ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ. ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ […]

ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?
ಸಾಧು ಶ್ರೀನಾಥ್​

Updated on: Jul 18, 2020 | 3:56 PM

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ.

ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ ಹಿಂತಿರುಗಿಸಲು‌ ಸಹ‌ ನಿರ್ಧಾರ ಮಾಡಿದೆ. ಇಂದು‌ ಸಂಜೆಯಿಂದ‌ ಭಕ್ತರಿಗೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು ನಿರ್ಧಾರ ಮಾಡಲಾಗಿದ್ದು, ಇಂದು ಸಂಜೆ‌ ವೇಳೆಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲು ಟಿಟಿಡಿ ತೀರ್ಮಾನಿಸಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us