Virat Kohli: ಪಂದ್ಯ ಮುಗಿದ ಬಳಿಕ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಕೋಪದಲ್ಲಿ ಆಡಿದ ಮಾತುಗಳೇನು ನೋಡಿ

Updated on: Apr 27, 2023 | 8:34 AM

RCB vs KKR, IPL 2023: ಐಪಿಎಲ್ 2023 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಟಗಾರರು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್​ 2023 ರಲ್ಲಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋತರೆ ಕೆಕೆಆರ್ 21 ರನ್​ಗಳ ಜಯ ಸಾಧಿಸಿತು.

ಇಂಡಿಯನ್ ಪ್ರೀಮಿಯರ್ ಲೀಗ್​ 2023 ರಲ್ಲಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋತರೆ ಕೆಕೆಆರ್ 21 ರನ್​ಗಳ ಜಯ ಸಾಧಿಸಿತು.

2 / 8

ಬೌಲಿಂಗ್​ನಲ್ಲಿ ಆರ್​ಸಿಬಿ ಬೌಲರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರೆ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಮತ್ಯಾರು ಸಾಥ್ ನೀಡಲಿಲ್ಲ. ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಆಡಿದರೆ ಮಾತ್ರ ಆರ್​ಸಿಬಿ ತಂಡಕ್ಕೆ ಜಯ, ಇಲ್ಲವಾದಲ್ಲಿ ಸೋಲು ಖಚಿತ ಎಂಬುದು ಮತ್ತೊಮ್ಮೆ ಸಾಭೀತಾಯಿತು.

3 / 8

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಟಗಾರರು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ. ಪಂದ್ಯವನ್ನು ನಮ್ಮ ಕೈಯಾರೆ ನಾವು ಕಳೆದುಕೊಂಡೆವು ಎಂದು ಹೇಳಿದ್ದಾರೆ.

4 / 8

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಆಟವನ್ನು ಅವರಿಗೆ ಬಿಟ್ಟುಕೊಟ್ಟೆವು. ನಾವು ಸೋಲಲು ಅರ್ಹರಾಗಿದ್ದೇವೆ. ಅವರಿಗೆ ಜಯವನ್ನು ಹಸ್ತಾಂತರಿಸಿದ ರೀತಿಯಿತ್ತು. ಗುಣಮಟ್ಟದ ಆಟವನ್ನು ನಾವು ಆಡಲಿಲ್ಲ. ಪಂದ್ಯವನ್ನು ಗಮನಿಸಿದರೆ ಅನೇಕ ಅವಕಾಶಗಳಲ್ಲಿ ಕೈಚೆಲ್ಲಿದೆವು ಎಂದು ಕೊಹ್ಲಿ ಹೇಳಿದ್ದಾರೆ.

5 / 8

ನಾವು ಕೆಲವು ಕ್ಯಾಚ್​ಗಳನ್ನು ಬಿಟ್ಟೆವು, ಇದರಿಂದ 25-30 ರನ್ ಹೆಚ್ಚು ಬಂದವು. ಅನಗತ್ಯ ಹೊಡೆತಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದೆವು. ಚೇಸಿಂಗ್ ಮಾಡುವಾಗ ವಿಕೆಟ್ ಕಳೆದುಕೊಂಡರೂ ಒಂದು ಜೊತೆಯಾಟ ಮುಖ್ಯವಾಗುತ್ತದೆ. ಆದರೆ, ಅದಿಂದು ಸಾಧ್ಯವಾಗಲಿಲ್ಲ- ವಿರಾಟ್ ಕೊಹ್ಲಿ.

6 / 8

ನಾವು ಒಂದು ಪಂದ್ಯ ಗೆಲ್ಲುತ್ತಿದ್ದೇವೆ ಮತ್ತೊಂದು ಪಂದ್ಯ ಸೋಲುತ್ತಿದ್ದೇವೆ. ಇದು ಒಳ್ಳೆಯ ವಿಷಯವಲ್ಲ. ನಾವು ರೇಸ್​ನಲ್ಲಿ ಉಳಿಯಬೇಕಾದರೆ ಮುಂಬರುವ ಪಂದ್ಯಗಳಲ್ಲಿ ಜಯ ಸಾಧಿಸಬೇಕಿದೆ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಹೇಳಿದ್ದಾರೆ.

7 / 8

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ಜೇಸನ್ ರಾಯ್ ಅವರ 56 ರನ್, ನಾಯಕ ನಿತೀಶ್ ರಾಣ ಅವರ 48 ಹಾಗೂ ವೆಂಕಟೇಶ್ ಅಯ್ಯರ್ ಅವರ 31 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಆರ್​ಸಿಬಿ ಪರ ಹಸರಂಗ ಹಾಗೂ ವಿಜಯ್​ಕುಮಾರ್ ತಲಾ 2 ವಿಕೆಟ್ ಪಡೆದರು.

8 / 8

ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರ್ ಗಳಿಸಿದಗ್ದು ಬಿಟ್ಟರೆ ಮಹಿಪಾಲ್ ಲುಮ್ರೂರ್ 34 ಹಾಗೂ ದಿನೇಶ್ ಕಾರ್ತಿಕ್ 22 ರನ್ ಗಳಿಸಿದರಷ್ಟೆ. ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೆ ಶಕ್ತವಾಯಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರು.

Loading...
Unable to load recommendations.
Follow Us