ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ: ನರೇಂದ್ರ ಮೋದಿ

ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ದಾಳಿ ನಡೆಸಿಕೊಂಡು ಪ್ರಧಾನಿ ಮೋದಿ ಕೆಂಡಾಮಂಡಲವಾದರು. ಗುರುವಾರ ಬಿಕಾನೇರ್​ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ ಬಿಸಿ ಸಿಂಧೂರ, ಈಗ ಮನಸ್ಸು ಶಾಂತವಾಗಿದೆ ಆದರೆ ರಕ್ತ ಕುದಿಯುತ್ತಿದೆ ಎಂದು ಪಹಲ್ಗಾಮ್ ದಾಳಿಯನ್ನು ನೆನಪಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ: ನರೇಂದ್ರ ಮೋದಿ
ನರೇಂದ್ರ ಮೋದಿ
Image Credit source: PTI

Updated on: May 22, 2025 | 2:29 PM

ಬಿಕಾನೇರ್, ಮೇ 22: ‘‘ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ’’ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಗುರುವಾರ ಬಿಕಾನೇರ್​ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ ಬಿಸಿ ಸಿಂಧೂರ, ಈಗ ಮನಸ್ಸು ಶಾಂತವಾಗಿದೆ ಆದರೆ ರಕ್ತ ಕುದಿಯುತ್ತಿದೆ ಎಂದು ಪಹಲ್ಗಾಮ್ ದಾಳಿಯನ್ನು ನೆನಪಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಕೂದಲಿನಿಂದ ಸಿಂಧೂರವನ್ನು ಅಳಿಸಲು ಬಂಧವರು ಧೂಳಾಗಿ ಹೋದರು ಎಂದು ಹೇಳುತ್ತಾ ಪ್ರಧಾನಿ ಮೋದಿ ಭಾರತೀಯ ಸೇನೆಯ ಶೌರ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದರು.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ, ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಅವರು ಬೆಲೆ ತೆರಬೇಕಾಗುತ್ತದೆ. ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಏಪ್ರಿಲ್ 22 ರಂದು ನಮ್ಮ ಸಹೋದರಿಯರ ಧರ್ಮವನ್ನು ಕೇಳಿದ ನಂತರ ಅವರ ಸಿಂಧೂರವನ್ನು ತೆಗೆದುಹಾಕಲಾಯಿತು.

ಮತ್ತಷ್ಟು ಓದಿ: ಪಹಲ್ಗಾಮ್​ ದಾಳಿಗೆ ಒಂದು ತಿಂಗಳು, ಆಪರೇಷನ್​ ಸಿಂಧೂರ್​ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ

140 ಕೋಟಿ ದೇಶವಾಸಿಗಳು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸಂಕಲ್ಪ ಮಾಡಿದ್ದರು. ನಮ್ಮ ಸರ್ಕಾರ ಮೂರೂ ಪಡೆಗಳಿಗೂ ಮುಕ್ತ ಸ್ವಾತಂತ್ರ್ಯ ನೀಡಿತು. ಮೂರು ಪಡೆಗಳು ಒಟ್ಟಾಗಿ ಪಾಕಿಸ್ತಾನವನ್ನು ಶರಣಾಗುವಂತೆ ಒತ್ತಾಯಿಸಿದವು.

ಏಪ್ರಿಲ್ 22ರ ದಾಳಿಗೆ 22 ನಿಮಿಷಗಳಲ್ಲಿ ಪ್ರತ್ಯುತ್ತರ
22 ರಂದು ನಡೆದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 22 ನಿಮಿಷಗಳಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು ಎಂದು ಪ್ರಧಾನಿ ಮೋದಿ ಹೇಳಿದರು. ಕುಂಕುಮವು ಗನ್‌ಪೌಡರ್ ಆಗಿ ಬದಲಾದಾಗ ಏನಾಗುತ್ತದೆ ಎಂದು ಎಲ್ಲರೂ ನೋಡಿದ್ದಾರೆ. ನನ್ನ ದೇಶವಾಸಿಗಳಿಗೆ ನಾನು ಹೇಳುವುದೇನೆಂದರೆ, ಸಿಂಧೂರವನ್ನು ಒರೆಸಲು ಬಂದವರು ಧೂಳಿನೊಂದಿಗೆ ಬೆರೆತುಹೋಗಿದ್ದಾರೆ.

ಭಾರತದಲ್ಲಿ ಚೆಲ್ಲಲ್ಪಟ್ಟ ಪ್ರತಿಯೊಂದು ರಕ್ತದ ಹನಿಗೂ ಪ್ರತೀಕಾರ ತೀರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು ಇಂದು ಅವಶೇಷಗಳ ರಾಶಿಯಲ್ಲಿ ಹೂತುಹೋಗಿದ್ದಾರೆ.

ಭಾರತದ ವಿರುದ್ಧ ನೇರ ಯುದ್ಧದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಅವನು ಹೋರಾಡಿದಾಗಲೆಲ್ಲಾ ಸೋಲನ್ನು ಎದುರಿಸಿದ್ದಾರೆ. ಇನ್ನು ಮುಂದೆ ಪಾಕಿಸ್ತಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಚರ್ಚೆ.   ಭಾರತದ ನ್ಯಾಯಯುತವಾದ ನೀರಿನ ಪಾಲನ್ನು ಪಾಕಿಸ್ತಾನ ಪಡೆಯುವುದಿಲ್ಲ. ಭಾರತದ ರಕ್ತದೊಂದಿಗೆ ಆಟವಾಡಿದ್ದಕ್ಕೆ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ.

ಅದಕ್ಕಾಗಿಯೇ ಪಾಕಿಸ್ತಾನವು ಭಾರತದ ವಿರುದ್ಧ ಹೋರಾಡಲು ಭಯೋತ್ಪಾದನೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಸ್ವಾತಂತ್ರ್ಯದ ನಂತರ ಕಳೆದ ಹಲವಾರು ದಶಕಗಳಿಂದ ಇದು ನಡೆಯುತ್ತಿದೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿತ್ತು, ಮುಗ್ಧ ಜನರನ್ನು ಕೊಲ್ಲುತ್ತಿತ್ತು, ಭಯದ ವಾತಾವರಣವನ್ನು ಸೃಷ್ಟಿಸುತ್ತಿತ್ತು ಆದರೆ ಪಾಕಿಸ್ತಾನ ಒಂದು ವಿಷಯವನ್ನು ಮರೆತಿದೆ.

ಈಗ ಭಾರತ ಮಾತೆಯ ಸೇವಕ ಮೋದಿ ಇಲ್ಲಿ ತಲೆ ಎತ್ತಿ ನಿಂತಿದ್ದಾರೆ. ಮೋದಿ ಅವರ ಮನಸ್ಸು ಶಾಂತವಾಗಿರುತ್ತದೆ,ಆದರೆ ಅವರ ರಕ್ತ ಬಿಸಿಯಾಗಿ ಹರಿಯುತ್ತದೆ. ಈಗ ಮೋದಿಯ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬದಲಾಗಿ ಬಿಸಿ ಸಿಂಧೂರ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ