ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದಆರಂಭಿಕ ಏಕದಿನ ವಿಶ್ವಕಪ್ ಪಂದ್ಯದಿಂದ ಶ್ರೀಲಂಕಾ ಸ್ಟಾರ್ ಸ್ನಿನ್ನರ್ ಮಹೇಶ್ ತೀಕ್ಷಣ ಹೊರಗುಳಿದಿದ್ದಾರೆ.
23 ವರ್ಷದ ಸ್ಪಿನ್ನರ್ ಏಷ್ಯಾಕಪ್ ಸಮಯದಲ್ಲಿ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಇದುವರೆಗೂ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಗಾಯದಿಂದಾಗಿ ಅವರು ಭಾರತದ ವಿರುದ್ಧ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿಯೂ ಆಡಿರಲಿಲ್ಲ.
ಕೇವಲ 27 ಏಕದಿನ ಪಂದ್ಯಗಳನ್ನಾಡಿರುವ ಮಹೇಶ್ ತೀಕ್ಷಣ 44 ವಿಕೆಟ್ಗಳನ್ನು ಪಡೆದಿದ್ದು ಶ್ರೀಲಂಕಾದ ಪ್ರಮುಖ ಬೌಲರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಇದೀಗ ವಿಶ್ವಕಪ್ನ ಆರಂಭಿಕ ಪಂದ್ಯಕ್ಕೆ ಅವರ ಗೈರು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಅವರ ಅನುಪಸ್ಥಿತಿಯು ಶ್ರೀಲಂಕಾದ ಸ್ಪಿನ್ ವಿಭಾಗವನ್ನು ದುರ್ಬಲಗೊಳಿಸಿದೆ. ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಹಸರಂಗಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಈವೆಂಟ್ ಮುಗಿಯುವ ಮೊದಲು ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗುತ್ತಾರೆ.
ಹಸರಂಗ ಅಲ್ಲದೆ ವೇಗಿ ದುಷ್ಮಂತ ಚಮೀರಾ ಕೂಡ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಏಕೆಂದರೆ ಅವರು ಕೂಡ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. ಏತನ್ಮಧ್ಯೆ, ಏಷ್ಯಾಕಪ್ನಲ್ಲಿ ಗಾಯಗೊಂಡಿದ್ದ ಲಹಿರು ಕುಮಾರ ಮತ್ತು ದಿಲ್ಶಾನ್ ಮಧುಶಂಕ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಅಕ್ಟೋಬರ್ 7 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವ ಶ್ರೀಲಂಕಾ, ಅಕ್ಟೋಬರ್ 10 ರಂದು ಹೈದರಾಬಾದ್ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.