Manipur violence: ಮಣಿಪುರ ಹಿಂಸಾಚಾರ ನಮ್ಮ ರಾಷ್ಟ್ರದ ಆತ್ಮಸಾಕ್ಷಿಯಲ್ಲಿ ಆಳವಾದ ಗಾಯವನ್ನುಂಟುಮಾಡಿದೆ: ಸೋನಿಯಾ ಗಾಂಧಿ

|

Updated on: Jun 21, 2023 | 9:00 PM

ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ, ನಾವು ನಂಬಿಕೆಯನ್ನು ಪುನರ್ನಿರ್ಮಿಸುವ ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತೇವೆ .ಈ ಪ್ರಯೋಗದಿಂದ ಮತ್ತೆ ಎದ್ದು ನಿಲ್ಲುತ್ತೇವೆ ಎಂಬುದು ನನ್ನ ಪ್ರಾಮಾಣಿಕ ಆಶಯವಾಗಿದೆ. ಮಣಿಪುರದ ಜನರಲ್ಲಿ ನನಗೆ ಅಪಾರ ಭರವಸೆ ಮತ್ತು ನಂಬಿಕೆ ಇದೆ.

Manipur violence: ಮಣಿಪುರ ಹಿಂಸಾಚಾರ ನಮ್ಮ ರಾಷ್ಟ್ರದ ಆತ್ಮಸಾಕ್ಷಿಯಲ್ಲಿ ಆಳವಾದ ಗಾಯವನ್ನುಂಟುಮಾಡಿದೆ: ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಬುಧವಾರ ಮಣಿಪುರದಲ್ಲಿ (Manipur violence) ಶಾಂತಿ ಕಾಪಾಡುವಂತೆ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಮಣಿಪುರದ ಜನರು ನಂಬಿಕೆಯನ್ನು ಮರಳಿ ಪಡೆದು ಪುಟಿದೇಳಬೇಕು ಎಂದು ಸೋನಿಯಾ ಮಣಿಪುರದ ಜನತೆಗೆ ಮನವಿ ಮಾಡಿದ್ದಾರೆ. ಮಣಿಪುರದ ಇತಿಹಾಸವು ಎಲ್ಲಾ ಜನಾಂಗಗಳು, ಧರ್ಮಗಳು ಮತ್ತು ಹಿನ್ನೆಲೆಗಳ ಜನರನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ವೈವಿಧ್ಯಮಯ ಸಮಾಜದ ಅಸಂಖ್ಯಾತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಭ್ರಾತೃತ್ವದ ಮನೋಭಾವವನ್ನು ಪೋಷಿಸಲು ಇದಕ್ಕೆ ಅಪಾರವಾದ ನಂಬಿಕೆ ಬೇಕು.ಆದರೆ ದ್ವೇಷ ಮತ್ತು ವಿಭಜನೆಯ ಬೆಂಕಿ ಉಂಟುಮಾಡಲು ಒಂದೇ ತಪ್ಪು ಹೆಜ್ಜೆ ಸಾಕು.

ಇಂದು, ನಾವು ಪ್ರಮುಖ ಕವಲುದಾರಿಯಲ್ಲಿದ್ದೇವೆ. ಪರಿಸ್ಥಿತಿ ಸುಧಾರಿಸುವ ಹಾದಿಯನ್ನು ಪ್ರಾರಂಭಿಸುವ ನಮ್ಮ ಆಯ್ಕೆಯು ನಮ್ಮ ಮಕ್ಕಳು ಆನುವಂಶಿಕವಾಗಿ ಪಡೆಯುವ ರೀತಿಯ ಭವಿಷ್ಯವನ್ನು ರೂಪಿಸುತ್ತದೆ. ನಾನು ಮಣಿಪುರದ ಜನರಿಗೆ, ವಿಶೇಷವಾಗಿ ನನ್ನ ಧೈರ್ಯಶಾಲಿ ಸಹೋದರಿಯರಲ್ಲಿ ಈ ಸುಂದರ ಭೂಮಿಗೆ ಸಾಮರಸ್ಯ ಮತ್ತು ಶಾಂತಿಯನ್ನು ತರಲು ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತೇನೆ.

ಒಬ್ಬ ತಾಯಿಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದು, ಉತ್ತಮ ಆತ್ಮಸಾಕ್ಷಿಗೆ ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಸೋನಿಯಾ ಹೇಳಿದ್ದಾರೆ.


ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ, ನಾವು ನಂಬಿಕೆಯನ್ನು ಪುನರ್ನಿರ್ಮಿಸುವ ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತೇವೆ .ಈ ಪ್ರಯೋಗದಿಂದ ಮತ್ತೆ ಎದ್ದು ನಿಲ್ಲುತ್ತೇವೆ ಎಂಬುದು ನನ್ನ ಪ್ರಾಮಾಣಿಕ ಆಶಯವಾಗಿದೆ. ಮಣಿಪುರದ ಜನರಲ್ಲಿ ನನಗೆ ಅಪಾರ ಭರವಸೆ ಮತ್ತು ನಂಬಿಕೆ ಇದೆ. ನಾವು ಜತೆಯಾಗಿ ಈ ಅಗ್ನಿಪರೀಕ್ಷೆಯನ್ನು ಜಯಿಸುತ್ತೇವೆ ಎಂದು ಸೋನಿಯಾ ಗಾಂಧಿ ತಮ್ಮ 2.5 ನಿಮಿಷಗಳ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಮಣಿಪುರದಲ್ಲಿ ಜನರ ಜೀವನವನ್ನು ಧ್ವಂಸಗೊಳಿಸಿದ ಅಭೂತಪೂರ್ವ ಹಿಂಸಾಚಾರವು ನಮ್ಮ ರಾಷ್ಟ್ರದ ಆತ್ಮಸಾಕ್ಷಿಯಲ್ಲಿ ಆಳವಾದ ಗಾಯವನ್ನು ಉಂಟುಮಾಡಿದೆ. ಜನರ ಮನೆಯಿಂದಲೇ ಪಲಾಯನ ಮಾಡಲು ಒತ್ತಾಯಿಸುವುದನ್ನು ನೋಡಿ ನನಗೆ ತುಂಬಾ ದುಃಖವಾಗಿದೆ
ಮಣಿಪುರದಲ್ಲಿ ಬಿಜೆಪಿ ವಿಭಜಕ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು ಈಶಾನ್ಯ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಮತ್ತು ಕೇಂದ್ರದ ಸರ್ಕಾರಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿವೆ ಎಂದಿದೆ.

ಅಂದ ಹಾಗೆ ಮಣಿಪುರ ಹಿಂಸಾಚಾರ ಬಗ್ಗೆ ಕಾಂಗ್ರೆಸ್ ಬುಧವಾರ ಹೆಚ್ಚು ದನಿಯೆತ್ತಿರುವುದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಣಿಪುರ ಹಿಂಸಾಚಾರವನ್ನು ಕಡೆಗಣಿಸಿ ಅಮೆರಿಕ ಪ್ರವಾಸಕ್ಕೆ ಹೋಗಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಮೋದಿ ಅಮೆರಿಕ ಭೇಟಿ ಬಗ್ಗೆ ವಿದೇಶಿ ಮಾಧ್ಯಮಗಳು ಕೂಡಾ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದರಿಂದ ಮೋದಿಗೆ ನೀಡಿರುವ ಗಮನವನ್ನು ಕಡಿಮೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Wed, 21 June 23