Delhi Excise Policy: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಶುಕ್ರವಾರ ಹಾಜರ್​​

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಮತ್ತು ಅವರ ಪುತ್ರ ರಾಘವ ರೆಡ್ಡಿ ಅನುಮೋದಕರಾಗಿದ್ದಾರೆ (approver). ಹಾಗಾಗಿ ಕವಿತಾಗೆ ಬುಲಾವ್​​ ನೀಡಲಾಗಿದೆ ಎನ್ನಲಾಗಿದೆ.

Delhi Excise Policy: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಶುಕ್ರವಾರ ಹಾಜರ್​​
ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಹಾಜರ್​​
ಸಾಧು ಶ್ರೀನಾಥ್​

Updated on: Sep 14, 2023 | 3:58 PM

ದೆಹಲಿ ಮದ್ಯ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Delhi Excise Policy case) ಸಂಬಂಧಿಸಿದಂತೆ ಬಿಆರ್‌ಎಸ್ ಎಂಎಲ್‌ಸಿ ಮತ್ತು ಸಿಎಂ ಕೆ ಚಂದ್ರಶೇಖರ್ ರಾವ್ (BRS MLC and CM K Chandrasekhar Rao) ಅವರ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ -ED) ಗುರುವಾರ ಬುಲಾವ್​ ಕೊಟ್ಟಿದೆ. ನಾಳೆ ಶುಕ್ರವಾರ, ಸೆಪ್ಟೆಂಬರ್ 15 ರಂದು ದೆಹಲಿಯ ಇ.ಡಿ ಕಚೇರಿಗೆ (Enforcement Directorate -ED) ಹಾಜರಾಗುವಂತೆ ಕವಿತಾಗೆ ತಿಳಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಕವಿತಾರನ್ನು ಮತ್ತೆ ತನಿಖೆಗೆ ಕರೆಯಬಹುದು ಎಂದು ಅಂದಾಜಿಸಲಾಗಿತ್ತು.

ವೈಎಸ್‌ಆರ್‌ಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ, ಅವರ ಪುತ್ರ ರಾಘವ ರೆಡ್ಡಿ ಅವರು ಪ್ರಕರಣದಲ್ಲಿ ಅನುಮೋದಕರಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಕವಿತಾಗೆ ಬುಲಾವ್​​ ನೀಡಲಾಗಿದೆ ಎನ್ನಲಾಗಿದೆ. ಕವಿತಾರನ್ನು ಈ ಹಿಂದೆ ಇ.ಡಿ. ಎರಡು ಬಾರಿ ಮತ್ತು ಈ ವರ್ಷದ ಆರಂಭದಲ್ಲಿ ಸಿಬಿಐ ಒಂದು ಬಾರಿ ಪ್ರಶ್ನಿಸಿತ್ತು. ಆದರೆ ಇತ್ತೀಚೆಗೆ ಅವರ ವಿಚಾರಣೆಯಲ್ಲಿ ವಿರಾಮ ಕಂಡುಬಂದಿತ್ತು.

Also Read: ಜೈಲಿನಲ್ಲಿ ಚಂದ್ರಬಾಬು ನಾಯ್ಡು ಭೇಟಿಯಾದ ಪವನ್ ಕಲ್ಯಾಣ್: ಟಿಡಿಪಿ-ಜನಸೇನೆ ಒಟ್ಟಾಗಿ ಆಂದ್ರ ಅಸೆಂಬ್ಲಿ ಚುನಾವಣೆ

ಈ ಸುತ್ತಿನ ವಿಚಾರಣೆಯು ಚಾರ್ಟರ್ಡ್ ಫ್ಲೈಟ್‌ಗಳು ಸೇರಿದಂತೆ ವಿವಿಧ ಸಾರಿಗೆ ವಿಧಾನಗಳ ಮೂಲಕ ಹೈದರಾಬಾದ್‌ನಿಂದ ದೆಹಲಿಗೆ ನಗದು ವರ್ಗಾವಣೆಯ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಇ.ಡಿ ತನಿಖಾ ತಂಡವು ಕೂಲಂಕಷ ಪರೀಕ್ಷೆಗೆ ಒಳಗಾಗಿದ್ದು, ಹೊಸ ತಂಡವು ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us