ಗಗನ ತಲುಪಿದ ಟೊಮೇಟೊ ದರ: ಈಗ ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ ಕೊಡ್ತಾರಂತೆ!

Free Tomatoes For Flight Bookings: ದೇಶೀಯ ವಿಮಾನ ಬುಕಿಂಗ್‌ಗೆ 1 ಕೆಜಿ ಟೊಮೆಟೊ, ವಿದೇಶಿ ವಿಮಾನಕ್ಕೆ 1.5 ಕೆಜಿ ಆಫರ್ ನೀಡಿದೆ. ಹಾಗಾಗಿ ‘ಉಚಿತ ಟೊಮೇಟೊ’ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ತಿಳಿಸಿದೆ

ಗಗನ ತಲುಪಿದ ಟೊಮೇಟೊ ದರ: ಈಗ ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ ಕೊಡ್ತಾರಂತೆ!
ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ
ಸಾಧು ಶ್ರೀನಾಥ್​

Updated on: Jul 14, 2023 | 12:08 PM

ಚೆನ್ನೈ, ಜುಲೈ 14: ಗ್ರಾಹಕರನ್ನು ಸೆಳೆಯಲು ಕಂಪನಿಗಳು ಫ್ಯಾನ್ಸಿ ಆಫರ್‌ಗಳ ಜೊತೆಗೆ ಭಾರಿ ರಿಯಾಯಿತಿಗಳನ್ನು ಪ್ರಕಟಿಸುತ್ತವೆ. ಅದಕ್ಕಾಗಿಯೇ ಕೆಲವು ಕಂಪನಿಗಳು ಮಾರ್ಕೆಟಿಂಗ್ ವಿಷಯದಲ್ಲಿ ಟ್ರೆಂಡಿಂಗ್ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ. ಸದ್ಯ ಟೊಮೇಟೊ ದರ (Tomato price) ನಿರೀಕ್ಷೆಗೂ ಮೀರಿದ ಬೆಲೆ ನೀಡಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿರುವುದು ಗೊತ್ತೇ ಇದೆ. ಸದ್ಯ ದೇಶಾದ್ಯಂತ ಟೊಮೇಟೊ ಬೆಲೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆಯಿಂದ ಐಷಾರಾಮಿ ವಸ್ತುಗಳ ಪಟ್ಟಿಗೆ ಟೊಮೇಟೊ ಕೂಡ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಲವು ವ್ಯಾಪಾರ ಸಂಸ್ಥೆಗಳು ಟೊಮೇಟೊ ನೀಡುತ್ತಿವೆ.

ಇತ್ತೀಚೆಗಷ್ಟೇ ಮಧುರೈನ (madurai) ದೇಶೀಯ ವಿಮಾನಯಾನ ಸಂಸ್ಥೆ ವಿಮಾನ (flight) ಟಿಕೆಟ್ ಬುಕ್ ಮಾಡಿದರೆ ಒಂದೂವರೆ ಕಿಲೋ ಟೊಮೇಟೊ ಉಚಿತ ಕೊಡುವುದಾಗಿ ಎಂದು ಗಂಭೀರವಾಗಿಯೆ ಘೋಷಿಸಿದೆ. ಮಧುರೈನಲ್ಲಿ, ಟ್ರಾವೆಲ್ ಏಜೆನ್ಸಿಯು ದೇಶೀಯ ವಿಮಾನ ಟಿಕೆಟ್ ಬುಕಿಂಗ್‌ಗೆ 1.5 ಕೆಜಿ ಟೊಮ್ಯಾಟೊ ಮತ್ತು ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಾಗಿ 1.5 ಕೆಜಿ ಟೊಮೇಟೊ ನೀಡುವುದಾಗಿ ಘೋಷಿಸಿದೆ

ಈ ಪರಿಸ್ಥಿತಿಯಲ್ಲಿ ಮಧುರೈನ ಟ್ರಾವೆಲ್ ಕಂಪನಿಯೊಂದು ಇಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸುವವರಿಗೆ ಯಾವುದೇ ಶುಲ್ಕವಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ದೇಶೀಯ ವಿಮಾನಗಳ ಬುಕಿಂಗ್‌ಗೆ 1 ಕೆಜಿ ಟೊಮೆಟೊ ಮತ್ತು ವಿದೇಶಿ ವಿಮಾನಗಳಿಗೆ 1.5 ಕೆಜಿ ಆಫರ್ ನೀಡಿದೆ. ಹಾಗಾಗಿ ‘ಉಚಿತ ಟೊಮೇಟೊ’ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ಪ್ರಕಟಿಸಿರುವುದು ಗಮನಾರ್ಹ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Fri, 14 July 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us