ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣದ ಶಿವಸೇನಾಗೆ ಹೊಸ ಹೆಸರು ನಿಗದಿ ಪಡಿಸಿದ ಚುನಾವಣಾ ಆಯೋಗ

ಸೋಮವಾರದೊಳಗೆ ಪಕ್ಷದ ಮೂರು ವಿಭಿನ್ನ ಹೆಸರಿನ ಆಯ್ಕೆಗಳು ಮತ್ತು ಆಯಾ ಗುಂಪುಗಳಿಗೆ ಹಂಚಿಕೆಗಾಗಿ ಹಲವು ಉಚಿತ ಚಿಹ್ನೆಗಳನ್ನು ಸೂಚಿಸುವಂತೆ ಎರಡು ಗುಂಪುಗಳಿಗೆ ಚುನಾವಣಾ ಆಯೋಗ ಕೇಳಿಕೊಂಡಿದೆ.

ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣದ ಶಿವಸೇನಾಗೆ ಹೊಸ ಹೆಸರು ನಿಗದಿ ಪಡಿಸಿದ ಚುನಾವಣಾ ಆಯೋಗ
ಉದ್ಧವ್ ಠಾಕ್ರೆ- ಏಕನಾಥ್ ಶಿಂಧೆ
Updated By: ರಶ್ಮಿ ಕಲ್ಲಕಟ್ಟ

Updated on: Oct 11, 2022 | 6:22 PM

ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗವು ಸೋಮವಾರ ಶಿವಸೇನಾದ (Shivsena) ಉದ್ಧವ್  ಠಾಕ್ರೆ ನೇತೃತ್ವದ ಬಣಕ್ಕೆ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಕ್ಕೆ ‘ಬಾಳಾಸಾಹೆಬಂಚಿ ಶಿವಸೇನಾ’ ಎಂಬ ಹೆಸರನ್ನು ನಿಗದಿಪಡಿಸಿದೆ. ಚುನಾವಣಾ ಸಂಸ್ಥೆಯು ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷದ ಚಿಹ್ನೆಯಾಗಿ ಉರಿಯುತ್ತಿರುವ ದೊಂದಿ ನೀಡಿತು. ಆದರೆ, ಶಿಂಧೆ ಬಣಕ್ಕೆ ಪಕ್ಷದ ಚಿಹ್ನೆಯನ್ನು ನೀಡದೆ, ಹೊಸದಾಗಿ ಚಿಹ್ನೆಗಳ ಪಟ್ಟಿಯನ್ನು ನೀಡುವಂತೆ ಅದು ಹೇಳಿದೆ. ಹಿಂದಿನ ದಿನ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುವ ಭಾರತೀಯ ಚುನಾವಣಾ ಆಯೋಗದ (ECI) ಆದೇಶವನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಮಹಾರಾಷ್ಟ್ರದಲ್ಲಿ ಮುಂಬರುವ ಉಪಚುನಾವಣೆಯ ದೃಷ್ಟಿಯಿಂದ ಚುನಾವಣಾ ಆಯೋಗ, ಶಿವಸೇನಾದ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ತಡೆ ಹಿಡಿದು ಪಕ್ಷದ ಠಾಕ್ರೆ ಅವರ ಬಣ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಬಳಸದಂತೆ ನಿರ್ಬಂಧಿಸಿದೆ.

ಸೋಮವಾರದೊಳಗೆ ಪಕ್ಷದ ಮೂರು ವಿಭಿನ್ನ ಹೆಸರಿನ ಆಯ್ಕೆಗಳು ಮತ್ತು ಆಯಾ ಗುಂಪುಗಳಿಗೆ ಹಂಚಿಕೆಗಾಗಿ ಹಲವು ಉಚಿತ ಚಿಹ್ನೆಗಳನ್ನು ಸೂಚಿಸುವಂತೆ ಎರಡು ಗುಂಪುಗಳಿಗೆ ಚುನಾವಣಾ ಆಯೋಗ ಕೇಳಿಕೊಂಡಿದೆ.
ಆದಾಗ್ಯೂ, ಠಾಕ್ರೆ ಅವರ ಅರ್ಜಿಯು ಇಸಿಐನ ಅಕ್ಟೋಬರ್ 8 ರ ಆದೇಶವನ್ನು ಪ್ರಶ್ನಿಸಿದೆ. ಇದು ನೈಸರ್ಗಿಕ ನ್ಯಾಯದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಮತ್ತು ಕಕ್ಷಿದಾರರಿಗೆ ಯಾವುದೇ ವಿಚಾರಣೆಯನ್ನು ನೀಡದೆ ಅಂಗೀಕರಿಸಲ್ಪಟ್ಟಿದೆ ಎಂದು ಪ್ರತಿಪಾದಿಸಿತು.

ಅರ್ಜಿಯು ಇಸಿಐ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥರಾವ್ ಸಂಭಾಜಿ ಶಿಂಧೆ ಅವರನ್ನು ಕಕ್ಷಿದಾರರನ್ನಾಗಿಸಿದೆ.

Published On - 10:40 pm, Mon, 10 October 22