ಪಶ್ಚಿಮ ಬಂಗಾಳದ ಶಾಲಾ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ಮರು ನಿಯೋಜಿಸುವಂತೆ ಸುಪ್ರೀಂ ಸೂಚನೆ

|

Updated on: Apr 28, 2023 | 4:41 PM

ನಾವು ಕಲ್ಕತ್ತಾ ಹೈಕೋರ್ಟಿನ ಗೌರವಾನ್ವಿತ ಹಂಗಾಮಿ ಮುಖ್ಯ ನ್ಯಾಯಾಧೀಶರಿಗೆ ಕಲ್ಕತ್ತಾ ಹೈಕೋರ್ಟಿನ ಇತರ ಕೆಲವು ನ್ಯಾಯಾಧೀಶರಿಗೆ ಬಾಕಿಯಿರುವ ಪ್ರಕ್ರಿಯೆಗಳನ್ನು ಮರು-ನಿಯೋಜಿಸಲು ನಿರ್ದೇಶಿಸುತ್ತೇವೆ. ಯಾರಿಗೆ ವಿಚಾರಣೆಯನ್ನು ನಿಯೋಜಿಸಲಾಗಿದೆಯೋ ಆ ನ್ಯಾಯಾಧೀಶರು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪಶ್ಚಿಮ ಬಂಗಾಳದ ಶಾಲಾ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ಮರು ನಿಯೋಜಿಸುವಂತೆ ಸುಪ್ರೀಂ ಸೂಚನೆ
ಸುಪ್ರೀಂಕೋರ್ಟ್
Follow us on

ದೆಹಲಿ: ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿಯನ್ನು ಪರಿಶೀಲಿಸಿದ ನಂತರ ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ಮರು ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್ (Calcutta High Court) ಹಂಗಾಮಿ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂಕೋರ್ಟ್(Supreme Court) ಇಂದು (ಶುಕ್ರವಾರ) ಸೂಚಿಸಿದೆ. ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ವರದಿಯನ್ನು ಗಮನಕ್ಕೆ ತೆಗೆದುಕೊಂಡಿತು. ಆನಂತರ ಪ್ರಕರಣವನ್ನು ಬೇರೊಬ್ಬ ನ್ಯಾಯಾಧೀಶರ ನೇತೃತ್ವದ ಪೀಠಕ್ಕೆ ವರ್ಗಾಯಿಸಬೇಕು ಎಂದು ಹೇಳಿದರು.

ನಾವು ಕಲ್ಕತ್ತಾ ಹೈಕೋರ್ಟಿನ ಗೌರವಾನ್ವಿತ ಹಂಗಾಮಿ ಮುಖ್ಯ ನ್ಯಾಯಾಧೀಶರಿಗೆ ಕಲ್ಕತ್ತಾ ಹೈಕೋರ್ಟಿನ ಇತರ ಕೆಲವು ನ್ಯಾಯಾಧೀಶರಿಗೆ ಬಾಕಿಯಿರುವ ಪ್ರಕ್ರಿಯೆಗಳನ್ನು ಮರು-ನಿಯೋಜಿಸಲು ನಿರ್ದೇಶಿಸುತ್ತೇವೆ. ಯಾರಿಗೆ ವಿಚಾರಣೆಯನ್ನು ನಿಯೋಜಿಸಲಾಗಿದೆಯೋ ಆ ನ್ಯಾಯಾಧೀಶರು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,  ಅಲ್ಲೊಂದು ನಮೂನೆ ನಡೆಯುತ್ತಿದೆ. ನ್ಯಾಯಾಧೀಶರು ನಿರ್ದಿಷ್ಟ ವ್ಯಕ್ತಿಯ ಇಚ್ಛೆಗೆ ಅನುಗುಣವಾಗಿ ಹೋಗದಿದ್ದರೆ ಅವರ ತೀರ್ಪುಗಳನ್ನು ಗುರಿಯಾಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನ್ಯಾಯಾಧೀಶರನ್ನು ಬೆದರಿಸುವಂತಿರಬಾರದು ಎಂದು ಉನ್ನತ ಕಾನೂನು ಅಧಿಕಾರಿ ಹೇಳಿದ್ದಾರೆ. ಅವರು ಅಭಿಷೇಕ್ ಬ್ಯಾನರ್ಜಿ ಮಾಡಿದ ಸಾರ್ವಜನಿಕ ಭಾಷಣವನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದಾರೆ.

ನನಗೊಂದು ವಿಷಯ ಹೇಳಲು ಇದೆ. ಇದು ಗೊಂದಲದ ವಿಷಯವಾಗಿದೆ. ಒಂದು  ನಮೂನೆ ಅಲ್ಲಿ ನಡೆಯುತ್ತಿದೆ. ಒಮ್ಮೆ ತೀರ್ಪು ನೀಡಿಕೆಯ ವಿರುದ್ಧ ತೀರ್ಪು ಬಂದರೆ, ನ್ಯಾಯಾಧೀಶರು ಗುರಿಯಾಗುತ್ತಾರೆ ಎಂದು ಕಾನೂನು ಅಧಿಕಾರಿ ಹೇಳಿದ್ದಾರೆ. ಈ ಹಿಂದೆ, ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದಾರೆಯೇ ಎಂಬ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ನಿಂದ ವರದಿ ಕೇಳಿತ್ತು.

ಇದನ್ನೂ ಓದಿ: Excise Policy Case: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್

ಏಪ್ರಿಲ್ 24 ರ ಈ ನ್ಯಾಯಾಲಯದ ಆದೇಶದ ಅನುಸಾರ, ಕಲ್ಕತ್ತಾ ಹೈಕೋರ್ಟ್ ರಿಜಿಸ್ಟ್ರಿಯು ಕಲ್ಕತ್ತಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ ಏಪ್ರಿಲ್ 27 ರ ಅಫಿಡವಿಟ್ ಅನ್ನು ಇರಿಸಿದೆ. ಸಂದರ್ಶನದ ಬರಹವನ್ನೂ ಇದು  ಪರಿಶೀಲಿಸಿದೆ. ಬರಹವನ್ನು ಏಪ್ರಿಲ್ 26, 2023 ರಂದು ಹೈಕೋರ್ಟ್‌ನ  ಅಧಿಕಾರಿಯಿಂದ ದೃಢೀಕರಿಸಲಾಗಿದೆ ಎಂದು ಪೀಠ ತಿಳಿಸಿದೆ.

ಬಾಕಿ ಉಳಿದಿರುವ ವಿಷಯಗಳ ಕುರಿತು ಸಂದರ್ಶನಗಳನ್ನು ನೀಡಲು ನ್ಯಾಯಾಧೀಶರಿಗೆ ಯಾವುದೇ ಹಕ್ಕು ಇಲ್ಲ ಎಂದು ಅದು ಮೊದಲು ಹೇಳಿತ್ತು. ಏಪ್ರಿಲ್ 17 ರಂದು, ಪ್ರಕರಣದ ಆರೋಪಿಗಳಾದ ಬ್ಯಾನರ್ಜಿ ಮತ್ತು ಕುಂತಲ್ ಘೋಷ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸುವ ಕಲ್ಕತ್ತಾ ಹೈಕೋರ್ಟ್ ನ ಏಪ್ರಿಲ್ 13 ರ ಆದೇಶವನ್ನು ಸುಪ್ರೀಂಕೋರ್ಟ್ ತಡೆಹಿಡಿದಿದ್ದು ಅದರ ಆಧಾರದ ಮೇಲೆ ಹೈಕೋರ್ಟ್‌ನಲ್ಲಿ ವರದಿಯನ್ನು ಸಲ್ಲಿಸಿತು.

ಇದಕ್ಕೂ ಮುನ್ನ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠವು ಆಪಾದಿತ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸದಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ