IPL 2023: ಇಬ್ಬರನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ ಸುನಿಲ್ ಗವಾಸ್ಕರ್
TV9 Web | Updated By: ಝಾಹಿರ್ ಯೂಸುಫ್
Updated on:
May 06, 2023 | 11:13 PM
Virat Kohli vs Gautam Gambhir: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದ ಗೌತಮ್ ಗಂಭೀರ್ಗೆ ಲಕ್ನೋ ಮೈದಾನದಲ್ಲಿ ಭರ್ಜರಿ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.
1 / 7
IPL 2023: ಐಪಿಎಲ್ ಪಂದ್ಯದ ವೇಳೆ ನಡೆದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳದ ಚರ್ಚೆ ಮುಂದುವರೆದಿದೆ. ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಮೇ 1 ರಂದು ನಡೆದ ಆರ್ಸಿಬಿ-ಎಲ್ಎಸ್ಜಿ ನಡುವಣ ಪಂದ್ಯದ ಬಳಿಕ ಕಿಂಗ್ ಕೊಹ್ಲಿ ಹಾಗೂ ಗಂಭೀರ್ ಕಿತ್ತಾಡಿಕೊಂಡಿದ್ದರು.
2 / 7
ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಇಂತಹ ಜಗಳಗಳು ನಡೆಯದಂತೆ ನೋಡಿಕೊಳ್ಳಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
3 / 7
ನನ್ನ ಪ್ರಕಾರ, ಈ ಜಗಳದಲ್ಲಿ ತೊಡಗಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರನ್ನು ಒಂದೆರಡು ಪಂದ್ಯಗಳಿಗೆ ಅಮಾನತು ಮಾಡಬೇಕು. ಇಂತಹ ಕಠಿಣ ಶಿಕ್ಷೆಗಳ ಮೂಲಕ ಈ ರೀತಿಯ ಆಕ್ರಮಣಕಾರಿ ನಡೆಗಳನ್ನು ತಡೆಯಬಹುದು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
4 / 7
ಆದರೆ ಇಲ್ಲಿ ಇಬ್ಬರಿಗೂ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಇಲ್ಲಿ ಪಂದ್ಯದ ಶುಲ್ಕ ಎಷ್ಟು?. ಇದು ತುಂಬಾ ಕಠಿಣವಾದ ದಂಡ. ಇದಾಗ್ಯೂ ಇದು ಪುನರಾವರ್ತನೆಯಾಗದಂತೆ ಅವರು ಖಚಿತಪಡಿಸಿಕೊಳ್ಳಬೇಕು.
5 / 7
ಇದಕ್ಕಾಗಿ ಇಂತಹ ಅತಿರೇಕದ ವರ್ತನೆ ತೋರುವ ಆಟಗಾರರನ್ನು ಕೆಲ ಪಂದ್ಯಗಳಿಗೆ ನಿಷೇಧಿಸಬೇಕು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇತ್ತ ಗವಾಸ್ಕರ್ ಹೇಳಿಕೆಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 / 7
ಏಕೆಂದರೆ ಇಲ್ಲಿ ವಿರಾಟ್ ಕೊಹ್ಲಿ ಆಟಗಾರ. ಅದೇ ಗೌತಮ್ ಗಂಭೀರ್ ಮೆಂಟರ್. ಇಲ್ಲಿ ನಿಷೇಧ ಹೇರಿದರೆ ವಿರಾಟ್ ಕೊಹ್ಲಿಯನ್ನು ಒಂದೆರಡು ಪಂದ್ಯಗಳಿಂದ ಹೊರಗಿಡಬಹುದು. ಇದರಿಂದ ಆರ್ಸಿಬಿಗೆ ನಷ್ಟ. ಅದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ನಿಷೇಧಿಸಿದರೆ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
7 / 7
ಒಟ್ಟಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದ ಗೌತಮ್ ಗಂಭೀರ್ಗೆ ಲಕ್ನೋ ಮೈದಾನದಲ್ಲಿ ಭರ್ಜರಿ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಇದೇ ಖುಷಿಯಲ್ಲಿ ಆರ್ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಯ ನಡೆಗೆ ಫುಲ್ ಸಪೋರ್ಟ್ ವ್ಯಕ್ತಪಡಿಸುತ್ತಿದ್ದಾರೆ.
Published On - 11:09 pm, Sat, 6 May 23