ಪಾಪಿಗಳು ಉಪ್ಪಿಗೂ ಕಲಬೆರಕೆ ಮಾಡ್ತಿದ್ದಾರೆ! ನಕಲಿ ಘಟಕದ ಮೇಲೆ ಪೊಲೀಸರ ದಾಳಿ

ನವದೆಹಲಿ: ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅಂತಾ ಕೇಳಿದ್ವಿ. ಆದ್ರೆ ಖದೀಮರು ನಕಲಿ ಉಪ್ಪು ತಯಾರಿಸಿ ಕಂಬಿ ಹಿಂದೆ ಹೋದ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು ಅಸಲಿ ಉಪ್ಪಿನ ತಲೆ ಮೇಲೆ ಹೊಡೆಯುವಂತೆ ನಕಲಿ ಉಪ್ಪು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ದೆಹಲಿಯ ಪ್ರಹ್ಲಾದ್‌ಪುರ್‌ ಬಂಗಾರ್‌ ಏರಿಯಾದಲ್ಲಿ ಈ ನಕಲಿ ಉಪ್ಪನ್ನು ತಯಾರಿಸಲಾಗುತ್ತಿತ್ತು. ಅದೂ ಅಂತಿಂಥ ಉಪ್ಪಲ್ಲ ಪಕ್ಕಾ ಬ್ರಾಂಡೆಡ್‌ ಟಾಟಾ ಉಪ್ಪು. ಆದ್ರೆ ಸಿಕ್ಕ ಸುಳಿವಿನ ಮೇಲೆ ನಕಲಿ […]

ಪಾಪಿಗಳು ಉಪ್ಪಿಗೂ ಕಲಬೆರಕೆ ಮಾಡ್ತಿದ್ದಾರೆ! ನಕಲಿ ಘಟಕದ ಮೇಲೆ ಪೊಲೀಸರ ದಾಳಿ
ಸಾಧು ಶ್ರೀನಾಥ್​

Updated on: Jul 03, 2020 | 2:44 PM

ನವದೆಹಲಿ: ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅಂತಾ ಕೇಳಿದ್ವಿ. ಆದ್ರೆ ಖದೀಮರು ನಕಲಿ ಉಪ್ಪು ತಯಾರಿಸಿ ಕಂಬಿ ಹಿಂದೆ ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

ಹೌದು ಅಸಲಿ ಉಪ್ಪಿನ ತಲೆ ಮೇಲೆ ಹೊಡೆಯುವಂತೆ ನಕಲಿ ಉಪ್ಪು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ದೆಹಲಿಯ ಪ್ರಹ್ಲಾದ್‌ಪುರ್‌ ಬಂಗಾರ್‌ ಏರಿಯಾದಲ್ಲಿ ಈ ನಕಲಿ ಉಪ್ಪನ್ನು ತಯಾರಿಸಲಾಗುತ್ತಿತ್ತು. ಅದೂ ಅಂತಿಂಥ ಉಪ್ಪಲ್ಲ ಪಕ್ಕಾ ಬ್ರಾಂಡೆಡ್‌ ಟಾಟಾ ಉಪ್ಪು.

ಆದ್ರೆ ಸಿಕ್ಕ ಸುಳಿವಿನ ಮೇಲೆ ನಕಲಿ ಉಪ್ಪು ತಯಾರಿಕಾ ಘಟಕದ ಮೇಲೆ ದಾಳಿ ಮಾಡಿರುವ ಪೊಲೀಸರು, ಮಾಲೀಕನನ್ನ ಬಂಧಿಸಿ ಕಂಬಿ ಹಿಂದೆ ಹಾಕಿದ್ದಾರೆ. ಇಷ್ಟೇ ಅಲ್ಲ ಆತ ಮತ್ತು ಆತನ ಸಹಚರರ ಮೇಲೆ ಕಾಪಿರೈಟ್‌ ಉಲ್ಲಂಘನೆಯ ಕ್ರಿಮಿನಲ್‌ ಕೇಸ್‌ ಜಡಿದಿದ್ದಾರೆ.

Published On - 11:40 am, Fri, 3 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us