Sign In

By signing in or creating an account, you agree with Associated Broadcasting Company's Terms & Conditions and Privacy Policy.

Janata Curfew Anniversary: ಜನತಾ ಕರ್ಫ್ಯೂಗೆ ಒಂದು ವರ್ಷ; ನೆನಪಿದೆಯಾ? ಇಡೀ ದೇಶ ಸ್ತಬ್ಧವಾಗಿದ್ದು.. ಸಂಜೆ ಚಪ್ಪಾಳೆ, ಜಾಗಟೆ ಹೊಡೆದಿದ್ದು!

ಇದೀಗ ಜನತಾ ಕರ್ಫ್ಯೂವಿಗೆ ಒಂದು ವರ್ಷ. ಭಾರತೀಯರು ಜನತಾ ಕರ್ಫ್ಯೂವಿನ ಆ್ಯನಿವರ್ಸರಿ ಆಚರಿಸುತ್ತಿದ್ದಾರೆ. ಕಳೆದ ವರ್ಷದ ಕೆಲವು ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫನ್ನಿ ವಿಡಿಯೋಗಳೊಂದಿಗೆ, ಫನ್ನಿ ಎನ್ನಿಸುವ ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಟ್ವಿಟರ್​​ನಲ್ಲಿ #JanataCurfew ಟ್ರೆಂಡ್ ಆಗುತ್ತಿದೆ.

Janata Curfew Anniversary: ಜನತಾ ಕರ್ಫ್ಯೂಗೆ ಒಂದು ವರ್ಷ; ನೆನಪಿದೆಯಾ? ಇಡೀ ದೇಶ ಸ್ತಬ್ಧವಾಗಿದ್ದು.. ಸಂಜೆ ಚಪ್ಪಾಳೆ, ಜಾಗಟೆ ಹೊಡೆದಿದ್ದು!
ಕಳೆದ ವರ್ಷ ಜನತಾ ಕರ್ಫ್ಯೂವಿನ ಸಂದರ್ಭದ ಚಿತ್ರ
Follow us
Lakshmi Hegde
|

Updated on:Mar 22, 2021 | 3:09 PM

ದೆಹಲಿ: ನಿಮಗೆ ನೆನಪಿದೆಯಾ? ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ ಮಾರ್ಚ್​ 22ರಂದು ಕೊರೊನಾ ವಿರುದ್ಧ ಹೋರಾಟದ ಮೊದಲ ಹೆಜ್ಜೆ ಪ್ರಾರಂಭವಾಗಿತ್ತು. ಅಂದರೆ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರು. ಈ ಜನತಾ ಕರ್ಫ್ಯೂ ಬೆಳಗ್ಗೆ 7ಗಂಟೆಯಿಂದ ಸಂಜೆ 9ಗಂಟೆಯವರೆಗೆ ಜಾರಿಯಲ್ಲಿತ್ತು. ಹಾಗೆ, ಅಂದು ಸಂಜೆ 5ಗಂಟೆ ಹೊತ್ತಿಗೆ ಎಲ್ಲರೂ ತಮ್ಮ ಮನೆಯಿಂದ ಹೊರಬಂದು, ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಸುವ ಸಲುವಾಗಿ ಚಪ್ಪಾಳೆ ಹೊಡೆಯಿರಿ ಎಂದು ಮೋದಿಯವರು ಹೇಳಿದ್ದರು. ಮೋದಿಯವರ ಮಾತಿಗೆ ಗೌರವ ಕೊಟ್ಟು  ದೇಶಾದ್ಯಂತ ಜನರು ಕ್ಲ್ಯಾಪ್ಸ್​ ಹೊಡೆದಿದ್ದರು. ಕೆಲವರಂತೂ ಜಾಗಟೆ, ಡ್ರಮ್​​ಗಳ ಸೌಂಡ್​ ಕೂಡ ಮಾಡಿದ್ದರು.

ಮೋದಿಯವರು ಘೋಷಿಸಿದ್ದ ಜನತಾ ಕರ್ಫ್ಯೂಗೆ ದೇಶದೆಲ್ಲೆಡೆಯಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತ್ತು. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಜನರು ರಸ್ತೆಗಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೂ ಇದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಬೆಲೆ ಕೊಟ್ಟು ರಸ್ತೆಗೆ ಇಳಿಯದ ಜನರು ಸರಿಯಾಗಿ 5ಗಂಟೆಗೆ ತಮ್ಮತಮ್ಮ ಮನೆಯ ಅಂಗಳ, ಬಾಲ್ಕನಿ, ಕಿಟಕಿಯ ಬಳಿ ಬಂದು ಚಪ್ಪಾಳೆ ಹೊಡೆದಿದ್ದರು. ಕೆಲವರು ಪ್ಲೇಟ್​ಗಳನ್ನು ಬಡಿದಿದ್ದರು.. ಶಂಖನಾದ ಮೊಳಗಿಸಿದ್ದರು.. ಈ ಮೂಲಕ ಕೊರೊನಾ ವಾರಿರ್ಯಸ್​ ಆಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದ್ದರು.

ಇದೀಗ ಜನತಾ ಕರ್ಫ್ಯೂವಿಗೆ ಒಂದು ವರ್ಷ. ಭಾರತೀಯರು ಜನತಾ ಕರ್ಫ್ಯೂವಿನ ಆ್ಯನಿವರ್ಸರಿ ಆಚರಿಸುತ್ತಿದ್ದಾರೆ. ಕಳೆದ ವರ್ಷದ ಕೆಲವು ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫನ್ನಿ ವಿಡಿಯೋಗಳೊಂದಿಗೆ, ಫನ್ನಿ ಎನ್ನಿಸುವ ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಟ್ವಿಟರ್​​ನಲ್ಲಿ #JanataCurfew ಟ್ರೆಂಡ್ ಆಗುತ್ತಿದೆ. ಆದರೆ ಈ ವರ್ಷವೂ ಕೂಡ ಮಾರ್ಚ್​ 10ರಿಂದೀಚೆಗೆ ಕೊರೊನಾ ಸೋಂಕಿನ ಸಂಖ್ಯೆ ಮಿತಿಮೀರುತ್ತಿದೆ. ದಿನದಿನವೂ ಸೋಂಕಿನ ಪ್ರಸರಣದ ಪ್ರಮಾಣ ಏರುತ್ತಿದೆ. ದೇಶದಲ್ಲಿ ಮತ್ತೆ ಲಾಕ್​ಡೌನ್​ ಅನಿವಾರ್ಯವಾಗಲಿದೆಯಾ ಎಂಬ ಆತಂಕದೊಂದಿಗಿನ ಅನುಮಾನ ಸಹಜವಾಗಿಯೇ ಮೂಡಿದೆ.

ಇಲ್ಲಿದೆ ನೋಡಿ ಜನತಾ ಕರ್ಫ್ಯೂ ಒಂದನೇ ವರ್ಷದ ಆ್ಯನಿವರ್ಸರಿಯಂದು ನೆಟ್ಟಿಗರು ಶೇರ್ ಮಾಡಿಕೊಂಡ ಕೆಲವು ವಿಡಿಯೋಗಳು..

Published On - 3:01 pm, Mon, 22 March 21

ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ