AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ: ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್‌ ನೌಕರ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಡಿ ಗ್ರೂಪ್‌ ನೌಕರ ಕಚೇರಿಯಲ್ಲೇ ಸಿಬ್ಬಂದಿ ಎದುರೇ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.ಪುರಸಭೆ ಮುಖ್ಯಾಧಿಕಾರಿ ಶ್ವೇತಾಬಾಯಿ ವಿರುದ್ಧ ನೌಕರ ವೇಣು ಕುಟುಂಬಸ್ಥರು ಕಿರುಕುಳ ಆರೋಪ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ: ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್‌ ನೌಕರ
ಡಿ ಗ್ರೂಪ್ ನೌಕರ ವೇಣು
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2023 | 5:23 PM

ಆನೇಕಲ್, ಸೆಪ್ಟೆಂಬರ್​ 30: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ (harassment) ಆರೋಪ ಕೇಳಿಬಂದಿದ್ದು, ಡಿ ಗ್ರೂಪ್‌ ನೌಕರ ಕಚೇರಿಯಲ್ಲೇ ಸಿಬ್ಬಂದಿ ಎದುರೇ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ವೇಣು ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲಾಗಿದೆ ಎನ್ನಲಾಗುತ್ತಿದ್ದು, ಅಸ್ವಸ್ಥ ನೌಕರ ವೇಣುಗೆ ಚಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಶ್ವೇತಾಬಾಯಿ ವಿರುದ್ಧ ನೌಕರ ವೇಣು ಕುಟುಂಬಸ್ಥರು ಕಿರುಕುಳ ಆರೋಪ ಮಾಡಿದ್ದಾರೆ. ಶ್ವೇತಾಬಾಯಿ ಟಾರ್ಚರ್ ಕೊಟ್ಟಿದ್ದಾರೆ ಎಂದು ವೇಣು ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಕಿರುಕುಳದ ಬಗ್ಗೆ ಮೂರು ದಿನಗಳಿಂದ ಮನೆಯಲ್ಲಿ ಹೇಳುತ್ತಿದ್ದರು. ತುಂಬಾ ಕಿರುಕುಳ ನೀಡ್ತಿದ್ದಾರೆ ವಿಷ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಇಂದೂ ಕಚೇರಿಯಲ್ಲಿ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಪುಡ್ ಕಾರ್ಪೋರೇಷನ್​​ಗೆ ನಾಮನಿರ್ದೇಶನ ಹೆಸರಲ್ಲಿ ವ್ಯಕ್ತಿಗೆ 5.60 ಲಕ್ಷ ರೂ. ವಂಚನೆ

ಡಿ ಗ್ರೂಪ್‌ ನೌಕರ ವೇಣು ಕಳೆದ 15 ವರ್ಷದಿಂದ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಚಂದಾಪುರದ ಬೆಸ್ಟ್ ಆಸ್ಪತ್ರೆ ಬಳಿ ಜನ ಜಮಾಯಿಸಿದ್ದಾರೆ.

ಶಿಕ್ಷಕಿಗೆ ಸಹೋದ್ಯೋಗಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ: ಎಫ್‌ಐಆರ್​ ದಾಖಲು

ಚಿಕ್ಕಬಳ್ಳಾಪುರ: ಶಾಲಾ ಶಿಕ್ಷಕಿಗೆ ಸಹೋದ್ಯೋಗಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಬಂದಿರುವಂತಹ ಘಟನೆ ಇತ್ತೇಚೆಗೆ ಜಿಲ್ಲೆಯ ಮಂಚೇನಹಳ್ಳಿಯ ಆಚಾರ್ಯ ಪ್ರೌಢಶಾಲೆಯಲ್ಲಿ ನಡೆದಿತ್ತು. ಶಿಕ್ಷಕ ರಂಗಧಾಮಯ್ಯ ವಿರುದ್ಧ ಮಂಚೇನಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 354(A), 354(D), 504ರಡಿ ಎಫ್​ಐಆರ್​​ ದಾಖಲಿಸಲಾಗಿತ್ತು. ಮಹಿಳೆಯರ ವಿಶ್ರಾಂತಿ ಕೊಠಡಿಗೆ ಆಗಮಿಸಿ ಕಿರುಕುಳ ನೀಡಿರುವುದಾಗಿ ಆರೋಪ ಮಾಡಲಾಗಿತ್ತು.

ಇದನ್ನೂ ಓದಿ: ಮಗಳ ಜೊತೆ ಅನೈತಿಕ ಸಂಬಂಧ: ಯುವಕನನ್ನು ಕೊಂದು 24 ಗಂಟೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ತಂದೆ

ಶಿಕ್ಷಕಿ ಹೋದ ಕಡೆಯೆಲ್ಲಾ ಬೆನ್ನಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾರೆ ಎನ್ನಲಾಗಿತ್ತು. ಸಹೋದ್ಯೋಗಿಯಿಂದ ನೊಂದು ಸಹ ಶಿಕ್ಷಕಿ ಪೊಲೀಸರ ಮೊರೆ ಹೋಗಿದ್ದು, ಶಿಕ್ಷಕಿ ದೂರಿನ ಮೇರೆಗೆ ಶಿಕ್ಷಕ ಆರ್‌.ರಂಗಧಾಮಯ್ಯ ವಿರುದ್ಧ ಎಫ್‌ಐಆರ್​ ದಾಖಲು ಮಾಡಲಾಗಿತ್ತು.

ಗಣೇಶೋತ್ಸವ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಬಿದ್ದು ಮಹಿಳೆ ಸಾವು

ರಾಯಚೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್​ ಮಾಡುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ರಾಯಚೂರಿನ ಜಲಾಲ್ ನಗರದಲ್ಲಿ ಸೆ.23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೆಲುಗು ಹಾಡಿಗೆ ಹೆಜ್ಜೆ ಹಾಕುವ ವೇಳೆ ಹೃದಯಾಘಾತವಾಗಿದೆ. ಅನಂತಮ್ಮ(56) ಮೃತ  ಮಹಿಳೆ. ಮಾರ್ಕೆಟ್ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!