
ಮುಂಬೈ: ಎರಡು ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬಿಕ್ಕಟ್ಟು ಉದ್ಬವವಾಗಿದೆ. ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡು ಶಿವಸೇನೆ ಪಕ್ಷದಿಂದ ಸಚಿವರಾಗಿದ್ದ ಅಬ್ದುಲ್ ಸತ್ತಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮಗೆ ರಾಜ್ಯ ಖಾತೆ ನೀಡಿದ್ದಕ್ಕೆ ಅಬ್ದುಲ್ ಸತ್ತಾರ್ ಅಸಮಾಧಾನಗೊಂಡಿದ್ದಾರೆ. ಅಬ್ದುಲ್ ಸತ್ತಾರ್ ಡಿಸೆಂಬರ್ 30 ರಂದು ಸಂಪುಟ ಸೇರಿದ್ದರು.
Published On - 12:07 pm, Sat, 4 January 20