ಸಾಲದ ಕಂತು ಪಾವತಿ ವಿಳಂಬ, ಅವಮಾನ ತಾಳಲಾರದೆ ಬಾಲಕಿ ಆತ್ಮಹತ್ಯೆ

ಸಹೋದರ ಸಾಲದ ಕಂತು ಪಾವತಿ ಮಾಡುವಲ್ಲಿ ವಿಳಂಬ ಮಾಡಿದ್ದಕ್ಕೆ ಅವಮಾನ ಅನುಭವಿಸಿದ ಬಾಲಕಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಹೋದರನ 585 ರೂ. ಸಾಲದ ಕಂತು ಪಾವತಿಸಲು ಸ್ವಲ್ಪ ವಿಳಂಬ ಮಾಡಿದ ಕಾರಣಕ್ಕೆ 17 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್​ನ ಛತ್ರದಲ್ಲಿ ನಡೆದಿದೆ.

ಸಾಲದ ಕಂತು ಪಾವತಿ ವಿಳಂಬ, ಅವಮಾನ ತಾಳಲಾರದೆ ಬಾಲಕಿ ಆತ್ಮಹತ್ಯೆ
ಸಾವು-ಸಾಂದರ್ಭಿಕ ಚಿತ್ರ
Image Credit source: NDTV

Updated on: Oct 03, 2023 | 11:30 AM

ಸಹೋದರ ಸಾಲದ ಕಂತು ಪಾವತಿ ಮಾಡುವಲ್ಲಿ ವಿಳಂಬ ಮಾಡಿದ್ದಕ್ಕೆ ಅವಮಾನ ಅನುಭವಿಸಿದ ಬಾಲಕಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಹೋದರನ 585 ರೂ. ಸಾಲದ ಕಂತು ಪಾವತಿಸಲು ಸ್ವಲ್ಪ ವಿಳಂಬ ಮಾಡಿದ ಕಾರಣಕ್ಕೆ 17 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್​ನ ಛತ್ರದಲ್ಲಿ ನಡೆದಿದೆ.

ಸುಮಾರು 3 ತಿಂಗಳ ಹಿಂದೆ ಆಕೆಯ ಸಹೋದರ ಸಂಸ್ಥೆಯಿಂದ 25 ಸಾವಿರ ರೂ ಸಾಲ ಪಡೆದಿದ್ದ, ಮಾಸಿಕ ಹಣ ಪಾವತಿ ಮಾಡಲು ಕ್ಯಾಸ್ಪೋರ್ ಮೈಕ್ರೋ ಫೈನಾನ್ಸ್ ಕಂಪನಿಯ ಕಚೇರಿಗೆ ಭೇಟಿ ನೀಡಿದ್ದಳು. ಕಂಪನಿಯ ಉದ್ಯೋಗಿಯೊಬ್ಬರು ಬಾಲಕಿಯ ಕುಟುಂಬದವರು ಸೇರಿದಂತೆ ಗ್ರಾಮಸ್ಥರಿಂದ ಕಂತು ವಸೂಲಿ ಮಾಡಲು ಗ್ರಾಮಕ್ಕೆ ಬಂದಿದ್ದರು. ಆಕೆಯ ಸಹೋದರ ಮನೆಯಲ್ಲಿ ಇಲ್ಲದ ಕಾರಣ, ಕುಟುಂಬಕ್ಕೆ ಸಮಯಕ್ಕೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ.

ಅದೇ ದಿನ, ಹುಡುಗಿ ಸ್ವತಃ ಹಣವನ್ನು ಠೇವಣಿ ಮಾಡಲು ಸಂಸ್ಥೆಯ ಕಚೇರಿಗೆ ಹೋದಳು. ಸುನೀಲ್ ಕುಮಾರ್ ಪಾಸ್ವಾನ್ ಎಂದು ಗುರುತಿಸಲಾದ ಉದ್ಯೋಗಿಯೊಬ್ಬರು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಮತ್ತು ತಡವಾಗಿ ಪಾವತಿಸಿದ್ದಕ್ಕಾಗಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯಿಂದ ಅವಮಾನಕ್ಕೊಳಗಾದ ಅವಳು ಮನೆಗೆ ಹಿಂದಿರುಗಿದಳು ಮತ್ತು ನಂತರ ವಿಷ ಕುಡಿದಿದ್ದಾಳೆ. ಆಸ್ಪತ್ರೆಗೆ ಸಾಗಿಸಿದರೂ, ಆಕೆಯ ಸ್ಥಿತಿಯು ಹದಗೆಟ್ಟಿದ್ದ ಕಾರಣ ಹಜಾರಿಬಾಗ್‌ನ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಪೊಲೀಸರು ತನಿಖೆ ಆರಂಭಿಸಿದ್ದಾರೆ, ತಪ್ಪಿಗೆ ಕಾರಣರಾದವರನ್ನು ಪತ್ತೆ ಮಾಡಲು ನಾವು ಕ್ರಮ ಕೈಗೊಂಡಿದ್ದೇವೆ. ಯಾವುದೇ ದೂರು ದಾಖಲಿಸಿಕೊಂಡಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ