Virat Kohli
ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ನಾಯಕರ ಪೈಕಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಕೊಹ್ಲಿ ನಾಯಕತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ನ ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನಕ್ಕೇರಿತ್ತು. ತಂಡದ ಪರ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 27 ಶತಕ, 7 ಅರ್ಧಶತಕ ಹಾಗೂ 30 ಅರ್ಧಶತಕ ಸೇರಿದಂತೆ ಒಟ್ಟು 8848 ರನ್ ಸಿಡಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ 292 ಪಂದ್ಯಗಳನ್ನಾಡಿರುವ ವಿರಾಟ್ 50 ಶತಕ ಹಾಗೂ 72 ಅರ್ಧಶತಕ ಒಳಗೊಂಡಂತೆ 13838 ರನ್ ಕಲೆಹಾಕಿದ್ದರು. ಟಿ20 ಕ್ರಿಕೆಟ್ನಲ್ಲೂ ಛಾಪು ಮೂಡಿಸಿರುವ ವಿರಾಟ್ 117 ಪಂದ್ಯಗಳಲ್ಲಿ 1 ಹಾಗೂ 37 ಅರ್ಧಶತಕ ಸೇರಿದಂತೆ 4037 ರನ್ ಕಲೆಹಾಕಿದ್ದಾರೆ. ಐಪಿಎಲ್ನಲ್ಲೂ ತನ್ನ ಪಾರುಪತ್ಯ ಸೃಷ್ಟಿಸಿರುವ ವಿರಾಟ್ ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಇಲ್ಲಿಯವರೆಗೆ 237 ಪಂದ್ಯಗಳನ್ನಾಡಿದ್ದು, 7 ಶತಕ ಹಾಗೂ 50 ಅರ್ಧಶತಕ ಸೇರಿದಂತೆ 7263 ರನ್ ಕಲೆಹಾಕಿದ್ದಾರೆ.
ಇನ್ನೂ ಹೆಚ್ಚು ಓದಿIND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ
India vs Sri Lanka Test Series: ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಈ ಸರಣಿ ಗೆಲುವು ಭಾರತಕ್ಕೆ ಅತ್ಯವಶ್ಯಕ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಇಲ್ಲದೆ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಲಂಕಾದಲ್ಲಿ ಸತತ ಸರಣಿ ಗೆದ್ದಿತ್ತು. ಈಗ, ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
- pruthvi Shankar
- Updated on: Aug 10, 2026
- 5:25 pm
ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ
ಐಪಿಎಲ್ 2013ರ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದಾಗ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಜಗಳಕ್ಕಿಳಿದಿದ್ದರು.
- Zahir Yusuf
- Updated on: Aug 4, 2026
- 3:09 pm
ಏಕದಿನ ವಿಶ್ವಕಪ್ ನಡೆಯುವ 12 ಮೈದಾನಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿದೆ?
Virat Kohli's 2027 World Cup Impact: 2027ರ ಏಕದಿನ ವಿಶ್ವಕಪ್ ಆಫ್ರಿಕಾದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಆಫ್ರಿಕಾದ 12 ಆತಿಥೇಯ ಸ್ಥಳಗಳಲ್ಲಿ ಕೊಹ್ಲಿ 8ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ 25 ವಿಶ್ವಕಪ್ ಇನ್ನಿಂಗ್ಸ್ಗಳಲ್ಲಿ 71.47 ಸರಾಸರಿಯಲ್ಲಿ 1,358 ರನ್ ಗಳಿಸಿದ್ದಾರೆ. ಅವರ ಅನುಭವ ತಂಡಕ್ಕೆ ಬಲ ನೀಡಲಿದ್ದು, ಭಾರತದ ವಿಶ್ವಕಪ್ ಭರವಸೆಗಳಿಗೆ ಕೊಹ್ಲಿ ಪ್ರಮುಖ ಆಧಾರವಾಗಿದ್ದಾರೆ.
- pruthvi Shankar
- Updated on: Aug 2, 2026
- 7:25 pm
ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಂಡಿದ್ದು ಬಿಸಿಸಿಐ ಮಾಡಿದ ಅತೀ ದೊಡ್ಡ ತಪ್ಪು!
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಯುಗ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸಿದ ರೀತಿ ವಿಶ್ವ ಕ್ರಿಕೆಟ್ ಅನ್ನೇ ಬೆರಗಾಗುವಂತೆ ಮಾಡಿತ್ತು. ಆದರೆ, 2022ರಲ್ಲಿ ಕೊಹ್ಲಿ ದಿಢೀರನೆ ಟೆಸ್ಟ್ ನಾಯಕತ್ವ ತ್ಯಜಿಸಿದ ನಿರ್ಧಾರ ಇಂದಿಗೂ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಆಳವಾದ ನಿರಾಸೆ ಮೂಡಿಸಿದೆ. ಇದೀಗ ಇದೇ ವಿಷಯದ ಕುರಿತು ಮದನ್ ಲಾಲ್ ಮನಬಿಚ್ಚಿ ಮಾತನಾಡಿದ್ದಾರೆ.
- Zahir Yusuf
- Updated on: Jul 23, 2026
- 9:24 am
ರೋಹಿತ್-ಕೊಹ್ಲಿಯನ್ನು ಕೈಬಿಡುವ ಧೈರ್ಯ ಮಾಡಬೇಡಿ: ಅಶ್ವಿನ್ ಎಚ್ಚರಿಕೆ
Rohit Sharma - Virat Kohli: ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಈಗಾಗಲೇ ನಿವೃತ್ತರಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಮುಂಬರುವ ಏಕದಿನ ವಿಶ್ವಕಪ್ವರೆಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ಇದಾಗ್ಯೂ, ಕೆಲ ಪಂದ್ಯಗಳಲ್ಲಿನ ಕಳಪೆ ಪ್ರದರ್ಶನವನ್ನೇ ಮುಂದಿಟ್ಟು ಈ ಇಬ್ಬರು ದಿಗ್ಗಜರನ್ನು ಗುರಿಯಾಗಿಸಿ ಟೀಕಿಸಲಾಗುತ್ತಿದೆ ಎಂದು ಅಶ್ವಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Zahir Yusuf
- Updated on: Jul 21, 2026
- 11:02 am
ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ
Team India's ODI Future: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ನಡುವೆಯೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು. ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವುದರಿಂದ, ಇವರಿಬ್ಬರು ನೀಲಿ ಜೆರ್ಸಿಯಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆ. ಸೆಪ್ಟೆಂಬರ್ನಲ್ಲಿ ವೆಸ್ಟ್ ಇಂಡೀಸ್, ನವೆಂಬರ್ನಲ್ಲಿ ನ್ಯೂಜಿಲೆಂಡ್ ಮತ್ತು ಡಿಸೆಂಬರ್ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಳಲ್ಲಿ ಇವರು ಆಡಲಿದ್ದಾರೆ, 2027ರ ವಿಶ್ವಕಪ್ಗೆ ಇದು ನಿರ್ಣಾಯಕ.
- pruthvi Shankar
- Updated on: Jul 20, 2026
- 5:25 pm
ಗಹಗಹಿಸಿ ನಕ್ಕು ಎಲ್ಲಾ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ, ಗಂಭೀರ್
Gambhir-Kohli Rift Rumors Dispelled:ಭಾರತ ಏಕದಿನ ತಂಡದಲ್ಲಿ ಗಂಭೀರ್-ಕೊಹ್ಲಿ ಭಿನ್ನಾಭಿಪ್ರಾಯದ ವದಂತಿಗಳು ಹರಡಿದ್ದವು. ಅಭ್ಯಾಸದಲ್ಲಿ ಅವರು ಪರಸ್ಪರ ಮಾತನಾಡದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ಇಂಗ್ಲೆಂಡ್ ಪ್ರವಾಸದ ಅಂತ್ಯದಲ್ಲಿ ಟೀಂ ಇಂಡಿಯಾ ಲಂಡನ್ನಲ್ಲಿ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದಾಗ, ಗಂಭೀರ್ ಮತ್ತು ಕೊಹ್ಲಿ ನಗುತ್ತಾ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು, ತಂಡದಲ್ಲಿ ಸಾಮರಸ್ಯವಿದೆ ಎಂಬುದನ್ನು ಸ್ಪಷ್ಟಪಡಿಸಿವೆ.
- pruthvi Shankar
- Updated on: Jul 19, 2026
- 5:00 pm
IND vs ENG: ಲಾರ್ಡ್ಸ್ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ
India vs England 3rd ODI: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಲಾರ್ಡ್ಸ್ನಲ್ಲಿ ನಡೆಯಲಿದೆ. 2004 ರಿಂದ ಇಲ್ಲಿ ಗೆಲ್ಲದ ಭಾರತ, ಸರಣಿ ಗೆಲ್ಲಲು ಸವಾಲು ಎದುರಿಸುತ್ತಿದೆ. ಮುಖ್ಯವಾಗಿ, ಲಾರ್ಡ್ಸ್ನಲ್ಲಿ ಇದುವರೆಗೆ ಯಾವುದೇ ಭಾರತೀಯ ಬ್ಯಾಟ್ಸ್ಮನ್ ಏಕದಿನ ಶತಕ ಬಾರಿಸಿಲ್ಲ. ಟೀಂ ಇಂಡಿಯಾ ಈ ಐತಿಹಾಸಿಕ ಮೈದಾನದಲ್ಲಿ ಶತಕದ ಬರ ನೀಗಿಸಿ, ಸರಣಿಯನ್ನು ಗೆಲ್ಲುವುದೇ ಎಂಬುದೇ ಕುತೂಹಲ.
- pruthvi Shankar
- Updated on: Jul 18, 2026
- 7:39 pm
IND vs ENG: ಲಾರ್ಡ್ಸ್ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ರೋಹಿತ್, ಕೊಹ್ಲಿ
Rohit Kohli 400 matches: ಭಾರತ vs ಇಂಗ್ಲೆಂಡ್ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಜುಲೈ 19 ರಂದು ಲಾರ್ಡ್ಸ್ನಲ್ಲಿ ನಡೆಯಲಿದೆ. ಈ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 400 ಅಂತರರಾಷ್ಟ್ರೀಯ ಪಂದ್ಯಗಳನ್ನು ಒಟ್ಟಿಗೆ ಆಡಿದ ದಾಖಲೆ ನಿರ್ಮಿಸಲಿದ್ದಾರೆ. ಸರಣಿ ಗೆಲ್ಲುವ ಮೂಲಕ ಭಾರತ ತಂಡವು ತನ್ನ ಇಂಗ್ಲೆಂಡ್ ಪ್ರವಾಸವನ್ನು ಉತ್ತಮ ರೀತಿಯಲ್ಲಿ ಅಂತ್ಯಗೊಳಿಸಲು ನೋಡುತ್ತಿದೆ.
- pruthvi Shankar
- Updated on: Jul 18, 2026
- 6:55 pm
IND vs ENG: ಲಾರ್ಡ್ಸ್ನಲ್ಲಿ ತಮ್ಮ ವೃತ್ತಿಜೀವನದ ಮಹದಾಸೆಯನ್ನು ಈಡೇರಿಸಿಕೊಳ್ತಾರಾ ಕೊಹ್ಲಿ
Virat Kohli at Lord's: ಭಾರತ vs ಇಂಗ್ಲೆಂಡ್ ನಡುವಿನ ಸರಣಿ ನಿರ್ಧಾರಕ ODI ಪಂದ್ಯ ಜುಲೈ 19 ರಂದು ಲಾರ್ಡ್ಸ್ನಲ್ಲಿ ನಡೆಯಲಿದೆ. ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಭಾರತಕ್ಕೆ ನಿರ್ಣಾಯಕವಾಗಿದೆ. ಲಾರ್ಡ್ಸ್ನಲ್ಲಿ ಕೊಹ್ಲಿಗೆ ಇದುವರೆಗೆ ಅರ್ಧಶತಕದ ದಾಖಲೆ ಇಲ್ಲ. ಈ ಐತಿಹಾಸಿಕ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಬರ ನೀಗಿಸಿ, ಭಾರತಕ್ಕೆ ಸರಣಿ ಗೆಲ್ಲಿಸಿಕೊಡುವ ಗುರಿ ಹೊಂದಿದ್ದಾರೆ.
- pruthvi Shankar
- Updated on: Jul 18, 2026
- 5:54 pm
ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ; ಕೊಹ್ಲಿ ಭಾವುಕ ಪೋಸ್ಟ್
*Garfield Sobers Passes Away: ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಸರ್ ಗಾರ್ಫೀಲ್ಡ್ ಸೋಬರ್ಸ್ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಇಡೀ ಕ್ರಿಕೆಟ್ ಲೋಕವೇ ಕಂಬನಿ ಮಿಡಿದಿದೆ. ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತೀಯ ಕ್ರಿಕೆಟಿಗರು ಭಾವುಕ ಪೋಸ್ಟ್ಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಸೋಬರ್ಸ್ ಅವರ ಅಸಾಮಾನ್ಯ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ.
- pruthvi Shankar
- Updated on: Jul 18, 2026
- 4:58 pm
ರೋಹಿತ್-ವಿರಾಟ್ ಇಲ್ಲದೆ ಭಾರತ 2027ರ ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ!
ODI World Cup 2027: ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾದ 2027ರ ಏಕದಿನ ವಿಶ್ವಕಪ್ಗೆ ಈಗಿನಿಂದಲೇ ಸಿದ್ಧತೆಗಳು ಮತ್ತು ಚರ್ಚೆಗಳು ಆರಂಭವಾಗಿವೆ. ಭಾರತ ತಂಡದಲ್ಲಿ ಯುವ ಆಟಗಾರರ ಎಂಟ್ರಿಯ ನಡುವೆಯೂ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳ ನಡುವೆ, ಭಾರತದ ಮಾಜಿ ವೇಗಿ ಹಾಗೂ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮುನಾಫ್ ಪಟೇಲ್ ನೀಡಿರುವ ಸ್ಪೋಟಕ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
- Zahir Yusuf
- Updated on: Jul 18, 2026
- 9:43 am