ಪಂಜಾಬ್​ಗೆ ವಾಪಸಾದ ಸಾವಿರಾರು ಸಿಖ್ ಯಾತ್ರಾರ್ಥಿಗಳು, 215 ಮಂದಿಗೆ ಕೊರೊನಾ

ಪಂಜಾಬ್: ಮಹಾರಾಷ್ಟ್ರದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಾವಿರಾರು ಯಾತ್ರಾರ್ಥಿಗಳು ಪಂಜಾಬ್​ಗೆ ವಾಪಸ್ ಬಂದಿದ್ದಾರೆ. ಆದ್ರೆ ಇವರ ಪೈಕಿ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಆತಂಕಕಾರಿ ಅಂಶ ಬಯಲಾಗಿದೆ. ನಾಂದೇಡ್​ನಿಂದ ಪಂಜಾಬ್​ಗೆ ಬರೋಬ್ಬರಿ 3,500 ಮಂದಿ ಯಾತ್ರಾರ್ಥಿಗಳು ಮರಳಿಬಂದಿದ್ದಾರೆ. ಇವರ ಪೈಕಿ 215 ಯಾತ್ರಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ದೀಢೀರ್ ಲಾಕ್ ಡೌನ್ ಘೋಷಣೆಯಿಂದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರದಲ್ಲಿ‌ಯೇ ಸಿಲುಕಿದ್ದರು. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿಶೇಷ ಬಸ್ ಕಳಿಸಿ ಅಷ್ಟೂ […]

ಪಂಜಾಬ್​ಗೆ ವಾಪಸಾದ ಸಾವಿರಾರು ಸಿಖ್ ಯಾತ್ರಾರ್ಥಿಗಳು,  215 ಮಂದಿಗೆ ಕೊರೊನಾ
ಸಾಧು ಶ್ರೀನಾಥ್​

Updated on: May 02, 2020 | 2:30 PM

ಪಂಜಾಬ್: ಮಹಾರಾಷ್ಟ್ರದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಾವಿರಾರು ಯಾತ್ರಾರ್ಥಿಗಳು ಪಂಜಾಬ್​ಗೆ ವಾಪಸ್ ಬಂದಿದ್ದಾರೆ. ಆದ್ರೆ ಇವರ ಪೈಕಿ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಆತಂಕಕಾರಿ ಅಂಶ ಬಯಲಾಗಿದೆ.

ನಾಂದೇಡ್​ನಿಂದ ಪಂಜಾಬ್​ಗೆ ಬರೋಬ್ಬರಿ 3,500 ಮಂದಿ ಯಾತ್ರಾರ್ಥಿಗಳು ಮರಳಿಬಂದಿದ್ದಾರೆ. ಇವರ ಪೈಕಿ 215 ಯಾತ್ರಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ದೀಢೀರ್ ಲಾಕ್ ಡೌನ್ ಘೋಷಣೆಯಿಂದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರದಲ್ಲಿ‌ಯೇ ಸಿಲುಕಿದ್ದರು. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿಶೇಷ ಬಸ್ ಕಳಿಸಿ ಅಷ್ಟೂ ಮಂದಿಯನ್ನು ವಾಪಸ್ ಕರೆಸಿಕೊಂಡಿದ್ದರು. ಹೀಗೆ ಪಂಜಾಬ್​ಗೆ ವಾಪಸ್ ಬಂದವರ ಪೈಕಿ ಇದುವರೆಗೂ 215 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ರಾಜ್ಯ ಸರ್ಕಾರ ವಾಪಸ್ ಬಂದ ಎಲ್ಲರಿಗೂ 21 ದಿನ‌ ಕ್ವಾರೇಂಟೈನ್ ಗೆ ಒಳಪಡಿಸಿದೆ.

ಇದೀಗ, ನಾಂದೇಡ್ ಗುರುದ್ವಾರ ಯಾತ್ರಾರ್ಥಿಗಳಿಂದ ನಾಲ್ಕು ರಾಜ್ಯಗಳಿಗೆ ಚಿಂತೆ ಶುರುವಾಗಿದೆ. ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ನಾಂದೇಡ್ ಗುರುದ್ವಾರವನ್ನು ಸೀಲ್ ಮಾಡಿದೆ.

Published On - 2:28 pm, Sat, 2 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us