
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿತು. ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್ಗಳಿಂದ ಗೆದ್ದು ಬೀಗಿತು.

ಮೊದಲಿಗೆ ಆರ್ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

ಮೊದಲ ಇನಿಂಗ್ಸ್ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೇವೆ. ಬೌಲರ್ಗಳು ಕಟ್ಟರ್, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದು. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಮೊದಲ ಇನ್ನಿಂಗ್ಸ್ನಲ್ಲಿ ನಾವು ಬ್ಯಾಟ್ ಮಾಡಲು ತುಂಬಾ ಕಷ್ಟಪಟ್ಟೆವು. ವಿರಾಟ್ ಕೊಹ್ಲಿಗೆ ಕೂಡ ವೇಗದ ಆಟವಾಡಲು ಸಾಧ್ಯವಾಗಲಿಲ್ಲ. ಅವರೂ ಕಷ್ಟಪಟ್ಟರು. ಆದರೆ, ಕೆಕೆಆರ್ ಪವರ್ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನರೈನ್ ಮತ್ತು ಸ್ಲಾಟ್ ಚೆಂಡನ್ನು ಹೊಡೆದ ರೀತಿ ಉತ್ತಮವಾಗಿತ್ತು. ಅವರು ನಮ್ಮ ಬೌಲರ್ಗಳ ಮೇಲೆ ಒತ್ತಡ ಹೇರಿದರು ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಕೆಕೆಆರ್ ಓಪನರ್ಗಳು ಅತ್ಯುತ್ತಮ ಹೊಡೆತಗಳನ್ನು ಹೊಡೆದು ಆಟವನ್ನು ಬಹುಮಟ್ಟಿಗೆ ತೆಗೆದುಕೊಂಡರು. ನರೈನ್ ಇದ್ದಾಗ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಮೊದಲ ಆರು ಓವರ್ಗಳಲ್ಲಿ ಆಟವನ್ನು ಅವರು ತೆಗೆದುಕೊಂಡರು. ನಾವು ಮ್ಯಾಕ್ಸಿಯೊಂದಿಗೆ ಸ್ಪಿನ್ನಿಂಗ್ ಆಯ್ಕೆಗಳನ್ನು ಪ್ರಯತ್ನಿಸಿದ್ದೇವೆ, ಆದರೆ ರಾತ್ರಿಯಲ್ಲಿ ಹೆಚ್ಚು ಸ್ಪಿನ್ ಇರಲಿಲ್ಲ ಎಂದು ಫಾಫ್ ಹೇಳಿದ್ದಾರೆ.

ನಮಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ವೈಶಾಕ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡುವವರನ್ನು ಬಹುಶಃ ಈ ಪಿಚ್ನಲ್ಲಿ ಎದುರಿಸಲು ಅತ್ಯಂತ ಕಷ್ಟ ಎಂದು ನಾವು ಭಾವಿಸಿದ್ದೇವೆ. ರಸೆಲ್ ಅವರ 80% ಬಾಲ್ ಕಟ್ಟರ್ಗಳ ಮೂಲಕ ಬೌಲ್ ಮಾಡಿದರು. ನಾವು ಅದರಿಂದ ಕಲಿತು ಕೊಂಡಿದ್ದೇವೆ - ಫಾಫ್ ಡುಪ್ಲೆಸಿಸ್.