Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಶೀಲತೆ ಗುಜರಾತ್​ ಜನರ ಡಿಎನ್​ಎಯಲ್ಲಿದೆ: ಟಿವಿ9 ಎಂಡಿ ಬರುಣ್​ ದಾಸ್

What Gujarat Thinks Today Conclave 2025: ಟಿವಿ9 ನೆಟ್‌ವರ್ಕ್ ಶನಿವಾರ ಅಹಮದಾಬಾದ್‌ನಲ್ಲಿ ‘ವಾಟ್ ಗುಜರಾತ್ ಥಿಂಕ್ಸ್ ಟುಡೇ ಕಾನ್ಕ್ಲೇವ್ 2025' ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 2030 ರ ವೇಳೆಗೆ ಗುಜರಾತ್ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಟಿವಿ9 ಎಂಡಿ ಬರುಣ್​ ದಾಸ್ ಹೇಳಿದ್ದಾರೆ.

ಉದ್ಯಮಶೀಲತೆ ಗುಜರಾತ್​ ಜನರ ಡಿಎನ್​ಎಯಲ್ಲಿದೆ: ಟಿವಿ9 ಎಂಡಿ ಬರುಣ್​ ದಾಸ್
ಗುಜರಾತ್
Follow us
ನಯನಾ ರಾಜೀವ್
|

Updated on: Mar 16, 2025 | 9:45 AM

ಅಹಮದಾಬಾದ್​, ಮಾರ್ಚ್​ 16: ‘‘ಉದ್ಯಮಶೀಲತೆ ಎಂಬುದು ಗುಜರಾತ್ ಜನರ ಡಿಎನ್​ಎಯಲ್ಲಿದೆ’’ ಎಂದು ಟಿವಿ9 ನೆಟ್​ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್​ ದಾಸ್ ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಗುಜರಾತ್‌ನಲ್ಲಿ ವಾಟ್ ಗುಜರಾತ್ ಥಿಂಕ್ಸ್ ಟುಡೇ ಕಾನ್ಕ್ಲೇವ್ 2025 ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಭಾಗವಹಿಸಿದ್ದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಎಂಡಿ ಬರುಣ್ ದಾಸ್, ಇದು ಟಿವಿ9 ನ ಮೊದಲ WGTT ಶೃಂಗಸಭೆಯಾಗಿದೆ.

ಒಂದು ಶತಮಾನಕ್ಕೂ ಹೆಚ್ಚು ವರ್ಷಗಳ ಹಿಂದೆಯೇ, ಗೋಪಾಲ ಕೃಷ್ಣ ಗೋಖಲೆ ಹೇಳಿದ್ದರು, ಬಂಗಾಳ ಇಂದು ಏನು ಯೋಚಿಸುತ್ತದೆಯೋ, ನಾಳೆ ಭಾರತ ಅದನ್ನೇ ಯೋಚಿಸುತ್ತದೆ ಎಂದು. ಆದರೆ, ಕಳೆದ ಎರಡು ದಶಕಗಳಲ್ಲಿ, ಗುಜರಾತ್ ನೀವು ಏನು ಯೋಚಿಸುತ್ತೀರೋ ಅದೇ ಆಗುತ್ತೀರಿ ಮತ್ತು ನೀವು ಏನು ಮಾಡುತ್ತೀರೋ ಅದೇ ಆಗುತ್ತೀರಿ ಎಂಬುದನ್ನು ತೋರಿಸಿದೆ. ಗುಜರಾತ್ ತಾನು ಯಾವ ರೀತಿಯ ರಾಜ್ಯವಾಗಬೇಕೆಂದು ಬಯಸುತ್ತದೆ ಎಂಬುದನ್ನು ತೋರಿಸಿದೆ.

ರಾಜ್ಯವು ಪ್ರಗತಿಪರ ಮತ್ತು ಸಮೃದ್ಧವಾಗಿರಲು ಆಯ್ಕೆ ಮಾಡಿಕೊಂಡಿದೆ. ಗುಜರಾತ್ ಮಾದರಿಯು ಒಂದು ರಾಜ್ಯದ ಜನರು ಕಠಿಣ ಪರಿಶ್ರಮಿಗಳಾಗಿದ್ದರೆ ಮತ್ತು ಮುಂದುವರೆಯಲು ಬಯಸಿದರೆ, ನಿರಂತರ ಅಭಿವೃದ್ಧಿಗಾಗಿ ಅವರ ಶಕ್ತಿ, ಉತ್ಸಾಹ ಮತ್ತು ಶ್ರೇಷ್ಠತೆಯನ್ನು ಪ್ರೇರೇಪಿಸುವ ದೂರದೃಷ್ಟಿಯ ನಾಯಕನ ಅಗತ್ಯವಿದೆ ಎಂದು ತೋರಿಸುತ್ತದೆ ಎಂದು ಹೇಳಿದರು.

ಭಾರತದ ಜನಸಂಖ್ಯೆಯಲ್ಲಿ ಗುಜರಾತ್ ಕೇವಲ ಶೇ. 5 ರಷ್ಟನ್ನು ಪ್ರತಿನಿಧಿಸುತ್ತಿದ್ದರೂ, ಅದು ಭಾರತದ ರಫ್ತಿನ ಸುಮಾರು ಶೇ. 31 ರಷ್ಟು ಮತ್ತು ರಾಷ್ಟ್ರೀಯ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 8 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದರು.

ಈಗ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ, ಗುಜರಾತ್ 2030 ರ ವೇಳೆಗೆ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಬರುಣ್​ ದಾಸ್ ಹೇಳಿದರು.

ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ: ಮನ್ಸುಖ್ ಮಾಂಡವೀಯ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಅವರು ಕ್ರೀಡೆ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳ ಕುರಿತು ಮಾತನಾಡಿದರು. ಮಕ್ಕಳ ಬೆಳವಣಿಗೆಗೆ ಶಿಕ್ಷಣದಂತೆಯೇ ಕ್ರೀಡೆಯೂ ಅಷ್ಟೇ ಮುಖ್ಯ ಎಂದರು. ನಮ್ಮ ದೇಶದಲ್ಲಿ ಕ್ರೀಡಾ ಅವಕಾಶಗಳು ಹೆಚ್ಚುತ್ತಿವೆ, ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿರುವುದರಿಂದ, ದೇಶದಲ್ಲಿ ಕ್ರೀಡಾ ಸಂಸ್ಕೃತಿ ಅಭಿವೃದ್ಧಿ ಹೊಂದುತ್ತಿದೆ.

ದೇಶದಲ್ಲಿ ಕ್ರೀಡೆಗಳ ಬಗ್ಗೆ ಜನರ ಮನೋಭಾವ ಬದಲಾಗಿದೆ. ಹಿಂದೆ, ಪೋಷಕರು ತಮ್ಮ ಮಕ್ಕಳನ್ನು ಅಧ್ಯಯನಕ್ಕಾಗಿ ಮಾತ್ರ ಪ್ರೇರೇಪಿಸುತ್ತಿದ್ದರು, ಈಗ ಪೋಷಕರು ತಮ್ಮ ಮಕ್ಕಳನ್ನು ಅಧ್ಯಯನದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ