AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗೆ ಹಾವು ಕಚ್ಚಿದೆ ಅಂತಾ ಸೂಟು-ಬೂಟು ಧರಿಸಿ ಆಸ್ಪತ್ರೆಗೆ ಬಂದ ಯುವಕನ ನೋಡಿ ದಂಗಾದ ವೈದ್ಯರು, ಆತನ ಕೈಯಲ್ಲಿ ಏನಿತ್ತು ಗೊತ್ತಾ?

ಆಸ್ಪತ್ರೆಯ ಎಸ್‌ಐಸಿ ಪ್ರಭಾರಿ ಡಾ. ತರುಣ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದರು. ಚಿಕಿತ್ಸೆಯ ನಂತರ ಸೂರಜ್ ಅವರ ಸ್ಥಿತಿ ಸುಧಾರಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಹಾಸಿಗೆಯ ಮೇಲೆ ಹಾವನ್ನು ಪ್ರದರ್ಶಿಸಿ ಆತಂಕದ ವಾತಾವರಣ ನಿರ್ಮಿಸಿಬಿಟ್ಟಿದ್ದರು. ಇದೀಗ ಎಲ್ಲವೂ ಶಾಂತ ಸ್ಥಿತಿಗೆ ಮರಳಿದೆ ಎಂದಿದ್ದಾರೆ.

ತನಗೆ ಹಾವು ಕಚ್ಚಿದೆ ಅಂತಾ ಸೂಟು-ಬೂಟು ಧರಿಸಿ ಆಸ್ಪತ್ರೆಗೆ ಬಂದ ಯುವಕನ ನೋಡಿ ದಂಗಾದ ವೈದ್ಯರು, ಆತನ ಕೈಯಲ್ಲಿ ಏನಿತ್ತು ಗೊತ್ತಾ?
ಕಚ್ಚಿದ ಹಾವನ್ನೇ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಓಡೋಡಿ ಬಂದ ಯುವಕ
ಸಾಧು ಶ್ರೀನಾಥ್​
|

Updated on: Nov 22, 2023 | 10:11 AM

Share

ಮಿರ್ಜಾಪುರ (ಉತ್ತರ ಪ್ರದೇಶ) , ನವೆಂಬರ್ 22: ಉತ್ತರ ಪ್ರದೇಶದಲ್ಲಿ ಪಟುಲ್​​​ಖಿ (Patulkhi village) ಎಂಬ ಗ್ರಾಮದ ವ್ಯಕ್ತಿಗೆ ನಾಗರ ಹಾವು ಕಚ್ಚಿರುವ ( snake bite) ಆಘಾತಕಾರಿ ಘಟನೆ ಸೋಮವಾರ ನಡೆದಿದೆ. ಸೂರಜ್ ಎಂದು ಗುರುತಿಸಲಾದ ಯುವಕ ನಂತರ ಇಲ್ಲಿನ ಮಿರ್ಜಾಪುರ (Mirzapur, Uttar Pradesh) ವಿಭಾಗೀಯ ಆಸ್ಪತ್ರೆಗೆ ಬಂದು ವೈದ್ಯಕೀಯ ನೆರವು ಕೋರಿದ್ದಾನೆ ಎಂದು ಆಸ್ಪತ್ರೆ ಆಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಸೋಮವಾರ ಸಂಜೆ ಸೂರಜ್ ಗೆ ಅವರ ಮನೆಯಲ್ಲಿ ಹಾವು ಕಚ್ಚಿದ ಘಟನೆ ನಡೆದಿದೆ. ಅವರು ಅದೇ ದಿನ ಸಂಜೆ ತಡವಾಗಿ ಆಸ್ಪತ್ರೆಗೆ ಬಂದರು. ತುರ್ತು ಚಿಕಿತ್ಸಾ ವಿಭಾಗಕ್ಕೆ ನುಗ್ಗಿಬಂದ ಅವರು ಸೂಟು-ಬೂಟಿನೊಂದಿಗೆ ಉತ್ತಮ ಬಟ್ಟೆ ಧರಿಸಿದ್ದರು. ಅವರನ್ನು ನೋಡಿ ಅಲ್ಲಿನ ವೈದ್ಯಲೋಕ ಆಘಾತಕ್ಕೊಳಗಾಗಿದೆ.

ಏಕೆಂದರೆ ಸೂರಜ್ ತನಗೆ ಹಾವು ಕಚ್ಚಿದೆ ಎಂದು ಚೀರಾಡುತ್ತಾ ಬಹಿರಂಗಪಡಿಸಿದ್ದಾನೆ. ಜೊತೆಗೆ, ತನಗೆ ಕಚ್ಚಿರುವ ಹಾವನ್ನು ಜೀವಂತವಾಗಿ ತಂದು ಪ್ರದರ್ಶಿಸಿದ್ದಾನೆ. ಆಸ್ಪತ್ರೆ ಮತ್ತು ಸಿಬ್ಬಂದಿಯಲ್ಲಿ ಇದು ಭೀತಿಯನ್ನು ಸೃಷ್ಟಿಸಿತು ಎಂದು ಅಲ್ಲಿನ ವೈದ್ಯಾಧಿಕಾರಿ ಹೇಳಿದ್ದಾರೆ. ಹಾವನ್ನು ಕಂಡ ವೈದ್ಯರು ತಕ್ಷಣವೇ ವಿಷ ವಿರೋಧಿ ಚುಚ್ಚುಮದ್ದನ್ನು ಆ ಯುವಕನಿಗೆ ಚುಚ್ಚಿದ್ದಾರೆ. ಸೂರಜ್ ಅದರಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Human-snake conflict: ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಪಿಐಟಿ ಟ್ಯಾಗ್‌ ಮೊರೆ ಹೋದ ಕರ್ನಾಟಕ ಅರಣ್ಯ ಇಲಾಖೆ

ಆಸ್ಪತ್ರೆಯ ಎಸ್‌ಐಸಿ ಪ್ರಭಾರಿ ಡಾ. ತರುಣ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದರು. ಚಿಕಿತ್ಸೆಯ ನಂತರ ಸೂರಜ್ ಅವರ ಸ್ಥಿತಿ ಸುಧಾರಿಸಿದೆ. ತುರ್ತು ಚಿಕಿತ್ಸಾ ವಿಭಾಗದ ಹಾಸಿಗೆಯ ಮೇಲೆ ಹಾವನ್ನು ಪ್ರದರ್ಶಿಸಿ ಆತಂಕದ ವಾತಾವರಣ ನಿರ್ಮಿಸಿಬಿಟ್ಟಿದ್ದರು. ಇದೀಗ ಎಲ್ಲವೂ ಶಾಂತ ಸ್ಥಿತಿಗೆ ಮರಳಿದೆ. ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಡಿತದ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ.

ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ