AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಕಳ್ಳಾಟಕ್ಕೆ 8 ವರ್ಷ; 2 ವರ್ಷ ನಿಷೇಧ.. ರಾಜಸ್ಥಾನ, ಚೆನ್ನೈ ಫ್ರಾಂಚೈಸ್ ಜಗತ್ತಿನೆದುರು ಅವಮಾನದಿಂದ ತಲೆ ತಗ್ಗಿಸಿದ್ದವು

ಈ ಪ್ರಕರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಲಾಯಿತು.

ಪೃಥ್ವಿಶಂಕರ
|

Updated on: May 17, 2021 | 2:56 PM

Share
ಪ್ರಾತಿನಿಧಿಕ ಚಿತ್ರ

2 new ipl franchise auction bidding city bcci willing to wait psr

1 / 8
ಲೀಗ್‌ನ ಆರನೇ ಆವೃತ್ತಿಯ ಹಂತಿಮ ಹಂತದಲ್ಲಿ ಫಿಕ್ಸಿಂಗ್ ಬಾಂಬ್ ಸ್ಫೋಟಿಸಿತು. ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರು - ಎಸ್.ಕೆ. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಇದರಲ್ಲಿ ಸಿಕ್ಕಿಬಿದ್ದಿದ್ದು, ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ದೆಹಲಿ ಪೊಲೀಸರು ಈ ಮೂವರನ್ನು ಬಂಧಿಸಿದ್ದರು.

ಲೀಗ್‌ನ ಆರನೇ ಆವೃತ್ತಿಯ ಹಂತಿಮ ಹಂತದಲ್ಲಿ ಫಿಕ್ಸಿಂಗ್ ಬಾಂಬ್ ಸ್ಫೋಟಿಸಿತು. ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರು - ಎಸ್.ಕೆ. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಇದರಲ್ಲಿ ಸಿಕ್ಕಿಬಿದ್ದಿದ್ದು, ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ದೆಹಲಿ ಪೊಲೀಸರು ಈ ಮೂವರನ್ನು ಬಂಧಿಸಿದ್ದರು.

2 / 8
ಇದಲ್ಲದೆ ಚೆನ್ನೈ ಸೂಪರ್ ಕಿಂಗ್ಸ್‌ನ ತಂಡದ ಮುಖ್ಯಸ್ಥ ಮತ್ತು ಅಂದಿನ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮರಿಯಪ್ಪನ್ ಅವರನ್ನೂ ಈ ಆರೋಪದಡಿ ಬಂಧಿಸಲಾಯಿತು.

ಇದಲ್ಲದೆ ಚೆನ್ನೈ ಸೂಪರ್ ಕಿಂಗ್ಸ್‌ನ ತಂಡದ ಮುಖ್ಯಸ್ಥ ಮತ್ತು ಅಂದಿನ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮರಿಯಪ್ಪನ್ ಅವರನ್ನೂ ಈ ಆರೋಪದಡಿ ಬಂಧಿಸಲಾಯಿತು.

3 / 8
ಶ್ರೀನಿವಾಸನ್ ಅವರು ತಮ್ಮ ಹುದ್ದೆಯನ್ನು ತೊರೆಯುವಂತೆ ಒತ್ತಡ ಹೇರಿದರು ಸಹ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿಲ್ಲ. ಮಂಡಳಿಯ ಕಾರ್ಯದರ್ಶಿ, ಖಜಾಂಚಿ ಮತ್ತು ಐಪಿಎಲ್ ಅಧ್ಯಕ್ಷರು ರಾಜೀನಾಮೆ ನೀಡಿದರು. ಇದರ ನಂತರ, ಶ್ರೀನಿವಾಸನ್ ತಾತ್ಕಾಲಿಕವಾಗಿ ಐಪಿಎಲ್​ನಿಂದ ದೂರವಾದರು.

ಶ್ರೀನಿವಾಸನ್ ಅವರು ತಮ್ಮ ಹುದ್ದೆಯನ್ನು ತೊರೆಯುವಂತೆ ಒತ್ತಡ ಹೇರಿದರು ಸಹ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿಲ್ಲ. ಮಂಡಳಿಯ ಕಾರ್ಯದರ್ಶಿ, ಖಜಾಂಚಿ ಮತ್ತು ಐಪಿಎಲ್ ಅಧ್ಯಕ್ಷರು ರಾಜೀನಾಮೆ ನೀಡಿದರು. ಇದರ ನಂತರ, ಶ್ರೀನಿವಾಸನ್ ತಾತ್ಕಾಲಿಕವಾಗಿ ಐಪಿಎಲ್​ನಿಂದ ದೂರವಾದರು.

4 / 8
ಈ ವಿಷಯದಲ್ಲಿ ಮಂಡಳಿಯು ತನಿಖಾ ಸಮಿತಿಯನ್ನು ರಚಿಸಿತ್ತು, ಆದರೆ ತನಿಖೆ ಪ್ರಾರಂಭವಾಗುವ ಮೊದಲು ರಾಜಸ್ಥಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದರು.

ಈ ವಿಷಯದಲ್ಲಿ ಮಂಡಳಿಯು ತನಿಖಾ ಸಮಿತಿಯನ್ನು ರಚಿಸಿತ್ತು, ಆದರೆ ತನಿಖೆ ಪ್ರಾರಂಭವಾಗುವ ಮೊದಲು ರಾಜಸ್ಥಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದರು.

5 / 8
ಈ ಪ್ರಕರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಲಾಯಿತು. ನಂತರ 2018 ರಲ್ಲಿ ಈ ಎರಡು ತಂಡಗಳು ಲೀಗ್‌ಗೆ ಮರಳಿದವು. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ. ಹಾಗೂ ಅದೇ ಸಮಯದಲ್ಲಿ, ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.

ಈ ಪ್ರಕರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಲಾಯಿತು. ನಂತರ 2018 ರಲ್ಲಿ ಈ ಎರಡು ತಂಡಗಳು ಲೀಗ್‌ಗೆ ಮರಳಿದವು. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ. ಹಾಗೂ ಅದೇ ಸಮಯದಲ್ಲಿ, ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.

6 / 8
ಅದೇ ಸಮಯದಲ್ಲಿ, ಸಿಕ್ಕಿಬಿದ್ದ ಮೂವರು ಆಟಗಾರರ ವೃತ್ತಿಜೀವನ ಹಾಳಾಯಿತು. ಅವರನ್ನು ಬಿಸಿಸಿಐ ನಿಷೇಧಿಸಿತು. ಆದಾಗ್ಯೂ, ಶ್ರೀಶಾಂತ್ ಅವರು ವಿಧಿಸಿದ ನಿಷೇಧದ ವಿರುದ್ಧ ಸುದೀರ್ಘ ಹೋರಾಟ ನಡೆಸಿದರು ಮತ್ತು ಅವರು ಕ್ರಿಕೆಟ್‌ಗೆ ಪುನರಾಗಮನ ಮಾಡುವಲ್ಲಿ ಯಶಸ್ವಿಯಾದರು. ವಿಜಯ್ ಹಜಾರೆ ಟ್ರೋಫಿ -2021 ರಲ್ಲಿ ಕೇರಳ ಪರ ಆಡಿದ್ದರು.

ಅದೇ ಸಮಯದಲ್ಲಿ, ಸಿಕ್ಕಿಬಿದ್ದ ಮೂವರು ಆಟಗಾರರ ವೃತ್ತಿಜೀವನ ಹಾಳಾಯಿತು. ಅವರನ್ನು ಬಿಸಿಸಿಐ ನಿಷೇಧಿಸಿತು. ಆದಾಗ್ಯೂ, ಶ್ರೀಶಾಂತ್ ಅವರು ವಿಧಿಸಿದ ನಿಷೇಧದ ವಿರುದ್ಧ ಸುದೀರ್ಘ ಹೋರಾಟ ನಡೆಸಿದರು ಮತ್ತು ಅವರು ಕ್ರಿಕೆಟ್‌ಗೆ ಪುನರಾಗಮನ ಮಾಡುವಲ್ಲಿ ಯಶಸ್ವಿಯಾದರು. ವಿಜಯ್ ಹಜಾರೆ ಟ್ರೋಫಿ -2021 ರಲ್ಲಿ ಕೇರಳ ಪರ ಆಡಿದ್ದರು.

7 / 8
ಉಳಿದ ಇಬ್ಬರು ಆಟಗಾರರಾದ ಅಂಕಿತ್ ಚವಾಣ್ ಮತ್ತು ಅಜಿತ್ ಚಂದೇಲಾ ಅವರ ವೃತ್ತಿಜೀವನ ಈ ಪ್ರಕರಣದ ನಂತರ ಕೊನೆಗೊಂಡಿತು. ದೆಹಲಿ ನ್ಯಾಯಾಲಯ ಅವರಿಬ್ಬರಿಗೂ ಕ್ಲೀನ್ ಚಿಟ್ ನೀಡಿತ್ತು, ಆದರೆ ಬಿಸಿಸಿಐ ಅವರ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದುಹಾಕಲಿಲ್ಲ.

ಉಳಿದ ಇಬ್ಬರು ಆಟಗಾರರಾದ ಅಂಕಿತ್ ಚವಾಣ್ ಮತ್ತು ಅಜಿತ್ ಚಂದೇಲಾ ಅವರ ವೃತ್ತಿಜೀವನ ಈ ಪ್ರಕರಣದ ನಂತರ ಕೊನೆಗೊಂಡಿತು. ದೆಹಲಿ ನ್ಯಾಯಾಲಯ ಅವರಿಬ್ಬರಿಗೂ ಕ್ಲೀನ್ ಚಿಟ್ ನೀಡಿತ್ತು, ಆದರೆ ಬಿಸಿಸಿಐ ಅವರ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದುಹಾಕಲಿಲ್ಲ.

8 / 8