ಸಾವಿರ ಕಿ.ಮೀ ಕ್ರಮಿಸಿದ ಭಾರತ್ ಜೋಡೋ ಪಾದಯಾತ್ರೆ: ಬಳ್ಳಾರಿ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ, ಜನರಿಗೆ ಎದುರಾಯ್ತು ಟ್ರಾಫಿಕ್ ಸಮಸ್ಯೆ

Edited By: ಆಯೇಷಾ ಬಾನು

Updated on: Oct 15, 2022 | 11:09 AM

ಒಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ.

1 / 7
ಒಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ.

ಒಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ.

2 / 7

ಬಳ್ಳಾರಿಯ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಅಚ್ಚೇ ದಿನ್ ಮೋದಿ ಗಿಫ್ಟ್ ಎಂಬ ವ್ಯಂಗ್ಯ ಪ್ರದರ್ಶನ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಭಿತ್ತಿಚಿತ್ರ ಪ್ರದರ್ಶನ ಮಾಡಿದೆ.

3 / 7

ಪಾದಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗಿಯಾಗಿದ್ದಾರೆ. ಬಳ್ಳಾರಿ ನಗರದ ಒಳಗೆ ಪಾದಯಾತ್ರೆ ಸಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಪಾದಯಾತ್ರೆಯಲ್ಲಿ ಸೇರಿಕೊಂಡರು. ಪಾದಯಾತ್ರೆ ನಡುವೆ ಅನ್ನ ರಾಮಯ್ಯ ಕ್ಯಾಂಟಿನ್​ನಲ್ಲಿ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯ ಹೆಸರಿನಲ್ಲಿ ಅಭಿಮಾನಿಗಳು ತೆರೆದ ಕ್ಯಾಂಟಿನ್ ಇದು.

4 / 7

ಬಳ್ಳಾರಿಯಲ್ಲಿ ಕಾಂಗ್ರೆಸ್​​ನ ‘ಜೋಡೋ’ ಯಾತ್ರೆ ಹಿನ್ನೆಲೆ ಇಂದು ನಗರದ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಟ್ರಾಫಿಕ್​ನಿಂದಾಗಿ ಮಕ್ಕಳು ಪರದಾಡಬಾರದೆಂದು ರಜೆ ನೀಡಿ ಬಳ್ಳಾರಿ ಡಿಸಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

5 / 7

ಭಾರತ್​ ಜೋಡೋ ಪಾದಯಾತ್ರೆ ಹಿನ್ನೆಲೆ ಪ್ರಮುಖ ಸರ್ಕಲ್, ರಸ್ತೆಗಳನ್ನ ಪೊಲೀಸರು ಬ್ಲಾಕ್ ಮಾಡಿದ್ದಾರೆ. ನಗರದಲ್ಲಿಂದು ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಬಳ್ಳಾರಿ ನಗರದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್​​ಪಿ ಸರ್ಕಲ್​​ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

6 / 7

ಭಾರತ್​​ ಜೋಡೋ ಯಾತ್ರೆಗೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 351 ಪೊಲೀಸ್ ಅಧಿಕಾರಿಗಳು, 1,704 ಕಾನ್ಸ್​ಟೇಬಲ್​ಗಳು, 450 ಗೃಹರಕ್ಷಕದಳ ಸಿಬ್ಬಂದಿ, 5 KSRP, 10 DAR ತುಕಡಿ, 3 ASP, 10 DySP, 37 ಸಿಪಿಐ, 103 PSI ನಿಯೋಜನೆ ಮಾಡಲಾಗಿದ್ದು ವಿಜಯನಗರ, ಕೊಪ್ಪಳ ಹಾಗೂ ರಾಯಚೂರು, ಕಲಬುರಗಿ, ಗದಗದಿಂದ ಭದ್ರತೆಗೆ ಪೊಲೀಸ್​ ಸಿಬ್ಬಂದಿ ಆಗಮಿಸಿದ್ದಾರೆ.

7 / 7

ಕಮ್ಮಾ ಭವನ ತಲುಪಿದ ನಂತರ ಪಾದಯಾತ್ರೆ ಅಂತ್ಯವಾಗಿದ್ದು ಸದ್ಯ ಕಮ್ಮಾ ಭವನದಲ್ಲಿ ರಾಹುಲ್ ಗಾಂಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಸಮಾವೇಶದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.

Published On - 10:24 am, Sat, 15 October 22

Loading...
Unable to load recommendations.
Follow Us