1. ಒಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ತಪ್ಪು ಮಾಡುವುದರಿಂದ ನಗೆಪಾಟಲಿಗೆ ಕಾರಣವಾಗಬಹುದು ಅಥವಾ ಇತರರ ಮುಂದೆ ನಿಮ್ಮನ್ನು ನಗುವಂತೆ ಮಾಡಬಹುದು. ಚಾಣಕ್ಯ ನೀತಿ ಪ್ರಕಾರ, ಕೆಲವನ್ನು ಹಂಚಿಕೊಳ್ಳುವ ಮೊದಲು ನೀವು ಅದರ ಬಗ್ಗೆ 10 ಬಾರಿ ಯೋಚಿಸಬೇಕು ಎಂಬುದನ್ನು ತಿಳಿಯಿರಿ.
2. ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಕುಟುಂಬದ ಸದಸ್ಯರಿಂದಲೂ ಈ ಸಮಸ್ಯೆಗಳು ಉದ್ಭವಿಸಬಹುದು. ಒಬ್ಬ ವ್ಯಕ್ತಿಯು, ಕೋಪ ಅಥವಾ ಒತ್ತಡದಲ್ಲಿ ಕುಟುಂಬ ಸದಸ್ಯರಿಗೆ ಕೆಟ್ಟದ್ದನ್ನು ಮಾಡುವ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡುವುದನ್ನು ತಪ್ಪಿಸಿ.
3. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ದೈಹಿಕ ಸಂಬಂಧವನ್ನು ಸಾರ್ವಜನಿಕಗೊಳಿಸಬಾರದು. ಚಾಣಕ್ಯನ ಪ್ರಕಾರ, ಈ ತಪ್ಪಿಗೆ ಶಿಕ್ಷೆಯನ್ನು ವೈವಾಹಿಕ ಜೀವನದ ವಿನಾಶದ ರೂಪದಲ್ಲಿ ಎದುರಿಸಬೇಕಾಗಬಹುದು. ನೀವು ಇತರರ ದೃಷ್ಟಿಯಲ್ಲಿ ನಗೆಪಾಟಲಿಗೀಡಾಗಲು ಬಯಸದಿದ್ದರೆ, ಅಪ್ಪಿತಪ್ಪಾಗಿಯೂ ಈ ತಪ್ಪನ್ನು ಮಾಡಬೇಡಿ.
4. ಕೆಲವರಿಗೆ ತಮ್ಮದೇ ಜೋಕುಗಳನ್ನು ಎಲ್ಲೆಂದರಲ್ಲಿ ಹಾರಿಸುವ ಅಭ್ಯಾಸವಿರುತ್ತದೆ. ಇದನ್ನು ಮಾಡುವುದರಿಂದ ನಿಮಗೆ ಸಂತೋಷವಾಗಬಹುದು, ಆದರೆ ಚಾಣಕ್ಯ ನೀತಿಯ ಪ್ರಕಾರ ಇದು ತಪ್ಪು. ಮತ್ತು ಇದರಿಂದ ನೀವು ಅನೇಕ ಸ್ಥಳಗಳಲ್ಲಿ ಮುಜುಗರವನ್ನು ಎದುರಿಸಬೇಕಾಗಬಹುದು ಎಚ್ಚರ.
5. ದಾನದಿಂದ ಪುಣ್ಯವನ್ನು ಗಳಿಸಬಹುದು, ಆದರೆ ದಾನವನ್ನು ಯಾವಾಗಲೂ ಗೌಪ್ಯವಾಗಿಡಬೇಕೆಂದು ಚಾಣಕ್ಯ ನೀತಿ ಹೇಳುತ್ತದೆ. ದಾನ ಮಾಡಿರುವುದರ ಬಗ್ಗೆ ಯಾರಿಗಾದರೂ ಹೇಳುವುದು ಹಾನಿ ಮಾಡುವುದಿಲ್ಲ, ಆದರೆ ರಹಸ್ಯ ದಾನದಿಂದ ಉತ್ತಮ ಫಲಿತಾಂಶಗಳನ್ನು ಕಾಣಬಹುದು.