ತಹಶೀಲ್ದಾರ್ ವಿಜಯಾ ಸಜೀವ ದಹನ ಪ್ರಕರಣ: ಆರೋಪಿಯೂ ಸತ್ತ

ಹೈದರಾಬಾದ್​: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾ ಪುರಮೇಟದಲ್ಲಿ ನಡೆದಿದ್ದ ತಹಶೀಲ್ದಾರ್​ ವಿಜಯಾ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಸಹ ಸುಟ್ಟಗಾಯಗಳ ಫಲವಾಗಿ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಆರೋಪಿ ಸುರೇಶ್ ತಹಶೀಲ್ದಾರ್‌ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಆ ವೇಳೆ, ತಹಶೀಲ್ದಾರ್‌ ವಿಜಯಾ ಅವರ ವಾಹನ ಚಾಲಕ ಅವರ ನೆರವಿಗೆ ಧಾವಿಸಿದ್ದ. ಆ ವೇಳೆ ಆತನಿಗೂ ಸುಟ್ಟಗಾಯಗಳಾಗಿ ಆಸ್ಪತ್ರೆ ಸೇರಿದ್ದ. ಆದ್ರೆ ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಡ್ರೈವರ್​ ಸಾವನ್ನಪ್ಪಿದ್ದ. ಇನ್ನು ಘಟನೆ ವೇಳೆ ಆರೋಪಿಗೂ ತೀವ್ರ ರೀತಿಯಲ್ಲಿ […]

ತಹಶೀಲ್ದಾರ್ ವಿಜಯಾ ಸಜೀವ ದಹನ ಪ್ರಕರಣ: ಆರೋಪಿಯೂ ಸತ್ತ
ಸಾಧು ಶ್ರೀನಾಥ್​

Updated on: Nov 07, 2019 | 2:56 PM

ಹೈದರಾಬಾದ್​: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾ ಪುರಮೇಟದಲ್ಲಿ ನಡೆದಿದ್ದ ತಹಶೀಲ್ದಾರ್​ ವಿಜಯಾ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಸಹ ಸುಟ್ಟಗಾಯಗಳ ಫಲವಾಗಿ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಆರೋಪಿ ಸುರೇಶ್ ತಹಶೀಲ್ದಾರ್‌ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಆ ವೇಳೆ, ತಹಶೀಲ್ದಾರ್‌ ವಿಜಯಾ ಅವರ ವಾಹನ ಚಾಲಕ ಅವರ ನೆರವಿಗೆ ಧಾವಿಸಿದ್ದ. ಆ ವೇಳೆ ಆತನಿಗೂ ಸುಟ್ಟಗಾಯಗಳಾಗಿ ಆಸ್ಪತ್ರೆ ಸೇರಿದ್ದ. ಆದ್ರೆ ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಡ್ರೈವರ್​ ಸಾವನ್ನಪ್ಪಿದ್ದ. ಇನ್ನು ಘಟನೆ ವೇಳೆ ಆರೋಪಿಗೂ ತೀವ್ರ ರೀತಿಯಲ್ಲಿ ಸುಟ್ಟಗಾಯಗಳಾಗಿದ್ದವು. ಉಸ್ಮಾನಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಇಂದು ಸಾವಿಗೀಡಾಗಿದ್ದಾನೆ.

Published On - 2:00 pm, Thu, 7 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us