Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ

ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್​ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದ್ದಾರೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.

Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ
ಆಶಯ ಸನ್​ಗ್ಲಾಸ್ Image Credit source: Twitter
Follow us
ನಯನಾ ಎಸ್​ಪಿ
|

Updated on: Feb 18, 2023 | 1:07 PM

ತ್ಯಾಜ್ಯ ವಿಲೇವಾರಿ ಸಮಸ್ಯೆ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ, ಖಂಡಿತವಾಗಿಯೂ ಪ್ರತಿ ದೇಶಕ್ಕೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನೊಂದಿಗೆ ಬರುವ ಉತ್ಪನ್ನಗಳ ಹೆಚ್ಚಿದ ಬಳಕೆಯೊಂದಿಗೆ, ತ್ಯಾಜ್ಯದ ಪ್ರಮಾಣವೂ ಮಿತಿಮೀರಿದೆ. ಆದರೆ, ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಪುಟ್ಟ ಕಂಪನಿ ಹಗಲಿರುಳು ಶ್ರಮಿಸುತ್ತಿದೆ. ಪುಣೆಯ ಈ ಪುಟ್ಟ ಕೆಮಿಕಲ್ ಲ್ಯಾಬ್ ಭರವಸೆಯ ಕಿರಣವನ್ನು ಹುಟ್ಟು ಹಾಕಿದೆ. ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್​ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.

ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಅನೀಶ್ ಮಲ್ಪಾನಿ ​​ಅವರು ಹಂಚಿಕೊಂಡ ಟ್ವಿಟರ್ ಪೋಸ್ಟ್ ಪ್ರಕಾರ, ಉತ್ಪನ್ನವನ್ನು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ರಚಿಸಲಾಗಿದೆ. ನಾವು ಬದುಕುವ ಪರಿಸರವನ್ನು ಉಳಿಸಲು ಇದೊಂದು ಸಣ್ಣ ಪ್ರಯತ್ನ ಎಂದು ತಿಳಿಸಿದ್ದಾರೆ. “ಕೊನೆಗೂ ಚಿಪ್‌ಗಳ ಪ್ಯಾಕೆಟ್‌ಗಳ ಮರುಬಳಕೆಯಿಂದ ತಯಾರಿಸಿದ ಪ್ರಪಂಚದ ಮೊದಲ ಸನ್‌ಗ್ಲಾಸ್‌ಗಳು ನಿಮ್ಮಮುಂದೆ, ಅದೂ ನಮ್ಮ ಭಾರತದಲ್ಲಿ!” ಎಂದು ಅನೀಶ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸೇರಿಸಿ ಮಲ್ಪಾನಿ ​​ಇನ್ನೂ ಕೆಲವು ಮಾಹಿತಿಯನ್ನು ನೀಡಿದರು. ಉತ್ತಮ ಗುಣಮಟ್ಟದ ಸನ್‌ಗ್ಲಾಸ್‌ಗಳನ್ನು ಚಿಪ್ಸ್ ಪ್ಯಾಕೆಟ್​ಗಳಿಂದ ತಯಾರಿಸುವ ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಅಷ್ಟೇ ಅಲ್ಲದೆ ಈ ಪ್ರಕ್ರಿಯೆಗೆ ನಾವಿನ್ನೂ ಪೇಟೆಂಟ್ ಅನ್ನು ಮಾಡಿಕೊಂಡಿಲ್ಲ. ಈ ಪೇಟೆಂಟ್-ಬಾಕಿ ಉಳಿದಿರುವ ಪ್ರಕ್ರಿಯೆಯನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಲು ಆಶಯ ಮುಂದಾಗಿದೆ. ಸನ್​ಗ್ಲಾಸ್​ಗಳು ಪ್ರಾರಂಭ ಮಾತ್ರ ಇನ್ನು ಹಲವು ಪ್ರಾಡಕ್ಟ್​ಗಳನ್ನು ನಿಮ್ಮ ಮುಂದೆ ಇಡುವ ಯೋಜನೆ ನಮ್ಮದು. ಈ ರೀತಿ ನಾವು ಚಿಂದಿ ಆಯುವವರನ್ನು ಪ್ರಾಮಾಣಿಕವಾಗಿ ಸಬಲೀಕರಣಗೊಳಿಸಲು ಮುಂದಾಗಿದ್ದೇವೆ.

ಈ ಪೋಸ್ಟ್‌ ಅನ್ನು ನೋಡಿದ ನೆಟ್ಟಿಗರು ಬಹಳಷ್ಟು ಪ್ರೇರೇಪಿತರಾಗಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಕ್ಕೆ ಅನೇಕರು ಕಂಪನಿಯನ್ನು ಅಭಿನಂದಿಸಿದ್ದಾರೆ.

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ