ಕೊರೊನಾ ಕಂಟಕದ ಮಧ್ಯೆ ರಾಜಧಾನಿ ದೆಹಲಿಯಲ್ಲಿ ಭೂಕಂಪ!

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪವಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ದೆಹಲಿಯ ಉತ್ತರ ಭಾಗ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಕಂಪನಕ್ಕೆ‌ ಭಯದಿಂದ‌ ಮನೆಯೊಳಗಿದ್ದ ಜನ ಹೊರಕ್ಕೆ ಓಡಿ‌ ಬಂದಿದ್ದಾರೆ. ಇದೇ ವೇಳೆ‌ ದೆಹಲಿ‌, ಉತ್ತರ ಭಾಗದಲ್ಲಿ ‌ಭಾರಿ ಬಿರುಗಾಳಿ ಬೀಸಿದ ಅನುಭವ ಕೂಡ ಆಗಿದೆ. ಭೂಕಂಪ ಪ್ರಮಾಣ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿಯ ಉತ್ತರಕ್ಕೆ 9 ಕಿ.ಮೀ ದೂರ ಹಾಗೂ 5 ಕಿ.ಮೀ ಆಳಕ್ಕೆ ಕಂಪನದ ತೀವ್ರತೆ […]

ಕೊರೊನಾ ಕಂಟಕದ ಮಧ್ಯೆ ರಾಜಧಾನಿ ದೆಹಲಿಯಲ್ಲಿ ಭೂಕಂಪ!
ಸಾಧು ಶ್ರೀನಾಥ್​

Updated on: May 10, 2020 | 2:55 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪವಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ದೆಹಲಿಯ ಉತ್ತರ ಭಾಗ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಕಂಪನಕ್ಕೆ‌ ಭಯದಿಂದ‌ ಮನೆಯೊಳಗಿದ್ದ ಜನ ಹೊರಕ್ಕೆ ಓಡಿ‌ ಬಂದಿದ್ದಾರೆ.

ಇದೇ ವೇಳೆ‌ ದೆಹಲಿ‌, ಉತ್ತರ ಭಾಗದಲ್ಲಿ ‌ಭಾರಿ ಬಿರುಗಾಳಿ ಬೀಸಿದ ಅನುಭವ ಕೂಡ ಆಗಿದೆ. ಭೂಕಂಪ ಪ್ರಮಾಣ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿಯ ಉತ್ತರಕ್ಕೆ 9 ಕಿ.ಮೀ ದೂರ ಹಾಗೂ 5 ಕಿ.ಮೀ ಆಳಕ್ಕೆ ಕಂಪನದ ತೀವ್ರತೆ ಇತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ಇದು ಮೂರನೆ ಬಾರಿ ರಾಷ್ಟ್ರ ರಾಜಧಾನಿ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ.

Published On - 2:36 pm, Sun, 10 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us