತ; ಸದ್ಯದಲ್ಲೇ ಅಬ್ಬರಿಸಲಿರುವ ಅರ್ನಬ್​..ಅರ್ನಬ್​ ಎಂದರೆ ಏನು ಗೊತ್ತಾ?

ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್​ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ.

ತಮಿಳುನಾಡಿಗೆ ಮತ್ತೊಂದು ಆಘಾತ; ಸದ್ಯದಲ್ಲೇ ಅಬ್ಬರಿಸಲಿರುವ ಅರ್ನಬ್​..ಅರ್ನಬ್​ ಎಂದರೆ ಏನು ಗೊತ್ತಾ?
ಅರ್ನಬ್​ ಚಂಡಮಾರುತ
Lakshmi Hegde
|

Updated on:Dec 07, 2020 | 3:38 PM

Share

ಚೆನ್ನೈ: ನಿವಾರ್ ಹಾಗೂ ಬುರೇವಿ ಚಂಡಮಾರುತಗಳು ಒಂದರ ಬೆನ್ನಿಗೆ ಮತ್ತೊಂದು ಅಪ್ಪಳಿಸಿ, ಸಾಕಷ್ಟು ಹಾನಿ ಮಾಡಿ ಹೋದ ಬೆನ್ನಲ್ಲೇ ಇನ್ನೊಂದು ಚಂಡಮಾರುತ ಅಪ್ಪಳಿಸಲು ಸಿದ್ಧವಾಗಿದೆ. ಇದರ ಹೆಸರು ‘ಅರ್ನಬ್​’..

ಅರ್ನಬ್​ ಎಂಬುವುದು ಸಂಸ್ಕೃತದ ಅರ್ಣವ ಪದದಿಂದ ಹುಟ್ಟಿರುವುದು. ಅರ್ಣವ ಎಂದರೆ ಸಮುದ್ರ, ಎಂದರೆ ಸಮುದ್ರ ಸೀಮೋಲ್ಲಂಘನ ಮಾಡಿದ್ದ ಆಂಜನೇಯನ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಟ್ಟಿದ್ದಾರೆ.

ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್​ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಎರಡು ವಾರದೊಳಗೆ ನಿವಾರ್ ಮತ್ತು ಬುರೇವಿ ಅಬ್ಬರಕ್ಕೆ ತತ್ತರಿಸಿದ್ದ ತಮಿಳುನಾಡು, ಕೇರಳಕ್ಕೆ ಇದು ಇನ್ನೊಂದು ಆಘಾತವಾಗಲಿದೆ. ಎರಡೂ ರಾಜ್ಯಗಳಲ್ಲಿ ಮತ್ತೆ ವಿಪರೀತ ಮಳೆಯುಂಟಾಗುವ ಸಾಧ್ಯತೆ ಇದೆ.

ಅರ್ನಬ್​ ಹೆಸರು ನಮ್ಮ ದೇಶದಲ್ಲಿ ತುಸು ಪ್ರಸಿದ್ಧವೇ.. ಕಾರಣ ಟಿವಿ ನ್ಯೂಸ್  ಆಂಕರ್ ಅರ್ನಬ್ ಗೋಸ್ವಾಮಿ. ಆದರೆ ಈಗ ಏಳಲಿರುವ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಭಾರತವೂ ಅಲ್ಲ, ಅರ್ನಬ್​ ಗೋಸ್ವಾಮಿ ಮತ್ತು ಅರ್ನಬ್​ ಚಂಡಮಾರುತಕ್ಕೆ ಯಾವುದೇ ಸಂಬಂಧವೂ ಇಲ್ಲ.

ಹಿಂದೂ ಮಹಾಸಾಗಾರ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರು ಸೂಚಿಸುವ ಪ್ಯಾನಲ್​ನಲ್ಲಿರುವ 13 ದೇಶಗಳು ಈಗಾಗಲೇ 169 ಚಂಡಮಾರುತಗಳನ್ನು ಪಟ್ಟಿ ಮಾಡಿಟ್ಟಿವೆ. ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ್ದ ಅರ್ನಬ್​ ಎಂಬ ಹೆಸರಿನ ಚಂಡಮಾರುತ ಶೀಘ್ರದಲ್ಲೇ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಹಾಗೇ ಬಾಂಗ್ಲಾದೇಶ ಅರ್ನಬ್​ ಹೆಸರನ್ನು ಸಾಗರ ಎಂಬರ್ಥದಲ್ಲಿಯೇ ಸೂಚಿಸಿದೆ.

‘ಚೆಂದ ಚೆಂದದ’ ಹೆಸರು ಇಟ್ಕೊಂಡು ಅಪ್ಪಳಿಸುತ್ತವಲ್ಲ ಈ ಚಂಡಮಾರುತಗಳು! ಇವಕ್ಕೆ ಹೆಸರು ಇಡೋರು ಯಾರು?

ಬುರೇವಿ ಅಬ್ಬರಕ್ಕೆ ಏಳು ಬಲಿ; 300ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆ, ನೀರಿನಲ್ಲಿ ತೇಲಿಸಿಕೊಂಡು ಹೋಗುತ್ತಿವೆ ಜಾನುವಾರುಗಳು

ಚಂಡಮಾರುತಗಳಿಂದ ನಲುಗಿದ ತಮಿಳುನಾಡಿಗೆ ಅಮ್ಮಾ ಕ್ಯಾಂಟೀನ್ ಆಸರೆ

Published On - 10:47 am, Mon, 7 December 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!