ಪರೀಕ್ಷೆಗೆಂದು ಬಂದಿದ್ದ ವಿದ್ಯಾರ್ಥಿಯನ್ನು ಕಾನೂನು ಕಾಲೇಜು ಆವರಣದಲ್ಲೇ ಹೊಡೆದು ಕೊಂದ ಮುಸುಕುಧಾರಿಗಳು

ಕಾನೂನು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯೊಬ್ಬನನ್ನು ಮುಸುಕುಧಾರಿಗಳು ಹತ್ಯೆ ಮಾಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಹರ್ಷ್​ ಬಿಎನ್​ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದರು, ಪ್ರತಿಭಾವಂತ ವಿದ್ಯಾರ್ಥಿಯಾಗಿರುವುದರ ಜತೆ ರಾಜಕೀಯದಲ್ಲೂ ಸಕ್ರಿಯನಾಗಿದ್ದರು ಎನ್ನಲಾಗಿದೆ.

ಪರೀಕ್ಷೆಗೆಂದು ಬಂದಿದ್ದ ವಿದ್ಯಾರ್ಥಿಯನ್ನು ಕಾನೂನು ಕಾಲೇಜು ಆವರಣದಲ್ಲೇ ಹೊಡೆದು ಕೊಂದ ಮುಸುಕುಧಾರಿಗಳು
ಹರ್ಷ್​

Updated on: May 28, 2024 | 2:13 PM

ಪರೀಕ್ಷೆ ಬರೆಯಲೆಂದು ಬಂದಿದ್ದ ವಿದ್ಯಾರ್ಥಿಯನ್ನು ಕಾನೂನು ಕಾಲೇಜು ಆವರಣದಲ್ಲೇ ಮುಸುಕುಧಾರಿಗಳು ಹೊಡೆದು ಹತ್ಯೆ ಮಾಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಹರ್ಷ್​ ಬಿಎನ್​ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ, ಪ್ರತಿಭಾವಂತ ವಿದ್ಯಾರ್ಥಿಯಾಗಿರುವುದರ ಜತೆ ರಾಜಕೀಯದಲ್ಲೂ ಸಕ್ರಿಯನಾಗಿದ್ದ. ಲೋಕನಾಯಕ ಯುವ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಲೋಕಸಭೆ ಚುನಾವಣೆಯಲ್ಲೂ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತಿತ್ತು. ಸಮಸ್ತಿಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶಾಂಭವಿ ಚೌಧರಿ ಪರ ಪ್ರಚಾರದಲ್ಲಿ ನಿರತರಾಗಿದ್ದರು.

ಮೇ 25 ರಂದು ಆರನೇ ಹಂತದ ಮತದಾನದ ನಂತರ ಪಾಟ್ನಾಗೆ ಮರಳಿದ್ದ
ಮೇ 25 ರಂದು ಆರನೇ ಹಂತದ ಮತದಾನದ ನಂತರ ಅವರು ಪಾಟ್ನಾಗೆ ಮರಳಿದ್ದ. ಪಾಟ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಮುಂಬರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದ. ವರ ಹತ್ಯೆಯನ್ನು ವಿರೋಧಿಸಿ ಪಾಟ್ನಾ ವಿಶ್ವವಿದ್ಯಾಲಯವನ್ನು ಮುಚ್ಚಲಾಗಿದೆ.

ಮೂಲತಃ ವೈಶಾಲಿ ಜಿಲ್ಲೆಯ ಬೆಲ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಜೌಲಿ ಗ್ರಾಮದ ನಿವಾಸಿಯಾಗಿರುವ ಹರ್ಷ್ ರಾಜ್, ಪಾಟ್ನಾದ ಬೋರಿಂಗ್ ರಸ್ತೆಯಲ್ಲಿ ವಾಸವಾಗಿದ್ದರು. ಪರೀಕ್ಷೆ ಮುಗಿದು ತರಗತಿಯಿಂದ ಹೊರಬಂದ ಹರ್ಷ್ ಕ್ಯಾಂಪಸ್‌ಗೆ ಬಂದು ಬುಲೆಟ್ ಬೈಕ್‌ನಲ್ಲಿ ಕುಳಿತಿದ್ದಾಗ ಅರ್ಧ ಡಜನ್‌ ಮಂದಿ ದಾಳಿಕೋರರು ಆತನ ಮೇಲೆ ದಾಳಿ ನಡೆಸಿದ್ದಾರೆ.

ಮತ್ತಷ್ಟು ಓದಿ: ತುಮಕೂರು: ಪತಿಯಿಂದಲೇ ಪತ್ನಿಯ ಭೀಕರ ಕೊಲೆ, ದೇಹದ ಅಂಗಾಂಗ ಕತ್ತರಿಸಿ ವಿಕೃತಿ

ಅವರು ದೊಣ್ಣೆಗಳಿಂದ ತೀವ್ರವಾಗಿ ಹೊಡೆದಿದ್ದಾರೆ. ಇಟ್ಟಿಗೆ ಮತ್ತು ಕಲ್ಲುಗಳಿಂದ ವಿದ್ಯಾರ್ಥಿಯ ಬೆನ್ನು ಮತ್ತು ಹೊಟ್ಟೆಯ ಮೇಲೂ ಹೊಡೆದಿದ್ದಾರೆ, ಪ್ರಜ್ಞೆ ತಪ್ಪುವವರೆಗೂ ಥಳಿಸಿ, ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಹಲ್ಲೆಯ ಬಗ್ಗೆ ಮಾಹಿತಿ ಪಡೆದ ಅವರ ಸ್ನೇಹಿತರು ಕಾನೂನು ಕಾಲೇಜಿಗೆ ಆಗಮಿಸಿ ರಕ್ತಸ್ರಾವದ ಸ್ಥಿತಿಯಲ್ಲಿ ಹರ್ಷನನ್ನು ಪಿಎಂಸಿಎಚ್‌ಗೆ ದಾಖಲಿಸಿದರು. ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.

ವಿದ್ಯಾರ್ಥಿಯೊಬ್ಬ ಹರ್ಷ್‌ ಮೊಬೈಲ್‌ನಿಂದ ಕರೆ ಮಾಡಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ನಗರ ಎಸ್ಪಿ (ಪೂರ್ವ) ಭರತ್ ಸೋನಿ ಹೇಳಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಜಕೀಯ ಪೈಪೋಟಿ, ಪರಸ್ಪರ ವಿವಾದ ಸೇರಿದಂತೆ ಎಲ್ಲ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ.

ಹರ್ಷರಾಜ್ ಅವರ ಅಮಾನುಷ ಹತ್ಯೆಗೆ ವಿದ್ಯಾರ್ಥಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗಲಭೆ ಭೀತಿಯಿಂದ ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಿದ್ದಾರೆ. ಈ ಕೊಲೆಯಿಂದ ಈ ಭಾಗದ ಜನರು ಕೂಡ ಭಯಭೀತರಾಗಿದ್ದಾರೆ.

ಕಾಲೇಜು ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಸುಮಾರು ಒಂದು ವರ್ಷದಿಂದ ಕೆಟ್ಟು ಹೋಗಿದೆ. ಈ ಕಾರಣದಿಂದ ಘಟನೆಯ ಯಾವುದೇ ದೃಶ್ಯಾವಳಿ ಆಡಳಿತದ ಬಳಿ ಇಲ್ಲ ಎಂದು ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us