AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯ್ದಿರಿಸಿದ್ದ ಜಾಗದ ಮೇಲೆ BWSSB ಕಣ್ಣು: ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು

ಕರ್ನಾಟಕ ಹೆಲನ್ ಕೆಲರ್ ಅಂಗವಿಕಲರ ಸಂಘ ಸದಸ್ಯರಿಗೆ ಸೈಟ್​ಗಳು ಮಂಜೂರಾಗಿದ್ದವು. ಗೊಟ್ಟಿಗೆರೆಯ ಸರ್ವೇ ನಂ-131 ರಲ್ಲಿ ನಿವೇಶನಗಳು ಮಂಜೂರಾಗಿದ್ದವು. ಸೈಟ್​​ಗಳು ವಿಶೇಷ ಚೇತನರ ಹೆಸರಿಗೆ ಗೊಟ್ಟಿಗೆರೆ ಗ್ರಾಮ ಪಂಚಾಯತಿಯಲ್ಲಿ ಖಾತಾ ಆಗಿ ಕಂದಾಯ ಕೂಡ ಪಾವತಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಬಳಿಕ ಕಿರಿಕಿರಿ ಶುರು ಮಾಡಲಾಗಿದೆ.

ಕಾಯ್ದಿರಿಸಿದ್ದ ಜಾಗದ ಮೇಲೆ BWSSB ಕಣ್ಣು: ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು
ಕಾಯ್ದಿರಿಸಿದ್ದ ಜಾಗದ ಮೇಲೆ BWSSB ಕಣ್ಣು: ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು
ರಾಮು, ಆನೇಕಲ್​
| Edited By: |

Updated on: May 27, 2024 | 4:43 PM

Share

ಆನೇಕಲ್​, ಮೇ 27: ಬೆಂಗಳೂರು ದಕ್ಷಿಣ ತಾಲ್ಲೂಕಿನ ಗೊಟ್ಟಿಗೆರೆಯಲ್ಲಿ 2003 ರಲ್ಲಿ 31 ಮಂದಿ ವಿಶೇಷ ಚೇತನರಿಗೆ 20-40 ವಿಸ್ತೀರ್ಣದ ಸೈಟ್​ಗಳು ಮಂಜೂರು ಮಾಡಲಾಗಿದೆ. ಆದರೆ ವಿಶೇಷ ಚೇತನರಿಗೆ (special handicap) ಕಾಯ್ದಿರಿಸಿದ್ದ ಜಾಗದ ಮೇಲೆ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಣ್ಣು ಬಿದ್ದಿದೆ. ಡ್ರೈನೇಜ್ ಪೈಪ್ ಲೈನ್ ಮಾಡಲು ಮುಂದಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಆಕ್ರೋಶಗೊಂಡಿದ್ದು, ಕಾಮಗಾರಿ ನಿಲ್ಲಿಸದಿದ್ದರೆ ಸರ್ಕಾರಕ್ಕೆ ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಹೆಲನ್ ಕೆಲರ್ ಅಂಗವಿಕಲರ ಸಂಘ ಸದಸ್ಯರಿಗೆ ಸೈಟ್​ಗಳು ಮಂಜೂರಾಗಿದ್ದವು. ಗೊಟ್ಟಿಗೆರೆಯ ಸರ್ವೇ ನಂ-131 ರಲ್ಲಿ ನಿವೇಶನಗಳು ಮಂಜೂರಾಗಿದ್ದವು. ಸೈಟ್​​ಗಳು ವಿಶೇಷ ಚೇತನರ ಹೆಸರಿಗೆ ಗೊಟ್ಟಿಗೆರೆ ಗ್ರಾಮ ಪಂಚಾಯತಿಯಲ್ಲಿ ಖಾತಾ ಆಗಿ ಕಂದಾಯ ಕೂಡ ಪಾವತಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಬಳಿಕ ಕಿರಿಕಿರಿ ಶುರು ಮಾಡಲಾಗಿದೆ.

ಇದನ್ನೂ ಓದಿ: ಟಿವಿ9 ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ಡೆಡ್‌ಲೈನ್‌, ಟಾಸ್ಕ್​ ಪೋರ್ಸ್ ರಚನೆ

ವಿಶೇಷ ಚೇತನರಿಗೆ ಖಾತಾ ಮಾಡದೇ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ. ಕಳೆದ 21 ವರ್ಷದ ಹಿಂದೆ ಮಂಜೂರಾದ ಜಾಗವನ್ನ ಹದ್ದುಬಸ್ತು ಕೂಡ ಮಾಡಿಕೊಟ್ಟಿಲ್ಲ. ರಸ್ತೆ, ನೀರು, ಚರಂಡಿ, ಮೂಲಭೂತ ಸೌಕರ್ಯಗಳನ್ನು ಬಿಬಿಎಂಪಿ ನೀಡಿಲ್ಲ.

ಇದನ್ನೂ ಓದಿ: ಸೆಕ್ಯೂರಿಟಿ ಕಂಪನಿಗೆ ಶಿಕ್ಷಕರ ನೇಮಕಾತಿ ಟೆಂಡರ್! ಸುರೇಶ್​ ಕುಮಾರ್​ ಆಕ್ರೋಶ

ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಖ್ಯಾತೆ ತೆಗೆದಿದ್ದು, ಈ ಜಾಗ ಸರ್ಕಾರಿ ಗೋಮಾಳ ಎಂದು ಡ್ರೈನೇಜ್ ಪೈಪ್ ಲೈನ್ ಮಾಡಲು ಮುಂದಾಗಿದೆ. ಖಾಸಗಿ ಅಪಾರ್ಟ್ಮೆಂಟ್, ಲೇಔಟ್​ಗಳ ಡ್ರೈನೇಜ್ ಪೈಪ್ ಲೈನ್ ಮಾಡಲು ಹಿಟಾಚಿ ಮೂಲಕ ಕಾಮಗಾರಿ ಮಾಡಲು ನಡೆಸಿದ್ದಾರೆ. ಹೀಗಾಗಿ ವಿಶೇಷ ಚೇತನರಿಂದ ಆಹೋ ರಾತ್ರಿ ಧರಣಿ ಮಾಡಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ಕೈಬಿಡಬೇಕೆಂದು ವಿಶೇಷ ಚೇತನರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್