Selfie ಅಮ್ಮ ಸೆಲ್ಫಿ ತೆಗೆಯುತಿದ್ದಾಗ ಅಲೆಗಳು ಬಂದು ಮರಳಿ ಬಾರದ ಲೋಕಕ್ಕೆ ಕಂದನ ಕರೆದೊಯ್ಯಿತು..

ಇತ್ತ ಸಮುದ್ರ ತೀರವೊಂದರಲ್ಲಿ selfie ಅಮ್ಮ ತನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಗಲೇ, ಅತ್ತ ಸಮುದ್ರದ ಅಲೆಗಳು ತಣ್ಣಗೆ ದಡಕ್ಕೆ ಅಪ್ಪಿಸುತ್ತಲೇ ಆ ತಾಯಿಯ ಎರಡೂವರೆ ವರ್ಷದ ಮಗುವನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದೆ ಎಂಬಲ್ಲಿಗೆ ಇಂದಿನ ಸೆಲ್ಫಿ ಯುಗದ ದುರಂತಗಳ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಆದ್ರೆ ಸೆಲ್ಫಿ ಪ್ರೇಮಿಗಳು ಮಾತ್ರ ಇಂತಹ ಅಚಾತುರ್ಯಗಳಿಂದ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ವಾರಂತ್ಯದ ಮೋಜುಮಸ್ತಿಯಲ್ಲಿದ್ದಾಗ ಮೊನ್ನೆ ಭಾನುವಾರ ಮಧ್ಯಾಹ್ನ ಕೇರಳದ ಅಲಪುಳಾ ತೀರದಲ್ಲಿ ಈ ತೀರದ ಅತಿರೇಕ ಘಟಿಸಿದೆ. […]

Selfie ಅಮ್ಮ ಸೆಲ್ಫಿ ತೆಗೆಯುತಿದ್ದಾಗ ಅಲೆಗಳು ಬಂದು ಮರಳಿ ಬಾರದ ಲೋಕಕ್ಕೆ ಕಂದನ ಕರೆದೊಯ್ಯಿತು..
ಸಾಧು ಶ್ರೀನಾಥ್​

Updated on: Sep 15, 2020 | 8:39 AM

ಇತ್ತ ಸಮುದ್ರ ತೀರವೊಂದರಲ್ಲಿ selfie ಅಮ್ಮ ತನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಗಲೇ, ಅತ್ತ ಸಮುದ್ರದ ಅಲೆಗಳು ತಣ್ಣಗೆ ದಡಕ್ಕೆ ಅಪ್ಪಿಸುತ್ತಲೇ ಆ ತಾಯಿಯ ಎರಡೂವರೆ ವರ್ಷದ ಮಗುವನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದೆ ಎಂಬಲ್ಲಿಗೆ ಇಂದಿನ ಸೆಲ್ಫಿ ಯುಗದ ದುರಂತಗಳ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಆದ್ರೆ ಸೆಲ್ಫಿ ಪ್ರೇಮಿಗಳು ಮಾತ್ರ ಇಂತಹ ಅಚಾತುರ್ಯಗಳಿಂದ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ವಾರಂತ್ಯದ ಮೋಜುಮಸ್ತಿಯಲ್ಲಿದ್ದಾಗ ಮೊನ್ನೆ ಭಾನುವಾರ ಮಧ್ಯಾಹ್ನ ಕೇರಳದ ಅಲಪುಳಾ ತೀರದಲ್ಲಿ ಈ ತೀರದ ಅತಿರೇಕ ಘಟಿಸಿದೆ. ಆದಿಕೃಷ್ಣ ಎಂಬ ಎರಡೂವರೆ ವರ್ಷದ ಮಗುವೇ ಈ ದುರಂತ ಅಂತ್ಯ ಕಂಡಿರುವುದು. ಆದಿಕೃಷ್ಣನ ತಂದೆ-ತಾಯಿ ಲಕ್ಷ್ಮಣನ್ ಮತ್ತು ಅನಿತಾಮೋಳಿ ಪಾಲಕ್ಕಾಡ್​ ನಿವಾಸಿಗಳು. ಇವರ ಸಂಬಂಧಿ ಬಿನು, ಅಲಪುಳಾದಲ್ಲಿ ವಾಸವಾಗಿದ್ದಾರೆ. ಹೀಗೆ.. ಬನ್ನೀ.. ಭಾನುವಾರ ಸಮುದ್ರದ ದಂಡೆಯಲ್ಲಿ ಸುತ್ತಾಡಿ ಬರೋಣ ಎಂದು ನತದೃಷ್ಟ ಆದಿಕೃಷ್ಣನ ತಂದೆತಾಯಿಗೆ ಬಿನು ಆತಿಥ್ಯ ನೀಡಿದ್ದಾರೆ. ಅದೇ ಮಗುವಿಗೆ ಮುಳುವಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us